ಉಜಿರೆಯ ಬಾಲಕನ ಅಪಹರಣ ಪ್ರಕರಣ: ಅಪಹರಣಕಾರರು 10 ದಿನ ಪೊಲೀಸ್‌ ಕಸ್ಟಡಿಗೆ

ಸೂತ್ರಧಾರನಿಗೆ ಶೋಧ ಕಾರ್ಯ ಚುರುಕು

Team Udayavani, Dec 21, 2020, 6:12 AM IST

ಉಜಿರೆಯ ಬಾಲಕನ ಅಪಹರಣ ಪ್ರಕರಣ: ಅಪಹರಣಕಾರರು 10 ದಿನ ಪೊಲೀಸ್‌ ಕಸ್ಟಡಿಗೆ

ಕುಟುಂಬದೊಂದಿಗೆ ಅನುಭವ್‌

ಬೆಳ್ತಂಗಡಿ: ಉಜಿರೆ ರಥಬೀದಿ ಸಮೀಪ ಬಾಲಕನ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಕೃತ್ಯದ ಸೂತ್ರಧಾರನಿಗೆ ಪೊಲೀಸರ ತನಿಖೆ ಚುರುಕುಗೊಂಡಿದೆ. ಹಣದ ವ್ಯವಹಾರದಲ್ಲಿ ಬಾಲಕನ ತಂದೆ ಬಿಜೊಯ್‌ ಅವರ ಪರಿಚಿತನಿಂದಲೇ ಕೃತ್ಯ ನಡೆದಿರುವುದಾಗಿ ಪೊಲೀಸರು ಈಗಾಗಲೇ ತಿಳಿಸಿದ್ದು, ಮೂಲ ಆರೋಪಿ ಸೆರೆಸಿಕ್ಕ ಬಳಿಕ ಪ್ರಕರಣದ ಆಯಾಮ ಯಾವುದೇ ಸ್ವರೂಪವನ್ನು ಪಡೆಯುವ ಸಾಧ್ಯತೆ ಇದೆ. 6 ಮಂದಿಯನ್ನು ರವಿವಾರ ಮುಂಜಾನೆ 5.30ಕ್ಕೆ ನ್ಯಾಯಾಲಯಕ್ಕೆ ಹಾಜರುಪಡಿಸಿ 10 ದಿನ ಪೊಲೀಸ್‌ ಕಸ್ಟಡಿಗೆ ಪಡೆಯಲಾಗಿದೆ. ಅಪಹರಣಕ್ಕೊಳಗಾದ ಮಗು ಅನುಭವ್‌ ಹಾಗೂ ತಂದೆ ತಾಯಿ ಶನಿವಾರ ತಡರಾತ್ರಿ 2 ಗಂಟೆಗೆ ಮನೆ ತಲುಪಿದ್ದರು.

ಕೋ.ರೂ. ವ್ಯವಹಾರದ ಅನುಮಾನ?
ಲಭ್ಯ ಮಾಹಿತಿಗಳ ಪ್ರಕಾರ ಅಪಹರಣದ ರೂವಾರಿಗೆ ಬಿಜೋಯ್‌ 1.30 ಕೋ.ರೂ. ನೀಡಲು ಬಾಕಿ ಇತ್ತೇ? ಎಂಬ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಅಪಹರಣಕಾರ ಹಾಸನ ಜಿಲ್ಲೆಯವನಾಗಿದ್ದು, ಈತನಿಗೆ ಬಾಲಕನ ಮನೆಯವರ ಬಗ್ಗೆ ಸ್ಪಷ್ಟ ಮಾಹಿತಿಗಳಿವೆ ಎಂಬುದು ತನಿಖೆ ವೇಳೆ ತಿಳಿದುಬಂದಿದೆ.

ಬಿಟ್‌ ಕಾಯಿನ್‌ ಲಿಂಕ್‌
ಆರೋಪಿಗಳು ಬಿಟ್‌ ಕಾಯಿನ್‌ಗಾಗಿಯೇ ಬೇಡಿಕೆ ಮುಂದಿಟ್ಟಿರುವುದು ಒಟ್ಟು ಪ್ರಕರಣದ ಹಿಂದೆ ಬಿಟ್‌ ಕಾಯಿನ್‌ ವ್ಯವಹಾರವೇ ಇದೆ ಎಂಬ ಅನುಮಾನವೂ ಮೂಡುತ್ತಿದೆ. ಬಿಜೋಯ್‌ ಅವರ ಮೊಬೈಲ್‌ ವಶಕ್ಕೆ ಪಡೆದಿರುವ ಪೊಲೀಸರು ಅವರ ವ್ಯವಹಾರಗಳ ಮೇಲೆ ನಿಗಾ ಇರಿಸಿದ್ದಾರೆ. ಬಂಟ್ವಾಳ ಡಿವೈಎಸ್‌ಪಿ ವೆಲೆಂಟೈನ್‌ ಡಿ’ಸೋಜಾ, ಬೆಳ್ತಂಗಡಿ ವೃತ್ತ ನಿರೀಕ್ಷಕ ಸಂದೇಶ್‌ ಪಿ.ಜಿ., ಉಪನಿರೀಕ್ಷಕ ನಂದಕುಮಾರ್‌ ನೇತೃತ್ವದಲ್ಲಿ ಆರೋಪಿಗಳ ವಿಚಾರಣೆ ನಡೆಯುತ್ತಿದೆ. ಒಂದೆರಡು ದಿನಗಳಲ್ಲಿ ಪ್ರಕರಣದ ಚಿತ್ರಣ ಲಭ್ಯವಾಗುವ ಸಾಧ್ಯತೆ ಇದೆ. ಸ್ಥಳ ಮಹಜರಿಗಾಗಿ ಆರೋಪಿಗಳನ್ನು ಮತ್ತೆ ಕೋಲಾರಕ್ಕೆ ಕರೆದೊಯ್ಯಲಿದ್ದಾರೆ.

ಮಕ್ಕಳಲ್ಲಿ ಇರಲಿ ಜಾಗೃತಿ
ಮಗನನ್ನು ಕ್ಷೇಮವಾಗಿ ಕರೆತಂದ ಪೊಲೀಸರಿಗೆ, ತನಿಖೆಗೆ ಮಾಹಿತಿಗಳನ್ನು ನೀಡಿದ ಊರವರಿಗೆ ತಾಯಿ ಸರಿತಾ ಕೃತಜ್ಞತೆ ಅರ್ಪಿಸಿದ್ದಾರೆ. ಇದೇ ವೇಳೆ ಅವರು ಮಕ್ಕಳ ಪೋಷಕರಿಗೊಂದು ಸಂದೇಶವನ್ನೂ ನೀಡಿದ್ದಾರೆ. ಇದು ಎಲ್ಲ ಪೋಷಕರೂ ಮಕ್ಕಳಲ್ಲಿ ಆತ್ಮಸ್ಥೈರ್ಯ ತುಂಬಬೇಕಾದ ಕ್ಷಣವಾಗಿದೆ. ಮಕ್ಕಳನ್ನು ನಿಗಾದಲ್ಲಿಡುವ ಜತೆಗೆ ಇಂತಹ ಸಂದರ್ಭ ಸ್ವಯಂ ರಕ್ಷಣೆಯ ಪಾಠವನ್ನು ಅಗತ್ಯವಾಗಿ ಕಲಿಸಬೇಕಿದೆ ಎಂದಿದ್ದಾರೆ.

ಕಾರಿಗೆ ತುರುಕಿದವನಿಗೆ ಎರಡು ಹೊಡೆಯಬೇಕು!
ಅಪಹರಣಕಾರರಿಂದ ಬಿಡುಗಡೆ ಯಾದ ಬಳಿಕ ಅನುಭವ್‌ ಯಾವುದೇ ಆತಂಕವಿಲ್ಲದೆ ಅಜ್ಜ- ಅಜ್ಜಿಯೊಂದಿಗೆ ಸಮಯ ಕಳೆಯುತ್ತಿದ್ದಾನೆ.ಎಲ್ಲ ರೊಂದಿಗೆ ಸೆಲ್ಫಿ ತೆಗೆಯುತ್ತ, ಆಟ ಪಾಠದ ಜತೆ ಮತ್ತೆ ಶೈಕ್ಷಣಿಕೆ ಚಟುವಟಿಕೆ ಗಳಲ್ಲಿ ತೊಡಗಿದ್ದಾನೆ. ಆದರೆ ತನ್ನನ್ನು ಎಳೆದೊಯ್ದು ಕಾರಿಗೆ ತುರುಕಿದವನಿಗೆ ಮಾತ್ರ ಎರಡು ಹೊಡೆಯಬೇಕು ಎಂದು ಮುಗ್ಧ ಮಾತುಗಳಲ್ಲಿ ಹೇಳುತ್ತಾನೆ. ನಾವು ನಿನ್ನೆ ತಂದೆಯ ಸ್ನೇಹಿತ ರಾಗಿದ್ದು, ಅವರಿಗೆ ಸರ್‌ಪ್ರೈಸ್‌ ನೀಡಲು ಕರೆದೊಯ್ಯುತ್ತಿದ್ದೇವೆ ಎಂದು ಹೇಳಿದ್ದರಿಂದ ನಾನು ಸುಮ್ಮ ನಿದ್ದೆ. ಆಟವಾಡಲು ಹಲವು ವಸ್ತುಗಳನ್ನು ಕೊಡಿಸಿದ್ದರು. ನನಗೆ ಭಯವಾಗುತ್ತಿತ್ತು. ಅಮ್ಮನನ್ನು ನೋಡ ಬೇಕು ಎಂದು ಕೇಳಿದ್ದೆ. ಕೆಲವು ಬಾರಿ ಅತ್ತೆ. ಅವರು ಬೇರೆ ಯಾವುದೇ ರೀತಿಯಲ್ಲಿ ಏನೂ ಮಾಡಲಿಲ್ಲ. ಆದರೂ ಏನಾದರು ಮಾಡಿಯಾರೇ ಎಂಬ ಸಣ್ಣ ಭಯ ಇದ್ದೇ ಇತ್ತು ಎನ್ನುತ್ತಾನೆ ಪುಟಾಣಿ ಅನುಭವ್‌.

ನಾನು ನಿವೃತ್ತ ಸೇನಾನಿಯಾಗಿದ್ದು, ನಮ್ಮ ಪೊಲೀಸರ ದಕ್ಷತೆಯ ಬಗ್ಗೆ ಸಂಪೂರ್ಣ ವಿಶ್ವಾಸ ಹೊಂದಿದ್ದೇನೆ. ಅದರಂತೆ ಅವರು ನನ್ನ ಮೊಮ್ಮಗನನ್ನು ತ್ವರಿತ ಕಾರ್ಯಾ  ಚರಣೆಯಲ್ಲಿ ಕ್ಷೇಮವಾಗಿ ಕರೆ ತಂದಿದ್ದಾರೆ. ಅವರಿಗೆ ನಾನು ಕೃತಜ್ಞ.
– ಶಿವನ್‌ ನಾಯರ್‌, ಬಾಲಕನ ಅಜ್ಜ

ಟಾಪ್ ನ್ಯೂಸ್

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

1-aewr

DRDO; ನಿರ್ಭಯ್‌ ಪರೀಕ್ಷಾರ್ಥ ಉಡಾವಣೆ ಯಶಸ್ವಿ

1eewqe

Iran ವಶದಲ್ಲಿದ್ದ ಹಡಗಿನ ಮಹಿಳಾ ಸಿಬಂದಿ ವಾಪಸ್‌

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-weqwewq

Belur: ದೈತ್ಯ ‘ಕರಡಿ’ ಆನೆ ಕೊನೆಗೂ ಸೆರೆ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

LS Polls 2024: ಸುಮಲತಾ ಪ್ರಚಾರಕ್ಕೆ ಬರುವುದು ರಾಜ್ಯ ನಾಯಕರ ತೀರ್ಮಾನ: ನಿಖಿಲ್‌

LS Polls 2024: ಸುಮಲತಾ ಪ್ರಚಾರಕ್ಕೆ ಬರುವುದು ರಾಜ್ಯ ನಾಯಕರ ತೀರ್ಮಾನ: ನಿಖಿಲ್‌

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್‌

Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-HM

Mathura ನನ್ನನ್ನು ಗೋಪಿಕೆಯೆಂದು ಭಾವಿಸುವೆ: ಬಿಜೆಪಿ ಅಭ್ಯರ್ಥಿ ಹೇಮಾ

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

1-aewr

DRDO; ನಿರ್ಭಯ್‌ ಪರೀಕ್ಷಾರ್ಥ ಉಡಾವಣೆ ಯಶಸ್ವಿ

1eewqe

Iran ವಶದಲ್ಲಿದ್ದ ಹಡಗಿನ ಮಹಿಳಾ ಸಿಬಂದಿ ವಾಪಸ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.