ಬಿ.ಸಿ.ರೋಡ್-ಅಡ್ಡಹೊಳೆ ಹೆದ್ದಾರಿ ; ಈ ರಸ್ತೆಯಲ್ಲಿ ಸಂಚಾರವೆಂದರೆ ಸರ್ಕಸ್!
ತೇಪೆ ಕಾರ್ಯಕ್ಕೂ ಮಳೆ ಅಡ್ಡಿ
Team Udayavani, Oct 17, 2020, 6:00 AM IST
ರಾಷ್ಟ್ರೀಯ ಹೆದ್ದಾರಿಯ ಬಿ.ಸಿ.ರೋಡ್ ಜಂಕ್ಷನ್ನಲ್ಲಿರುವ ಬೃಹದಾಕಾರದ ಹೊಂಡಗಳು
ಬಂಟ್ವಾಳ: ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯು ಬಿ.ಸಿ. ರೋಡ್ - ಅಡ್ಡಹೊಳೆ ಮಧ್ಯೆ ಸಂಪೂರ್ಣ ಹದಗೆಟ್ಟಿದ್ದು, ಬೃಹದಾ ಕಾರದ ಹೊಂಡಗಳು ವಾಹನ ಚಾಲಕರು /ಸವಾರರನ್ನು ಹೈರಾಣಾಗಿಸಿವೆ. ಬಿ.ಸಿ.ರೋಡ್ನಿಂದ ಗುಂಡ್ಯ ವರೆಗೆ ಹೊಂಡಗಳೇ ತುಂಬಿ ಕೊಂಡಿವೆ.
ಹೆದ್ದಾರಿಯ ಅವ್ಯವಸ್ಥೆಗೆ ಕೊಂಚ ಮುಕ್ತಿ ನೀಡುವ ಹಿನ್ನೆಲೆಯಲ್ಲಿ ಅ. 1ರಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್ಎಚ್ಎಐ)ವು ತೇಪೆ ಕಾರ್ಯ ಆರಂಭಿಸಿತ್ತು. ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯ ಪರಿಣಾಮ ಅದು ಕೂಡ ಸ್ಥಗಿತಗೊಂಡಿದೆ. ಮಳೆ ಹೀಗೇ ಮುಂದುವರಿದರೆ ತೇಪೆ ಕಾರ್ಯ ಮತ್ತಷ್ಟು ವಿಳಂಬ ವಾಗಲಿದೆ. ತೇಪೆ ಕಾರ್ಯದ ಬಳಿ ಸಂಪೂರ್ಣ ಡಾಮ ರೀಕರಣ ಯೋಜನೆ ಇದ್ದರೂ ಮಳೆಯನ್ನು ಅವಲಂಬಿಸಿದೆ ಎಂದು ಅಧಿಕಾರಿಗಳು ಅಭಿಪ್ರಾಯಿಸುತ್ತಿದ್ದಾರೆ.
ಬಿ.ಸಿ.ರೋಡ್ ಪೇಟೆಯಲ್ಲೇ ಬೃಹದಾಕಾರದ ಹೊಂಡಗಳಿದ್ದು, ಮಳೆ ನೀರು ತುಂಬಿರುವುದರಿಂದ ಆಳದ ಅರಿವಿಲ್ಲದೆ ಹೊಂಡಕ್ಕೆ ಬಿದ್ದು ಏಳುವ ಸಾಕಷ್ಟು ವಾಹನಗಳು ಹಾನಿಗೀಡಾಗಿದೆ. ನಿತ್ಯವೂ ದ್ವಿಚಕ್ರ ವಾಹನಗಳು ಬಿದ್ದು ಸವಾರರು ಗಾಯಗೊಳ್ಳುತ್ತಿದ್ದಾರೆ. ದುಬಾರಿ ಕಾರುಗಳಲ್ಲಿ ಇದೇ ದಾರಿಯಾಗಿ ಸಂಚರಿಸಿದರೂ ಜನಪ್ರತಿನಿಧಿಗಳಿಗೆ ಮಾತ್ರ ಇದಾವುದೂ ಅರಿವಾಗುವುದಿಲ್ಲ ಎಂದು ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಚತುಷ್ಪಥ ವಿಳಂಬ
ಹೆದ್ದಾರಿ ಪ್ರಾಧಿಕಾರ ಕೆಲವು ವರ್ಷಗಳ ಹಿಂದೆ ಬಿ.ಸಿ.ರೋಡ್- ಅಡ್ಡಹೊಳೆ ನಡುವಿನ 63 ಕಿ.ಮೀ.ಯನ್ನು ಚತುಷ್ಪಥಗೊಳಿಸಲಾರಂಭಿಸಿದ್ದು, ಹೆದ್ದಾರಿ ಯನ್ನು ಅಗೆದು ಮೋರಿಗಳನ್ನು ಅಳವಡಿಸ ಲಾಗಿದೆ. ಅಲ್ಲೆಲ್ಲಾ ಬೃಹತ್ ಹೊಂಡಗಳು ಕಾಣಿಸಿಕೊಂಡಿವೆ. ಪ್ರಸ್ತುತ ಹಿಂದಿನ ಕಾಮಗಾರಿ ಸ್ಥಗಿತಗೊಂಡಿದೆ. ಹೊಸ ಕಾಮಗಾರಿ ಆರಂಭಗೊಂಡಿಲ್ಲ. ಆರಂಭಿಸುವಂತೆ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಿದ್ದರೂ ಪ್ರಕ್ರಿಯೆಗಳೆಲ್ಲ ನಡೆದು ಆರಂಭವಾಗಬೇಕಾದರೆ ಮತ್ತಷ್ಟು ವಿಳಂಬ ಖಚಿತ. ಈನಡುವೆ ಭೂಸ್ವಾಧೀನ ಪ್ರಕ್ರಿಯೆಯೂ ನಡೆಯಬೇಕಿದೆ.
1 ತಿಂಗಳ ಬಿಸಿಲು ಅಗತ್ಯ
ದ.ಕ. ಜಿಲ್ಲೆಯ ವಾತಾವರಣದಲ್ಲಿ ರಸ್ತೆಗೆ ಡಾಮರು ಅಥವಾ ತೇಪೆ ಕಾರ್ಯ ನಡೆದು ಒಂದು ತಿಂಗಳು ಬಿಸಿಲು ಬಿದ್ದರೆ ಮಾತ್ರ ಗಟ್ಟಿಯಾಗಿ ನಿಲ್ಲುತ್ತದೆ. ಬಿಸಿಲಿನ ತಾಪಕ್ಕೆ ಡಾಮರು ಕರಗಿ ಜಲ್ಲಿಗಳ ಮಧ್ಯೆ ಸೀಲ್ ಆದಾಗ ಮಾತ್ರ ರಸ್ತೆ ಸದೃಢ ವಾಗುತ್ತದೆ. ಆದರೆ ಇಲ್ಲಿ ಆಗಾಗ ಸುರಿಯುವ ಮಳೆಯಿಂದಾಗಿ ಜಲ್ಲಿಗಳ ಮಧ್ಯೆ ನೀರು ಸೇರಿಕೊಂಡು ಕೆಲವೇ ದಿನಗಳಲ್ಲಿ ಡಾಮರು ಎದ್ದುಹೋಗುತ್ತದೆ. ಆದರೆ ಇದನ್ನು ಅರಿಯದ ಜನಸಾಮಾನ್ಯರು ಕಳಪೆ ಕಾಮಗಾರಿಯಿಂದಾಗಿ ಹೀಗಾಗಿದೆ ಎಂದುಕೊಳ್ಳುತ್ತಾರೆ.
– ರಮೇಶ್ಬಾಬು ತಾಂತ್ರಿಕ ವ್ಯವಸ್ಥಾಪಕರು, ಎನ್ಎಚ್ಎಐ, ಮಂಗಳೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ