ಪುಂಜಾಲಕಟ್ಟೆ -ಚಾರ್ಮಾಡಿ ದ್ವಿಪಥಕ್ಕೆ ಮರು ಸರ್ವೇ: ತಿರುವು ತಪ್ಪಿಸಿ ನೇರ ರಸ್ತೆಗೆ ಆದ್ಯತೆ

718 ಕೋ.ರೂ. ಯೋಜನೆ

Team Udayavani, Jul 27, 2022, 5:55 AM IST

ಪುಂಜಾಲಕಟ್ಟೆ -ಚಾರ್ಮಾಡಿ ದ್ವಿಪಥಕ್ಕೆ ಮರು ಸರ್ವೇ: ತಿರುವು ತಪ್ಪಿಸಿ ನೇರ ರಸ್ತೆಗೆ ಆದ್ಯತೆ

ಬೆಳ್ತಂಗಡಿ: ಮಂಗಳೂರು- ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿ 73 ಅನ್ನು ಮೇಲ್ದರ್ಜೆಗೇರಿಸುವ ದ್ವಿತೀಯ ಹಂತದಲ್ಲಿ ಕಾಮಗಾರಿ ಪುಂಜಾಲಕಟ್ಟೆಯಿಂದ- ಚಾರ್ಮಾಡಿ ವರೆಗಿನ 35 ಕಿ.ಮೀ. ವ್ಯಾಪ್ತಿಯಲ್ಲಿ ನಡೆಯ ಲಿದ್ದು, ಈಗಿರುವ ತಿರುವುಗಳನ್ನು ಆದಷ್ಟು ಕಡಿತಗೊಳಿಸಿ ನೇರ ರಸ್ತೆ ನಿರ್ಮಿಸಲು ಎರಡನೇ ಹಂತದ ಸರ್ವೇ ಕಾರ್ಯ ಕೈಗೊಳ್ಳಲಾಗಿದೆ.

ಪ್ರಸಿದ್ಧ ಧಾರ್ಮಿಕ ಸ್ಥಳ
ಗಳು ಹಾಗೂ ಬೆಂಗ ಳೂರು, ಚಿಕ್ಕಮಗಳೂ ರನ್ನು ಸಂಪರ್ಕಿಸುವ ಬಹು ಮುಖ್ಯ ರಸ್ತೆಯಾಗಿದ್ದರೂ ಅಗಲ ಕಿರಿದಾಗಿರುವುದು ಹಾಗೂ ವಾಹನ ದಟ್ಟಣೆ ಇರುವುದನ್ನು ಪರಿಗಣಿಸಿ ಈ ವ್ಯಾಪ್ತಿಯ ರಸ್ತೆ ಅಭಿ ವೃದ್ಧಿಗೆ ಪ್ರಧಾನಿ ನರೇಂದ್ರ ಮೋದಿ ಜೂನ್‌ 20ರಂದು ಬೆಂಗಳೂರಿನಲ್ಲಿ ಶಿಲಾನ್ಯಾಸ ನೆರವೇರಿಸಿದ್ದರು.

ತ್ರಾಸದಾಯಕ ಸಂಚಾರ ಮುಕ್ತ
ಈ ಹಿಂದೆ ರಸ್ತೆ ಅಭಿವೃದ್ಧಿಗೆ ಬೆಂಚ್‌ ಮಾರ್ಕಿಂಗ್‌, ಸೆಂಟ್ರಲ್‌ ಮಾರ್ಕಿಂಗ್‌, ಕಟ್ಟಡ, ಮರಗಳ ಗುರುತಿಸುವಿಕೆ ಇತ್ಯಾದಿ ಸೇರಿದಂತೆ ಪ್ರಮುಖ ಸರ್ವೇ ಹಾಗೂ ಸಮೀಕ್ಷೆಗಳು ಪೂರ್ಣ ಗೊಂಡಿದ್ದವು. ಪ್ರಥಮ ಹಂತದ ಬಿ.ಸಿ.ರೋಡ್‌- ಪೂಂಜಾಲಕಟ್ಟೆ ಕಾಮಗಾರಿ ಪೂರ್ಣಗೊಂಡ ಬಳಿಕ ಅಲ್ಲಿನ ತಿರುವು ರಸ್ತೆಗಳಲ್ಲಿರುವ ನ್ಯೂನತೆಗಳನ್ನು ಮನದಟ್ಟು ಮಾಡಿಕೊಂಡು ದ್ವಿತೀಯ ಹಂತದ ಕಾಮಗಾರಿ ವೇಳೆ ಇನ್ನಷ್ಟು ನೇರಗೊಳಿಸುವ ಸಲುವಾಗಿ ಮರು ಸಮೀಕ್ಷೆಗೆ ಆದೇಶಿಸಲಾಗಿದೆ. ಪುಂಜಾಲಕಟ್ಟೆಯಿಂದ ಸಮೀಕ್ಷೆ ಆರಂಭಗೊಂಡಿದ್ದು ಗುರುವಾಯನಕೆರೆ, ಬೆಳ್ತಂಗಡಿವರೆಗೆ ಪೂರ್ಣಗೊಂಡಿದೆ.

2 ಕಿ.ಮೀ. ಉಳಿತಾಯಿ
ಸಂಸದ ನಳಿನ್‌ ಕುಮಾರ್‌ ಹಾಗೂ ಶಾಸಕ ಹರೀಶ್‌ ಪೂಂಜ ಮುತುವರ್ಜಿಯಲ್ಲಿ ಈ ಯೋಜನೆಗೆ ಕೇಂದ್ರ ಸರಕಾರ 718 ಕೋಟಿ ರೂ. ಅನುದಾನವಿರಿಸಿದೆ. ಹಿಂದಿನ ಸಮೀಕ್ಷೆಗಳ ಪ್ರಕಾರ 35 ಕಿ.ಮೀ. ವ್ಯಾಪ್ತಿಯ ರಸ್ತೆಯಲ್ಲಿದ್ದ ತಿರುವುಗಳ ಸಂಖ್ಯೆ ಕಡಿಮೆಗೊಂಡರೆ 2 ಕಿ.ಮೀ.ಗಳಷ್ಟು ಸಂಚರಿಸುವುದು ಕಡಿಮೆಯಾಗಲಿದೆ. ಈಗಾಗಲೇ 10 ಕಂಪೆನಿಗಳು ಕಾಮಗಾರಿಗೆ ಟೆಂಡರ್‌ಸಲ್ಲಿಸಿವೆ.ನವೆಂಬರ್‌ ಸುಮಾರಿಗೆ ಕಾಮಗಾರಿ ಆರಂಭಗೊ ಳ್ಳಲಿದೆ ಎಂದು ಶಾಸಕ ಪೂಂಜ ತಿಳಿಸಿದ್ದಾರೆ.

2,412 ಮರಗಳ ತೆರವು
2,412 ಮರಗಳನ್ನು ತೆರವುಗೊಳಿಸಲು ಗುರುತಿಸಲಾಗಿದೆ. ಈ ಬಗ್ಗೆ ಅರಣ್ಯ ಇಲಾಖೆಯು ಸಾರ್ವಜನಿಕರಿಂದ ಅಹವಾಲು ಆಲಿಸಲು ಸಭೆ ಯನ್ನು ನಡೆಸಲಿದೆ.

ರಸ್ತೆಯಲ್ಲಿರುವ ತಿರುವುಗಳನ್ನು ಆದಷ್ಟು ತಪ್ಪಿಸುವ ಉದ್ದೇಶದಿಂದ ಮರು ಸಮೀಕ್ಷೆಗೆ ಆದೇಶಿಸಲಾಗಿದೆ. ಟೆಂಡರ್‌ ಪ್ರಕ್ರಿಯೆ ಪೂರ್ಣಗೊಂಡು ತಾಂತ್ರಿಕ ಪರಿಶೀಲನೆಗಳು ಪ್ರಗತಿಯಲ್ಲಿವೆ. ವರ್ಷಾಂತ್ಯಕ್ಕೆ ಕಾಮಗಾರಿ ಆರಂಭಗೊಳ್ಳಲಿದೆ.
– ಕೃಷ್ಣ ಕುಮಾರ್‌, ಎಇಇ
ರಾಷ್ಟ್ರೀಯ ಹೆದ್ದಾರಿ ಇಲಾಖೆ, ದ.ಕ.

ತಿರುವು ಪ್ರದೇಶಗಳನ್ನು ಗಮನದಲ್ಲಿಟ್ಟುಕೊಂಡು ಕೆಲವು ಸ್ಥಳಗಳಲ್ಲಿ ಇನ್ನೊಮ್ಮೆ ಮರಗಳ ಸಮೀಕ್ಷೆ ಕೈಗೊಳ್ಳಬೇಕಿದೆ. ಖಾಸಗಿ ಸ್ಥಳಗಳಲ್ಲಿರುವ ಕೆಲವು ಮರಗಳನ್ನು ತೆರವುಗೊಳಿಸುವ ಸಾಧ್ಯತೆ ಬರಬಹುದು.
– ಡಾ| ದಿನೇಶ್‌ ಕುಮಾರ್‌,
ಡಿಎಫ್‌ಒ, ದಕ್ಷಿಣ ಕನ್ನಡ ಜಿಲ್ಲೆ

 

ಟಾಪ್ ನ್ಯೂಸ್

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು

mamata

EC ಚುನಾವಣ ಆಯೋಗ ಅಲ್ಲ, ಬಿಜೆಪಿ ಆಯೋಗ: ಮಮತಾ ಬ್ಯಾನರ್ಜಿ ಟೀಕಾಸ್ತ್ರ

Kasaragod ವಿವಿಪ್ಯಾಟ್‌ಗಳಲ್ಲಿ ದೋಷಗಳಿಲ್ಲ: ಚುನಾವಣಾಧಿಕಾರಿ

Kasaragod ವಿವಿಪ್ಯಾಟ್‌ಗಳಲ್ಲಿ ದೋಷಗಳಿಲ್ಲ: ಚುನಾವಣಾಧಿಕಾರಿ

ರಾಜ್ಯದಲ್ಲಿ ಐದೂವರೆ ಸಿಎಂಗಳು: ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್‌ ಭಾಟಿಯಾ ವ್ಯಂಗ್ಯ

ರಾಜ್ಯದಲ್ಲಿ ಐದೂವರೆ ಸಿಎಂಗಳು: ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್‌ ಭಾಟಿಯಾ ವ್ಯಂಗ್ಯ

ರಾಜ್ಯಕ್ಕೆ ಅನ್ಯಾಯವಾದಾಗ ಸ್ಪಂದಿಸದ ಕೇಂದ್ರ ಸರಕಾರ: ಇಂಧನ ಸಚಿವ ಜಾರ್ಜ್‌

ರಾಜ್ಯಕ್ಕೆ ಅನ್ಯಾಯವಾದಾಗ ಸ್ಪಂದಿಸದ ಕೇಂದ್ರ ಸರಕಾರ: ಇಂಧನ ಸಚಿವ ಜಾರ್ಜ್‌

kejriwal 2

ED; ನಾನು ತಿಂದದ್ದು ಮೂರೇ ಮಾವು: ಕೋರ್ಟ್‌ಗೆ ಕೇಜ್ರಿವಾಲ್‌ ಮಾಹಿತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Sabha Elections; ಕಾಂಗ್ರೆಸ್‌ಗೆ ಉತ್ತಮ ಅವಕಾಶ: ದಿನೇಶ್‌ ಗುಂಡೂರಾವ್‌

Lok Sabha Elections; ಕಾಂಗ್ರೆಸ್‌ಗೆ ಉತ್ತಮ ಅವಕಾಶ: ದಿನೇಶ್‌ ಗುಂಡೂರಾವ್‌

8-ptr

Puttur: ಶ್ರೀ ಮಹಾಲಿಂಗೇಶ್ವರ ದೇವರ ಅವಭೃಥ ಸವಾರಿ

11

ಆಲೆಟ್ಟಿ: ಅರಣ್ಯಕ್ಕೆ ತಗುಲಿದ ಬೆಂಕಿ

Payaswini river: ಪಯಸ್ವಿನಿ ನದಿಯಲ್ಲಿ ಮುಳುಗಿ ಓರ್ವ ಸಾವು

Payaswini river: ಪಯಸ್ವಿನಿ ನದಿಯಲ್ಲಿ ಮುಳುಗಿ ಓರ್ವ ಸಾವು

Beltangady: ಮನೆ ಮಾಲಕಿ ಮೇಲೆ ಸಾಕು ನಾಯಿ ದಾಳಿ

Beltangady: ಮನೆ ಮಾಲಕಿ ಮೇಲೆ ಸಾಕು ನಾಯಿ ದಾಳಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-weweqwe

Globant; ಮನೆಯಿಂದಲೇ 30,000 ಮಂದಿ ಕೆಲಸ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು

mamata

EC ಚುನಾವಣ ಆಯೋಗ ಅಲ್ಲ, ಬಿಜೆಪಿ ಆಯೋಗ: ಮಮತಾ ಬ್ಯಾನರ್ಜಿ ಟೀಕಾಸ್ತ್ರ

Kasaragod ವಿವಿಪ್ಯಾಟ್‌ಗಳಲ್ಲಿ ದೋಷಗಳಿಲ್ಲ: ಚುನಾವಣಾಧಿಕಾರಿ

Kasaragod ವಿವಿಪ್ಯಾಟ್‌ಗಳಲ್ಲಿ ದೋಷಗಳಿಲ್ಲ: ಚುನಾವಣಾಧಿಕಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.