ವಿಕಲ ಚೇತನರ ದ್ವಿಚಕ್ರ ವಾಹನ ವಿತರಣೆ ಕಾರ್ಯಕ್ರಮದಲ್ಲಿ ಫಲಾನುಭವಿಯ ಪರ್ಸ್ ಎಗರಿಸಿದ ಕಳ್ಳ!
Team Udayavani, Oct 16, 2021, 4:20 PM IST
ಸಾಂದರ್ಭಿಕ ಚಿತ್ರ
ಬಂಟ್ವಾಳ: ವಿಕಲಚೇತನ ಫಲಾನುಭವಿಗಳಿಗೆ ನೀಡುವ ದ್ವಿಚಕ್ರವಾಹನ ವಿತರಣೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಫಲಾನುಭವಿಯೋರ್ವಳ ಪರ್ಸ್ ಕಳವು ಮಾಡಿದ ಘಟನೆ ನಡೆದಿದೆ.
ವಿಟ್ಲ ಪಡ್ನೂರು ನಿವಾಸಿ ವಿಕಲಚೇತನ ಫಲಾನುಭವಿ ಯಶೋಧ ಬಿ ಅವರು ಶಾಸಕರ ಕೈಯಿಂದ ದ್ವಿ ಚಕ್ರವಾಹನದ ಕೀಲಿ ಕೈ ವಿತರಿಸುವ ವೇಳರ ಫಲಾನುಭವಿ ತನ್ನ ಪರ್ಸ್ ನ್ನು ಅಲ್ಲೇ ಕೆಳಗೆ ಇಟ್ಟಿದ್ದರು. ಆದರೆ ವಾಹನ ಕೀ ಪಡೆದು ನೋಡುವಷ್ಟರಲ್ಲಿ ಪರ್ಸ್ ಮಾಯವಾಗಿತ್ತು. ಪರ್ಸ್ ನಲ್ಲಿ ನಗದು ಹಣ ಹಾಗೂ ಎ.ಟಿ.ಎಂ.ಕಾರ್ಡ್ ಇತ್ತು ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.
ಸಿ.ಸಿ.ಕ್ಯಾಮರಾ ದಲ್ಲಿ ಸೆರೆ:
ಇಬ್ಬರು ವ್ಯಕ್ತಿಗಳು ಪರ್ಸ್ ಕಳವು ಮಾಡುವ ದೃಶ್ಯ ಶಾಸಕರ ಕಚೇರಿ ಯ ಸಿ.ಸಿ.ಕ್ಯಾಮರಾ ದಲ್ಲಿ ಸೆರೆಯಾಗಿದೆ. ಫಲಾನುಭವಿಗಳಿಗೆ ಕೀಲಿ ಕೈ ಕೊಡುವ ಸಂದರ್ಭದಲ್ಲಿ ಹೊಂಚು ಹಾಕಿ ಪರ್ಸ್ ಕಳವು ಮಾಡಿ ಪರಾರಿಯಾಗಿದ್ದಾರೆ.
ಈ ಪರ್ಸ್ ಇಲ್ಲಿನ ಬಾರ್ ಎಂಡ್ ರೆಸ್ಟೋರೆಂಟ್ ಒಂದರಲ್ಲಿ ಸಿಕ್ಕಿದ್ದು, ಅದರೊಳಗೆ ಇದ್ದ ನಗದು ಹಣ ಹಾಗೂ ಎಟಿಎಂ ಕಾರ್ಡ್ ಕಾಣೆಯಾಗಿದೆ, ಕೇವಲ ಪರ್ಸ್ ಮಾತ್ರ ಬಿಟ್ಟು ಹೋಗಿದ್ದು , ಕಳ್ಳರಿಗಾಗಿ ಪೋಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.
ಈ ಬಗ್ಗೆ ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
K. Jayaprakash Hegde; ಮೀನುಗಾರಿಕೆ, ಪ್ರವಾಸೋದ್ಯಮದ ಅಭಿವೃದ್ದಿಗೆ ಹೆಚ್ಚಿನ ಆಧ್ಯತೆ
Amit Shah: 2024ರ ಚುನಾವಣೆಯಲ್ಲಿ ಎನ್ ಡಿಎಗೆ 400ಕ್ಕೂ ಅಧಿಕ ಸ್ಥಾನ ಖಚಿತ: ಶಾ
ಕ್ರಿಕೆಟ್ ಬಗ್ಗೆ ಕಿಂಚಿತ್ತೂ ಜ್ಞಾನವಿಲ್ಲದ ವ್ಯಕ್ತಿಗೆ ಡ್ರೀಮ್11ನಲ್ಲಿ ಒಲಿಯಿತು 1.5 ಕೋಟಿ
IPL; ಸ್ಟಾಯಿನಿಸ್ ಏಟಿಗೆ ತವರಲ್ಲೆ ಚಾಂಪಿಯನ್ ಚೆನ್ನೈ ಠುಸ್!
Congress vs BJP; ಬ್ರಹ್ಮಾವರದಲ್ಲಿ ಶಕ್ತಿ ಪ್ರದರ್ಶನದ ವೇದಿಕೆ!