ಮಳೆ ಮಧ್ಯೆ ಬೆಳ್ತಂಗಡಿ ಟ್ರಾಫಿಕ್ ಜಾಮ್
Team Udayavani, Jun 28, 2021, 11:08 AM IST
ಬೆಳ್ತಂಗಡಿ: ಮಳೆ ಮಧ್ಯೆಯೂ ಬೆಳ್ತಂಗಡಿ ಮುಖ್ಯ ಪೇಟೆಯಲ್ಲಿ ಸೋಮವಾರ ವಾಹನಗಳು ರಸ್ತೆಯಲ್ಲಿ ಸಾಲುಗಟ್ಟಿ ಟ್ರಾಫಿಕ್ ಜಾಮ್ ಉಂಟಾಗಿದ್ದು ಕೋವಿಡ್ ಆತಂಕವನ್ನೆ ಜನ ಮರೆತಂತೆ ಕಂಡುಬಂದಿದೆ.
ಕಳೆದ ಎರಡು ತಿಂಗಳಿಂದ ಲಾಕ್ ಡೌನ್ ನಿಂದಾಗಿ ಜನ ಸಾಮಾನ್ಯರು ಮನೆಯಿಂದ ಹೊರಬಂದಿರಲಿಲ್ಲ. ಅನೇಕ ಸರಕಾರಿ, ಕೃಷಿ ಚಟುವಟಿಕೆ ಕೆಲಸ ಕಾರ್ಯಗಳಿಗೆ ಅಡೆತೇಯಾಗಿತ್ತು. ಇದೀಗ ಲಾಕ್ ಡೌನ್ ನಿಯಮ ಸಡಿಲಿಕೆಯಾದಂತೆ ಪೇಟೆಗಳು ವಾಹನಗಳಿಂದ ತುಂಬಿ ತುಳುಕುತ್ತಿವೆ.
ಬೆಳ್ತಂಗಡಿಯಲ್ಲಿ ಸೋಮವಾರ ಸಂತೆ ಖರೀದಿ ಮೂಡನಿಂದ ಹೊರಬಂದಂತೆ ಕಾಣುತ್ತಿಲ್ಲ.
ಸೋಮವಾರ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ವಿದ್ಯಾರ್ಥಿಗಳಿಗೆ ಲಸಿಕೆ ಅಭಿಯಾನಕ್ಕೆ ಚಾಲನೆ ಹಾಗೂ ಕೃಷಿ ಇಲಾಖೆಯಡಿ ಹಡೀಲು ಬಿದ್ದ ಭೂಮಿಯಲ್ಲಿ ಭತ್ತ ಬೆಳೆಯುವ ಅಭಿಯಾನಕ್ಕೆ ಆಗಮಿಸಲಿದ್ದು ಟ್ರಾಫಿಕ್ ಜಾಮ್ ನಡಿ ನಿಗದಿ ಸಮಯಕ್ಕೆ ತೆರಳುವಲ್ಲಿ ಅಡ್ಡಿಯಾಯಿತು.
ಗುರುವಾಯನಕೆರೆಯಿಂದ-ಬೆಳ್ತಂಗಡಿಯಲ್ಲಿ ಟ್ರಾಫಿಕ್ ಜಾಮ್ ಉಂಟಾಯಿತು. ಬೆಳ್ತಂಗಡಿ- ಮಂಗಳೂರು ಕೆ.ಎಸ್.ಆರ್.ಟಿ.ಸಿ. ಬಸ್ ಗಳಲ್ಲೂ ನಿಗದಿಗಿಂತ ಹೆಚ್ಚಿನ ಜನ ಹೇರಿರುವುದು ಕಂಡುಬಂತು.
ಬೆಳ್ಳಂಬೆಳಗ್ಗೆ ಜನ ತರಕಾರಿ, ಅಗತ್ಯ ಖರೀದಿಗೆ ಮುಗಿಬುದ್ದಿರುವುದು ಕಂಡುಬಂತು.