ಮಾಸ್ಕ್ ನಲ್ಲೂ ದೇಸಿ ತಳಿ ಪ್ರವೇಶ : ಮರ್ಕಂಜ ಧನಂಜಯರ ಕೈಯಲ್ಲಿ ಅರಳಿದ ಗೆರಟೆ ಮಾಸ್ಕ್..!


Team Udayavani, Apr 24, 2021, 1:02 PM IST

ಮಾಸ್ಕ್ ನಲ್ಲೂ ದೇಸಿ ತಳಿ ಪ್ರವೇಶ : ಮರ್ಕಂಜ ಧನಂಜಯರ ಕೈಯಲ್ಲಿ ಅರಳಿದ ಗೆರಟೆ ಮಾಸ್ಕ್..!

ಪುತ್ತೂರು  : ಕೋವಿಡ್ ತಡೆಗಟ್ಟಲು ಮಾಸ್ಕ್ ಅನಿವಾರ್ಯ ಎಂಬ ಘೋಷಣೆ ಮೊಳಗುತ್ತಿರುವ ಹೊತ್ತಲ್ಲೇ ಮಾಸ್ಕ್ ನಲ್ಲಿ ದೇಸಿ ತಳಿ ಪ್ರವೇಶಿಸಿದೆ..!

ಅರೇ ಇದೇನೂ ಎಂಬ ಅಚ್ಚರಿ ಉಂಟಾಗಬಹುದು, ಆದರೆ ಇದು ನಿಜ. ನಾನಾ ಕಡೆಗಳಲ್ಲಿ ಚಿನ್ನ, ವಜ್ರದಿಂದ ತಯಾರಿಸಿದ ಮಾಸ್ಕ್ ಧರಿಸಿರುವುದನ್ನು ಕೇಳಿದ್ದೇವೆ. ಪ್ರಕೃತಿಯಿಂದ ದೊರೆಯುವ ವಸ್ತು ಬಳಸಿ ಇದಕ್ಕಿಂತಲು ಗಟ್ಟಿಮುಟ್ಟಾಗಿರುವ ಮಾಸ್ಕ್ ಅನ್ನು ಧರಿಸಬಹುದು ಎನ್ನುವುದು ಇಲ್ಲಿ ನಿರೂಪಿತವಾಗಿದೆ. ಬಹುಮುಖ ಕಲಾವಿದನೋರ್ವನ ಕೈಯಲ್ಲಿ ಅರಳಿದ ಪರಿಸರ ಸ್ನೇಹಿ ಗೆರಟೆ ಮಾಸ್ಕ್ ಹೊಸ ಪ್ರಯೋಗ ಗ್ರಾಹಕರ ಗಮನ ಸೆಳೆದಿದೆ.

ತೆಂಗಿನಕಾಯಿಯ ಗೆರಟೆ ಬೆಂಕಿ ಉರಿಸಲಷ್ಟೇ ಲಾಯಕ್ಕು ಅನ್ನುವ ಯೋಚನೆ ನಮ್ಮದು. ಆದರೆ ಮರ್ಕಂಜದ ಚಿತ್ರ ಕಲಾವಿದ ಧನಂಜಯ ಅವರು ಭಿನ್ನವಾಗಿ ಚಿಂತಿಸಿ, ತನ್ನ ಕಲಾಪ್ರೌಢಿಮೆ ಸೇರಿಸಿ ಹಲವು ರೂಪಗಳಲ್ಲಿ ಗೆರಟೆಯನ್ನು ನಮ್ಮೊಂದಿಗೆ ಸದಾ ಇರಿಸಲು ಸಾಧ್ಯವಿದೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಆ ಸಾಲಿಗೆ ಮಾಸ್ಕ್ ಹೊಸದಾಗಿ ಸೇರ್ಪಡೆಗೊಂಡಿದೆ.

ಗೆರಟೆ ಮಾಸ್ಕ್..! :

ಸುಳ್ಯ ತಾಲೂಕಿನ ಮರ್ಕಂಜ ನಿವಾಸಿ, ಪ್ರಸ್ತುತ ಸವಣೂರು ವಿದ್ಯಾರಶ್ಮಿ ವಿದ್ಯಾಲಯದಲ್ಲಿ ಚಿತ್ರಕಲಾ ಶಿಕ್ಷಕರಾಗಿರುವ ಧನಂಜಯ ಅವರು ಒಂದೇ ದಿನದಲ್ಲಿ ಮಾಸ್ಕ್ ತಯಾರಿಸಿದ್ದಾರೆ. ಎಕ್ಸ್ ರ್ ಬ್ಲೇಡ್ ಬಳಸಿ ಸಣ್ಣ ಸಣ್ಣ ಗೀರು, ತೂತು ಮಾಡಿ ಗಾಳಿ ಒಳ-ಹೊರ ಪ್ರವೇಶಕ್ಕೆ ಅನುವು ಮಾಡಲಾಗಿದೆ. ಅತ್ಯಂತ ಸೂಕ್ಷ್ಮ ಕೆಲಸ ಇದಾಗಿದ್ದು ಇದರಲ್ಲಿ ಯಶಸ್ವಿಯಾಗಿರುವ ಧನಂಜಯ ಅವರು ಗೆರಟೆಯ ಭಾರ ಇಳಿಸಿ ಮುಖಕ್ಕೆ ಆರಾಮದಾಯವಾಗಿ ಅಳವಡಿಸುವಂತೆ ನಯವಾಗಿ ಕೆತ್ತಿ ಸುಂದರ ರೂಪ ನೀಡಿದ್ದಾರೆ.

ಗೆರಟೆಯಲ್ಲಿ ಹಲವು ಪ್ರಯೋಗ :

ಈಗಾಗಲೇ ಗೆರಟೆಯಲ್ಲಿ ಕೈ ಬಳೆ, ಪೆನ್ ಸ್ಟಾಂಡ್, ಮೊಬೈಲ್ ಸ್ಟಾಂಡ್, ಕುಂಕುಮ ಬಾಕ್ಸ್, ಮೇಣದ ಬತ್ತಿ ಸ್ಟಾಂಡ್, ಪತ್ರ ಸಂಗ್ರಹದ ಬಾಕ್ಸ್, ಮೀನಿನ ಆಕೃತಿ, ಉಪ್ಪಿನಕಾಯಿ ಭರಣಿ, ಚಮಚ, ಆಭರಣ ಪೆಟ್ಟಿಗೆ, ಉಂಗುರ ಮೊದಲಾದವುಗಳನ್ನು ತಯಾರಿಸಿದ್ದಾರೆ. ತನ್ಮೂಲಕ ಮೂಲೆ ಸೇರುತ್ತಿದ್ದ ಗೆರಟೆಯ ಸಾಧ್ಯತೆಯನ್ನು ತೆರೆದಿಟ್ಟಿದ್ದಾರೆ.

ಗೆರಟೆ ಅತ್ಯಂತ ಬಹುಪಯೋಗಿ ವಸ್ತುವಾಗಿದ್ದು ಅದರಲ್ಲಿ ಹತ್ತಾರು ಬಗೆಯ ವಸ್ತುಗಳ ತಯಾರಿಸುವ ಹವ್ಯಾಸ ಹೊಂದಿದ್ದೇನೆ. ಒಂದು ದಿನದ ಶ್ರಮ ವಹಿಸಿ ಗೆರಟೆ ಮಾಸ್ಕ್ ತಯಾರಿಸಿದ್ದೇನೆ. ಆರಾಮದಾಯಕವಾಗಿ ಬಳಸಬಹುದು. -ಧನಂಜಯ ಮರ್ಕಂಜ ಗೆರಟೆ ಮಾಸ್ಕ್ ತಯಾರಿಸಿದ ಕಲಾವಿದ

ಟಾಪ್ ನ್ಯೂಸ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ

1-qwqwewqe

IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು

11-belthangady

LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ

Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Odisha: ಎನ್‌ಕೌಂಟರ್‌; ಇಬ್ಬರು ನಕ್ಸಲರ ಹತ್ಯೆ

Odisha: ಎನ್‌ಕೌಂಟರ್‌; ಇಬ್ಬರು ನಕ್ಸಲರ ಹತ್ಯೆ

Kundapur: ಕುಸಿದು ಬಿದ್ದು ಸಾವು

Kundapur: ಕುಸಿದು ಬಿದ್ದು ಸಾವು

Electric shock: ಯುವಕನ ಸಾವು

Electric shock: ಯುವಕನ ಸಾವು

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.