ಪೌರ ಕಾರ್ಮಿಕರ ವಿಶ್ರಾಂತಿ ಕೊಠಡಿ ಅವ್ಯವಸ್ಥೆಯ ಆಗರ
Team Udayavani, May 27, 2020, 9:28 PM IST
ಬೆಳ್ತಂಗಡಿ: ಪೌರ ಕಾರ್ಮಿಗೆ ನಿರ್ಮಿಸಿದ ವಿಶ್ರಾಂತಿ ಕೊಠಡಿ ಆವರಣದಲ್ಲಿ ಮದ್ಯದ ಬಾಟಲಿಗಳ ರಾಶಿ.
ಬೆಳ್ತಂಗಡಿ: ಪೌರ ಕಾರ್ಮಿಕರ ವಿಶ್ರಾಂತಿಗೆಂದು ಬಸ್ ನಿಲ್ದಾಣ ಸಮೀಪ ನಿರ್ಮಿಸಿದ ವಿಶ್ರಾಂತಿ ಕೊಠಡಿ ಗಬ್ಬು ನಾರುತ್ತಿದ್ದು, ಬಳಕೆಗೆ ಯೋಗ್ಯವಿಲ್ಲದಂತಾಗಿದೆ. ಪಟ್ಟಣದ ಸ್ವಚ್ಛತೆಗಾಗಿ ಹಗಲಿರುಳು ಶ್ರಮಿಸುತ್ತಿರುವ ಪೌರ ಕಾರ್ಮಿಕರ ರಕ್ಷಣೆಯಲ್ಲಿ ಪ.ಪಂ. ನಿರ್ಲಕ್ಷ್ಯ ವಹಿಸಿದೆಯೋ ಎಂಬಂತೆ ಇದು ಭಾಸವಾಗುತ್ತಿದೆ.
ಸಾರ್ವಜನಿಕರ ತೆರಿಗೆಯಲ್ಲಿ ಸಂಗ್ರಹವಾದ ಸರಕಾರದ ಹಣದಿಂದ ಪೌರಕಾರ್ಮಿಕರಿಗೆ ವಿಶ್ರಾಂತಿ ಕೊಠಡಿ ನಿರ್ಮಿಸಲಾಗಿದೆ. ಆದರೆ ವಿಶ್ರಾಂತಿ ಕೊಠಡಿ ಸುತ್ತ ಮದ್ಯದ ಬಾಟಲಿಗಳು ರಾಶಿ ಬಿದ್ದಿವೆ. ನಗರದ ಸ್ವತ್ಛತೆಗೆ ಧ್ವನಿವರ್ಧಕ ಮೂಲಕ ಜಾಗೃತಿ ಮೂಡಿಸಲಾಗುತ್ತಿದ್ದರೂ ಇತ್ತ ಪ.ಪಂ. ಅಧೀನದಲ್ಲಿರುವ ಕಟ್ಟಡಗಳು ರೋಗ ಉಲ್ಬಣ ಕೇಂದ್ರಗಳಾಗಿ ಪರಿವರ್ತನೆಯಾಗುತ್ತಿವೆ ಎಂದು ಸಾರ್ವಜನಿಕರು ಅಮಾಧಾನ ಹೊರಹಾಕಿದ್ದಾರೆ. ಈ ಕುರಿತು ಅಧಿಕಾರಿಗಳು ಮೌನ ವಹಿಸಿದ್ದಾರೆ. ಲಕ್ಷಾಂತರ ಮೌಲ್ಯದ ಕಟ್ಟಡಗಳು ಕೇವಲ ಹೆಸರಿಗೆ ಮಾತ್ರ ಎಂಬಂತಾಗಿದೆ.
ಮಳೆಗಾಲಕ್ಕೂ ಮುನ್ನ ಈ ಕುರಿತು ಪ.ಪಂ. ಮುಖ್ಯಾಧಿಕಾರಿಯವರು ಗಮನಿಸಿ ತೆರವುಗೊಳಿಸದಿದ್ದಲ್ಲಿ ಮಲೇರಿಯಾ, ಕಾಲರಾ, ಡೆಂಗ್ಯೂ ಕೇಂದ್ರವಾಗಲಿದೆ.