ತಡಬೇಲಿ ರಹಿತ ಕಿರುಸೇತುವೆಯಿಂದ ಅಪಾಯ
ಉಜಿರೆ-ಗುರಿಪಳ್ಳ ರಸ್ತೆಯ ಹಲಕ್ಕೆ
Team Udayavani, Jan 19, 2021, 2:20 AM IST
ಬೆಳ್ತಂಗಡಿ: ಉಜಿರೆ ಗ್ರಾ.ಪಂ. ವ್ಯಾಪ್ತಿಯ ಉಜಿರೆ-ಗುರಿಪಳ್ಳ ರಸ್ತೆಯ ಹಲಕ್ಕೆ ಎಂಬಲ್ಲಿ ಅಂಬಡಬೆಟ್ಟು ಹಳ್ಳಕ್ಕೆ ಕಿರು ಸೇತುವೆ ತಡೆಬೇಲಿ ಕಬ್ಬಿಣದ ಪಟ್ಟಿಗಳು ಕಳಚಿದ್ದು, ಶಿಥಿಲಾವಸ್ಥೆಯಲ್ಲಿರುವ ಕಿರು ಸೇತುವೆ ಅಪಾಯ ಆಹ್ವಾನಿಸುವ ಮುನ್ನ ಕ್ರಮ ವಹಿಸಬೇಕಿದೆ.
ಕಳೆದ ಎರಡು ಮಳೆಗಾಲದಲ್ಲೂ ನೀರು ಉಕ್ಕಿ ಹರಿದು ಮರಮಟ್ಟು ಸೇತುವೆ ಯನ್ನು ಹಾನಿಗೊಳಿಸಿತ್ತು. ಸರಕಾರಿ ಬಸ್ ಸಹಿತ ಪ್ರತೀದಿನ ನೂರಾರು ವಾಹನಗಳು ಸಂಚರಿಸುವ ಸೇತುವೆ ಅಪಾಯ ದಂಚಿನಲ್ಲಿದೆ. ಕಲ್ಮಂಜ ಗ್ರಾ.ಪಂ. ವ್ಯಾಪ್ತಿಯ ನಿಡಿಗಲ್ನ ಚಾಕೋಟೆಕಟ್ಟೆಯಿಂದ ಗುರಿಪಳ್ಳ, ಬರಯಕನ್ಯಾಡಿ, ಮಂಜೊಟ್ಟಿ ಸುರ್ಯ, ನಡ, ನಾವೂರು, ಇಂದಬೆಟ್ಟು, ಕಾಜೂರು, ಬಂಗಾಡಿ ಮೊದಲಾದ ಕಡೆ ಸಂಪರ್ಕ ಕಲ್ಪಿಸಲು ಇದರ ಮೂಲಕ ಸಾಧ್ಯವಾಗಲಿದೆ.
ಕ್ರಮ ಕೈಗೊಳ್ಳಲಿ :
ಸಂಬಂಧ ಪಟ್ಟವರು ಈ ಬಗ್ಗೆ ಕೂಡಲೇ ಗಮನ ಹರಿಸಿ ಸುಗಮ ವಾಹನ ಸಂಚಾರಕ್ಕೆ ಕೆಲಸ ನಿರ್ವಹಿಸಬೇಕಾಗಿದೆ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. ತೀವ್ರ ಹದಗೆಟ್ಟಿದ್ದ ನಿಡಿಗಲ್ನಿಂದ ಗುರಿ ಪಳ್ಳ ತನಕದ ರಸ್ತೆಯನ್ನು ಶಾಸಕ ಹರೀಶ್ ಪೂಂಜ ಮುತುವರ್ಜಿಯಲ್ಲಿ ದುರಸ್ತಿಗೊಳಿಸಿ ಸಂಚಾರ ಯೋಗ್ಯ ಮಾಡಲಾಗಿದೆ. ಅಲ್ಲದೆ ಅನೇಕ ಕಡೆಗಳಿಗೆ ಸಂಪರ್ಕ ಕಲ್ಪಿಸುವ ಈ ರಸ್ತೆಯ ಅಭಿವೃದ್ಧಿಗೆ ಕಾಂಕ್ರೀಟ್ ಕಾಮಗಾರಿಗೆ ಅನುದಾನ ಮೀಸಲಿರಿಸಿದ್ದು ಹೆಚ್ಚಿನ ಕಡೆಯ ಕಾಮಗಾರಿ ಪೂರ್ಣ ಗೊಂಡಿದೆ. ಗುರಿಪಳ್ಳ ತನಕ ರಸ್ತೆಯನ್ನು ಅಗಲಗೊಳಿಸಿದರೆ ವಾಹನ ಸವಾರರಿಗೆ ಹೆಚ್ಚಿನ ಅನುಕೂಲವಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ
Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು
Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
Dharmasthala; ಕೆಎಸ್ಸಾರ್ಟಿಸಿ ಬಸ್ನಡಿ ಸಿಲುಕಿ ಮಹಿಳೆ ಸಾವು