ಕಟ್ಟಡ ನಿರ್ಮಾಣಕ್ಕೆ ಇನ್ನೂ ಅಂತಿಮಗೊಳ್ಳದ ನಿವೇಶನ
ಬಂಟ್ವಾಳ ಸಂಚಾರ ಪೊಲೀಸ್ ಠಾಣೆ
Team Udayavani, Nov 10, 2021, 5:20 AM IST
ಬಂಟ್ವಾಳ: ಬಂಟ್ವಾಳಕ್ಕೆ ಸಂಚಾರ ಪೊಲೀಸ್ ಠಾಣೆ ಮಂಜೂರುಗೊಂಡು 7 ವರ್ಷ ಕಳೆದರೂ ಇನ್ನೂ ಸ್ವಂತ ಕಟ್ಟಡಕ್ಕೆ ನಿವೇ ಶನವೇ ಅಂತಿಮಗೊಂಡಿಲ್ಲ. ಈಗಾ ಗಲೇ ಸಾಕಷ್ಟು ಕಡೆಗಳಲ್ಲಿ ಜಾಗ ಗುರುತಿ ಸಿದರೂ, ಅದು ಠಾಣೆಯ ಕಾರ್ಯ ನಿರ್ವಹಣೆಗೆ ಸೂಕ್ತವಾಗದ ಹಿನ್ನೆಲೆಯಲ್ಲಿ ಇನ್ನೂ ಹುಡುಕಾಟದ ಹಂತದಲ್ಲೇ ಇದೆ.
ಬಂಟ್ವಾಳ ಗ್ರಾಮಾಂತರ ಹಾಗೂ ನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ರಸ್ತೆ ಸಂಚಾರ ವ್ಯವಸ್ಥೆಯನ್ನು ಸಂಚಾರ ಠಾಣೆ ನೋಡಿಕೊಳ್ಳುತ್ತಿದ್ದು, ರಾ.ಹೆ.75ರ ಮೆಲ್ಕಾರ್ ಸಮೀಪದಲ್ಲಿನ ಬಾಡಿಗೆ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಈ ಬಾಡಿಗೆ ಕಟ್ಟಡವು ಸೋರುತ್ತಿದ್ದು, ಮಳೆಯಿಂದ ರಕ್ಷಣೆ ಪಡೆದುಕೊಳ್ಳಲು ಟರ್ಪಾಲು ಬಳಸಬೇಕಾದ ಸ್ಥಿತಿ ಇದೆ.
ಸಾಮಾನ್ಯವಾಗಿ ಪೊಲೀಸ್ ಠಾಣೆಗಳು ಪ್ರಮುಖ ಹೆದ್ದಾರಿ, ರಸ್ತೆಯ ಪಕ್ಕದಲ್ಲೇ ಇರಬೇಕಾಗಿದೆ. ಆದರೆ ಬಂಟ್ವಾಳ ಸುತ್ತಮುತ್ತಲ ಪ್ರದೇಶದಲ್ಲಿ ಠಾಣೆಗೆ ಸೂಕ್ತವಾದ ಸರಕಾರಿ ಜಾಗ ಲಭ್ಯವಾಗದೇ ಇರುವುದರಿಂದ ಸಮಸ್ಯೆಯಾಗಿದೆ.
ವಾಹನ ನಿಲುಗಡೆಗೂ ಅವಕಾಶ
ಸಂಚಾರ ಪೊಲೀಸ್ ಠಾಣೆ ಎಂದರೆ ಅದಕ್ಕೆ ಕಟ್ಟಡಕ್ಕಿಂತಲೂ ಹೆಚ್ಚಿನ ಸ್ಥಳವಕಾಶ ವಾಹನ ನಿಲುಗಡೆಗೆ ಬೇಕಾಗುತ್ತದೆ. ಅಪಘಾತಗಳು ನಡೆದಾಗ ವಾಹನಗಳನ್ನು ಠಾಣೆಗೆ ತಂದು ನಿಲ್ಲಿಸಬೇಕಿದ್ದು, ದ್ವಿಚಕ್ರ ವಾಹನದಿಂದ ಹಿಡಿದು ಬಸ್-ಲಾರಿಯನ್ನೂ ಠಾಣೆಯಲ್ಲಿ ನಿಲ್ಲಿಸಬೇಕಾಗುತ್ತದೆ. ಹೀಗಾಗಿ ಅವುಗಳಿಗೆ ಹೆಚ್ಚಿನ ಜಾಗ ಬೇಕಾಗುತ್ತದೆ.
ಕೆಲವೊಂದು ವಾಹನಗಳು ಒಂದೆರಡು ದಿನಗಳಲ್ಲಿ ಬಿಡುಗಡೆಗೊಂಡರೆ, ಇನ್ನು ಕೆಲವು ಹಲವು ಸಮಯಗಳವರೆಗೆ ಅಲ್ಲೇ ಇರುತ್ತವೆ. ಹೀಗಾಗಿ ಕೊಂಚ ವಿಸ್ತಾರವಾದ ಹಾಗೂ ರಸ್ತೆ ಬದಿಯಲ್ಲೇ ಇರುವ ಜಾಗ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಹಿಂದೆ ಗುರುತಿಸಲಾದ ಯಾವುದೇ ನಿವೇಶನಗಳು ಠಾಣೆಗೆ ಸೂಕ್ತವಾಗದ ಕಾರಣದಿಂದ ಇನ್ನೂ ಕೂಡ ಹುಡುಕಾಟ ಮುಂದುವರಿದಿದೆ.
ಇದನ್ನೂ ಓದಿ:ಇನ್ಸ್ಟಾಗ್ರಾಂ ಡೌನ್ಲೋಡ್ಗೆ ಭಾರತವೇ ಫಸ್ಟ್
ಒಂದು ನಿವೇಶನ
ಮಂಜೂರಾಗಿದೆ
ಪಾಣೆಮಂಗಳೂರು ಗೂಡಿನಬಳಿಯಲ್ಲಿ ನೇತ್ರಾವತಿ ನದಿ ಕಿನಾರೆಯಲ್ಲಿದ್ದ ಪಶು ಇಲಾಖೆಯ ಹಳೆಯ ಕಟ್ಟಡದ ನಿವೇಶನ ಬಂಟ್ವಾಳ ಸಂಚಾರಿ ಪೊಲೀಸ್ ಠಾಣೆಗೆ ಮಂಜೂರಾಗಿತ್ತು. ಆದರೆ ಅಲ್ಲಿ ಠಾಣೆಗೆ ಬೇಕಾದಷ್ಟು ಸ್ಥಳ ಇಲ್ಲದೇ ಇರುವುದರಿಂದ ಅದು ಹಾಗೇ ಉಳಿದುಕೊಂಡಿದೆ. ಈ ನಿವೇಶನದಲ್ಲಿ ಪಾಳುಬಿದ್ದ ಕಟ್ಟಡವಿದ್ದು, ಜಾಗವು ಒತ್ತುವರಿಯಾಗುವ ಆತಂಕವೂ ಎದುರಾಗಿತ್ತು. ಪೊಲೀಸ್ ಇಲಾಖೆಯು ಆ ಜಾಗವನ್ನು ಸದ್ಬಳಕೆ ಮಾಡಿಕೊಂಡು ಪ್ರಸ್ತುತ ಪಾಳು ಬಿದ್ದ ಕಟ್ಟಡವನ್ನು ದುರಸ್ತಿ ಮಾಡುವ ಕಾರ್ಯ ಮಾಡಿದೆ. ಜತೆಗೆ ಬಂಟ್ವಾಳದ ಬಂದೋಬಸ್ತಿಗೆ ಆಗಮಿಸುವ ಕೆಎಸ್ಆರ್ಪಿ ಸಿಬಂದಿ ಆ ನವೀಕೃತ ಕಟ್ಟಡದಲ್ಲಿ ವಾಸ್ತವ್ಯ ಪಡೆಯುತ್ತಿದ್ದಾರೆ. ಮೊದಲಾದರೆ ಅವರು ಬಂಟ್ವಾಳ ಸುತ್ತಮುತ್ತಲಿನ ಸಭಾಂಗಣಗಳಲ್ಲಿ ವಾಸ್ತವ್ಯ ಹೂಡಬೇಕಿದ್ದು, ಅಲ್ಲಿ ಸಮಾರಂಭವಿದ್ದರೆ ಮತ್ತೂಂದಕ್ಕೆ ಹೋಗಬೇಕಾದ ಸ್ಥಿತಿ ಇತ್ತು.
ಸಮಯ ತೆಗೆದುಕೊಳ್ಳಲಿದೆ
ಬಂಟ್ವಾಳ ಸಂಚಾರ ಪೊಲೀಸ್ ಠಾಣೆಗೆ ಸೂಕ್ತವಾದ ನಿವೇಶನ ಸಿಗಬೇಕಿದ್ದು, ಅದರ ಬಳಿಕವೇ ಅಂತಿಮಗೊಳಿಸಲಾಗುತ್ತದೆ. ಹೀಗಾಗಿ ನಿವೇಶನ ಅಂತಿಮಗೊಳಿಸುವುದಕ್ಕೆ ಸ್ವಲ್ಪ ಸಮಯ ತೆಗೆದುಕೊಳ್ಳುವ ಸಾಧ್ಯತೆ ಇದೆ.
-ಹೃಷಿಕೇಶ್ ಭಗವಾನ್ ಸೋನಾವಣೆ,
ಪೊಲೀಸ್ ವರಿಷ್ಠಾಧಿಕಾರಿ, ದ.ಕ.
-ಕಿರಣ್ ಸರಪಾಡಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಅಡಕೆ-ಕಾಫಿ ಬೆಳೆಗಾರರ ಸಂಕಷ್ಟಕ್ಕೆ ಬಿಜೆಪಿ ಏಕೆ ಸ್ಪಂದಿಸಿಲ್ಲ: ಜಯಪ್ರಕಾಶ್ ಹೆಗ್ಡೆ
Lok Sabha Election: ಕಾಂಗ್ರೆಸ್ನಿಂದ ಜನರಿಗೆ ಸುಳ್ಳಿನ ಗ್ಯಾರಂಟಿ: ಗಾಯಿತ್ರಿ ಸಿದ್ದೇಶ್ವರ
Udupiಗೆ ಸರಕಾರಿ ವೈದ್ಯಕೀಯ ಕಾಲೇಜು, ಎಂಜಿನಿಯರಿಂಗ್ ಕಾಲೇಜು: ಜಯಪ್ರಕಾಶ್ ಹೆಗ್ಡೆ
Malaysia ನೌಕಾಪಡೆಯ 2 ಹೆಲಿಕಾಪ್ಟರ್ ಪತನ; 10 ಮಂದಿ ಮೃತ್ಯು, ಭಯಾನಕ ವಿಡಿಯೋ ಸೆರೆ
BJP ಯಿಂದ ನಿರ್ಲಕ್ಷ್ಯ… ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಕೆ.ಪಿ.ನಂಜುಂಡಿ