ನ.ಪಂ ಆವರಣದಲ್ಲೆ ಕಸದ ರಾಶಿ ತತ್ಕ್ಷಣ ಸ್ಥಳಾಂತರಿಸಿ: ಸೂಚನೆ
Team Udayavani, Jun 2, 2019, 6:00 AM IST
ಸುಳ್ಯ: ನಗರ ಪಂಚಾಯತ್ ಆವರಣದಲ್ಲಿ ರಾಶಿ ಬಿದ್ದು ದುರ್ವಾಸನೆ ಬೀರುತ್ತಿರುವ ತ್ಯಾಜ್ಯ ಮಿಶ್ರಿತ ಕಸವನ್ನು ತತ್ಕ್ಷಣ ಸ್ಥಳಾಂತರಿಸುವಂತೆ ನಗರಾಭಿವೃದ್ಧಿ ಸಚಿವ ಯು.ಟಿ. ಖಾದರ್ ಅವರು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ.
ಕಸದ ರಾಶಿ ಬಗ್ಗೆ ಮಾಹಿತಿ ಪಡೆದು ಸ್ಥಳಕ್ಕೆ ಭೇಟಿ ನೀಡಿದ ಸಚಿವರು, ನ.ಪಂ. ಕಚೇರಿ ಮುಂಭಾಗದ ಪ್ರವೇಶ ದ್ವಾರದ ಸನಿಹದ ಶೆಡ್ನಲ್ಲಿ ರಾಶಿ ಬಿದ್ದಿರುವ ಕಸ, ತ್ಯಾಜ್ಯ ಕಂಡು ಗರಂ ಆದರು. ನಗರದ ಕಸವನ್ನು ಇಲ್ಲಿ ಬೇರ್ಪಡಿಸುವಿಕೆ ವಿಧಾನವೇ ಸರಿಯಾದ ಕ್ರಮ ಅಲ್ಲ. ಒಂದು ವೇಳೆ ಬೇರ್ಪಡಿಸಿದರೂ ಅರ್ಧ ತಾಸಿನಲ್ಲಿ ವಿಲೇ ಮಾಡಬೇಕಿತ್ತು.
ಈಗ ಇಲ್ಲಿ ರಾಶಿ ಬಿದ್ದಿರುವ ಕಸವನ್ನು ಈ ಹಿಂದೆ ಎಲ್ಲಿ ಹಾಕುತ್ತಿದ್ದಿರೋ ಅಲ್ಲಿಗೆ ಸ್ಥಳಾಂತರಿಸುವಂತೆ ಸಚಿವರು ಎಂಜಿನಿಯರ್ಗೆ ಸೂಚನೆ ನೀಡಿದರು. ತ್ಯಾಜ್ಯದಿಂದ ಸೊಳ್ಳೆಗಳು ತುಂಬಿವೆ. ಇದರಿಂದ ಉಂಟಾಗಬಹುದಾದ ಪರಿಣಾಮಗಳು ಅಧಿಕಾರಿಗಳು ಏಕೆ ಯೋಚಿಸಿಲ್ಲ ಎಂದು ಪ್ರಶ್ನಿಸಿದರು. ತ್ಯಾಜ್ಯ ಡಂಪ್ ಮಾಡುತ್ತಿದ್ದ ಕಲ್ಚಪೆì ಭರ್ತಿ ಆಗಿರುವ ಕಾರಣ ಸ್ಥಳದ ಸಮಸ್ಯೆ ಇದೆ ಎಂದು ಎಂಜಿನಿಯರ್ ಗಮನ ಸೆಳೆದರು.
ಶಾಸಕ ಅಂಗಾರ, ಇಲ್ಲಿ ಕಸ ತಂದು ರಾಶಿ ಹಾಕಬೇಡಿ. ಈ ಹಿಂದಿನ ಸ್ಥಳಕ್ಕೆ ಕೊಂಡು ಹೋಗಿ ಬೇರ್ಪಡಿಸಲು ಕ್ರಮ ಕೈಗೊಳ್ಳಿ. ಕಲ್ಲು ಕೋರೆ ಆಳ ಪ್ರದೇಶಗಳಿದ್ದರೆ ವಿಲೇ ಮಾಡಲು ಅನುಕೂಲ. ಈ ಬಗ್ಗೆ ಪರಿಶೀಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ತಹಶೀಲ್ದಾರ್ ಕುಂಞಿ ಅಹ್ಮದ್, ತಾ.ಪಂ. ಅಧ್ಯಕ್ಷ ಚನಿಯ ಕಲ್ತಡ್ಕ, ಜಿ.ಪಂ. ಸದಸ್ಯರಾದ ಎಸ್.ಎನ್. ಮನ್ಮಥ, ಪುಷ್ಪಾವತಿ ಬಾಳಿಲ, ನ.ಪಂ. ಸದಸ್ಯರಾದ ಎಂ. ವೆಂಕಪ್ಪ ಗೌಡ, ಬಾಲಕೃಷ್ಣ ಭಟ್ ಕೊಡಂಕೇರಿ, ಶರೀಪ್ ಕಂಠಿ, ಡೇವಿಡ್ ಧೀರಾ ಕ್ರಾಸ್ತಾ, ಟಿ.ಎಂ. ಶಹೀದ್ ಉಪಸ್ಥಿತರಿದ್ದರು.
ಕಾರು ಏರದೆ ನಡೆದೇ ಬಂದ ಸಚಿವ, ಶಾಸಕ!
ತಾ.ಪಂ.ನಲ್ಲಿ ಪ್ರಾಕೃತಿಕ ವಿಕೋಪ ಸಭೆ ಮುಗಿಸಿ ನ.ಪಂ. ತ್ಯಾಜ್ಯದ ಸಮಸ್ಯೆ ಬಗ್ಗೆ ಮಾಹಿತಿ ಪಡೆದ ಸಚಿವ ಯು.ಟಿ. ಖಾದರ್ ಅಲ್ಲಿಂದ 200 ಮೀಟರ್ ದೂರದಲ್ಲಿರುವ ನ.ಪಂ. ಆವರಣಕ್ಕೆ ಶಾಸಕ ಎಸ್. ಅಂಗಾರ ಅವರೊಂದಿಗೆ ರಸ್ತೆ ಮೂಲಕ ನಡೆದುಕೊಂಡೇ ಆಗಮಿಸಿ ವಸ್ತುಸ್ಥಿತಿ ಪರಿಶೀಲಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು
LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ
Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು
Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
MUST WATCH
ಹೊಸ ಸೇರ್ಪಡೆ
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ
ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ