ನೇತ್ರಾವತಿ ಕಿನಾರೆಯಲ್ಲಿದ್ದರೂ ನೀರಿನ ಬರ


Team Udayavani, Sep 3, 2021, 3:20 AM IST

Untitled-1

ಬಂಟ್ವಾಳ ತಾಲೂಕಿನ ಸಜೀಪಮುನ್ನೂರು ಗ್ರಾಮದಿಂದ ಹಲವು ಬೃಹತ್‌ ಉದ್ದಿಮೆಗಳು, ಸ್ಥಳೀಯಾಡಳಿತ ಸಂಸ್ಥೆ ಗಳಿಗೆ ನೀರು ಸರಬರಾಜಾದರೂ ಇಲ್ಲಿನ ನೀರಿನ ಕೊರತೆ ನೀಗಿಲ್ಲ. ಮಾತ್ರವಲ್ಲ ಇಲ್ಲಿನ ಇನ್ನೂ ಹಲವು ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಪ್ರಯತ್ನ ಒಂದು ಊರು; ಹಲವು ದೂರು ಅಂಕಣದಲ್ಲಿ.

ಬಂಟ್ವಾಳ: ಹಲವು ಬೃಹತ್‌ ಉದ್ದಿಮೆಗಳು, ಸ್ಥಳೀಯಾಡಳಿತ ಸಂಸ್ಥೆ ಗಳಿಗೆ ಇದೇ ಗ್ರಾಮದಿಂದ ನೀರು ಸರಬ ರಾಜಾದರೂ, ಈ ಗ್ರಾಮಕ್ಕೆ ಕುಡಿಯುವ ನೀರಿನ ಸಮಸ್ಯೆಗೆ ಇನ್ನೂ ಕೂಡ ಪರಿಹಾರ ಕಂಡು ಕೊಳ್ಳುವುದಕ್ಕೆ ಸಾಧ್ಯವಾಗಿಲ್ಲ. ಗ್ರಾಮದ ಬಹುತೇಕ ಪ್ರದೇಶ ನೇತ್ರಾವತಿ ನದಿ ಕಿನಾರೆಯಲ್ಲಿದ್ದರೂ, ಗ್ರಾಮಕ್ಕೆ ನೀರಿನ ಸಮಸ್ಯೆ ಇರುವುದು ವಿಪರ್ಯಾಸ.

ಇದು ಸಜೀಪಮುನ್ನೂರು ಗ್ರಾಮದ ಕಥೆ. ಸರಕಾರದ ಅನುದಾನಗಳ ಮೂಲಕ ತಾಲೂಕಿನ ಹಲವಾರು ಗ್ರಾಮಗಳಿಗೆ ಶಾಶ್ವತ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ. ಆದರೆ ಸಜೀಪಮುನ್ನೂರು ಗ್ರಾಮದಲ್ಲಿ ಕೊಳವೆಬಾವಿಯನ್ನೇ ನಂಬಿ ನೀರು ಪೂರೈಕೆ ಮಾಡಲಾಗುತ್ತಿದೆ. ನದಿಯಿಂದ ಹತ್ತಾರು ಕಿ.ಮೀ.ದೂರಕ್ಕೆ ನೀರು ಕೊಂಡುಹೋದರೆ ನದಿ ಕಿನಾರೆಯಲ್ಲೇ ಇರುವ ಗ್ರಾಮಕ್ಕೆ ನೀರಿಲ್ಲ.

ಇದರ ಜತೆಗೆ ಹತ್ತು ಹಲವು ಸಮಸ್ಯೆಗಳು ಗ್ರಾಮಸ್ಥರನ್ನು ಕಾಡುತ್ತಿದ್ದು,  ಕೆಲವೊಂದು ಒಳರಸ್ತೆಗಳು ಹದಗೆಟ್ಟು ಹೋಗಿವೆ. ಗ್ರಾಮದಲ್ಲಿ ನಿವೇಶನ, ವಸತಿ ಸಮಸ್ಯೆಯೂ ಸಾಕಷ್ಟು ಕಡೆಗಳಲ್ಲಿದೆ. ಇನ್ನು ಗ್ರಾಮದ ಬೊಕ್ಕಸ ಪ್ರದೇಶದಲ್ಲಿ ಮಂಗಳೂರು ವಿವಿಯ ಜಾಕ್‌ವೆಲ್‌ ಸಿಬಂದಿ ವಸತಿ ಗೃಹದ ಕಟ್ಟಡ ಪಾಳು ಬಿದ್ದಿದ್ದು, ಅದರ ತೆರವು ಕಾರ್ಯವೂ ಇನ್ನೂ ನಡೆದಿಲ್ಲ. ವಿವಿ ಸಿಂಡಿಕೇಟ್‌ ಸಭೆಯಲ್ಲಿ ತೆರವಿಗೆ ನಿರ್ಧಾರವಾದರೂ, ಇನ್ನೂ ಅದರ ಕಾರ್ಯ ನಡೆದಿಲ್ಲ.

ಹಲವು ಕಡೆಗೆ ಇಲ್ಲಿಂದ ನೀರು :

ಸಜೀಪಮುನ್ನೂರು ಗ್ರಾಮದ ಹಲವು ಕಡೆಗಳಿಂದ ಮಂಗಳೂರು ವಿಶ್ವ ವಿದ್ಯಾನಿಲಯ, ಕರೋಪಾಡಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ನೀರು ಕೊಂಡು ಹೋಗಲಾಗುತ್ತಿದೆ. ಗ್ರಾಮದಲ್ಲೇ ಜಾಕ್‌ವೆಲ್‌ ಕೂಡ ನಿರ್ಮಿಸಲಾಗಿದೆ. ಉಳ್ಳಾಲ ನಗರ ಸಭೆ ಸೇರಿದಂತೆ ಅಲ್ಲಿ ಹಲವು ಸ್ಥಳೀಯಾಡಳಿತ ಸಂಸ್ಥೆಗಳಿಗೆ ನೀರು ಪೂರೈಕೆಯ ದೃಷ್ಟಿಯಿಂದ ಬೃಹತ್‌ ಜಾಕ್‌ವೆಲ್‌ ಅನುಷ್ಠಾನಗೊಳ್ಳುತ್ತಿದ್ದು, ಅದರ ಕಾಮಗಾರಿಯೂ ಬಹುತೇಕ ಪೂರ್ಣಗೊಂಡಿದೆ.

ಸಜೀಪಮುನ್ನೂರು ಗ್ರಾಮಕ್ಕೆ ನೀರು ನೀಡುತ್ತಿಲ್ಲ ಎಂಬ ಕಾರಣಕ್ಕೆ ಜಾಕ್‌ವೆಲ್‌ ನಿರ್ಮಾಣಕ್ಕೆ ಪ್ರಾರಂಭದಲ್ಲಿ ಸಾಕಷ್ಟು ವಿರೋಧಗಳು ಕೇಳಿಬಂದಿತ್ತು. ಬಳಿಕ ಸ್ಥಳೀಯ ಗ್ರಾಮಕ್ಕೂ ನೀರು ನೀಡ ಲಾಗುತ್ತದೆ ಎಂಬ ಭರವಸೆಯ ಹಿನ್ನೆಲೆಯಲ್ಲಿ ಕಾಮಗಾರಿಗೆ ಅವಕಾಶ ನೀಡಿದ್ದರು. ಇಲ್ಲಿಂದ ನೀರು ಕೊಂಡು ಹೋಗುವ ವೇಳೆಯೇ ಹಿಂತಿರುಗಿ ಬರುವ ಪೈಪುಲೈನ್‌ ಹಾಕಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದರು. ಆದರೆ ನೀರು ಶುದ್ಧೀಕರಣಗೊಂಡು ಹಿಂದಿರುಗಿ ಬರುವ ಪೈಪ್‌ಲೈನ್‌ ಹಾಕದಿರುವುದರಿಂದ ಗ್ರಾಮಸ್ಥರಿಗೆ ಇನ್ನೂ ನೀರು ಸಿಗುವ ಭರ ವಸೆ ಸಿಕ್ಕಿಲ್ಲ.

ನೇರವಾಗಿ ನದಿಯಿಂದ ನೀರು :

ನದಿಯಲ್ಲಿ ಸಾಕಷ್ಟು ನೀರಿದ್ದರೂ ಜನತೆಗೆ ಕುಡಿಯುವ ನೀರು ಕೊಡುವ ಸಂದರ್ಭದಲ್ಲಿ ನೇರವಾಗಿ ಕೊಡುವಂತಿಲ್ಲ ಎಂಬ ನಿಯಮವಿದ್ದರೂ, ನಂದಾವರ ಪ್ರದೇಶ ಸೇರಿದಂತೆ ಗ್ರಾಮದ ಕೆಲ ವೊಂದೆಡೆ ನೇರವಾಗಿ ನೀರು ಕೊಡ ಲಾಗುತ್ತಿದೆ ಎಂಬ ಆರೋಪ ಇದೆ. ಅಂದರೆ ಶುದೀœಕರಣ ಘಟಕಕ್ಕೆ ಸಾಕಷ್ಟು ಅನುದಾನ ಬೇಕಿ ರುವು ದರಿಂದ ಅನುಷ್ಠಾನ ಮಾಡ ಲಾಗಿಲ್ಲ. ಕೆಲವು ಕೊಳವೆ ಬಾವಿಗಳಲ್ಲಿ ನೀರು ಬತ್ತಿ ಹೋದ ಸಂದರ್ಭದಲ್ಲೂ ಪದೇ ಪದೆ ಗ್ರಾಮಕ್ಕೆ ನೀರಿನ ಸಮಸ್ಯೆ ಎದುರಾಗುತ್ತಲೇ ಇರುತ್ತದೆ.

ರುದ್ರಭೂಮಿ ಅನುಷ್ಠಾನಗೊಂಡಿಲ್ಲ  :

ಪ್ರತೀ ಗ್ರಾಮದಲ್ಲೂ ಮುಕ್ತಿಧಾಮದ ಹೆಸರಿನಲ್ಲಿ ಹಿಂದೂ ರುದ್ರಭೂಮಿ ಇರ ಬೇಕು ಎಂಬ ನಿಯಮವಿದ್ದರೂ, ಸಜೀಪ ಮುನ್ನೂ ರಿನಲ್ಲಿ ಇನ್ನೂ ರುದ್ರಭೂಮಿ ಅನುಷ್ಠಾನಗೊಂಡಿಲ್ಲ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ. ಹಲವು ವರ್ಷಗಳ ಹಿಂದೆಯೇ ರುದ್ರ ಭೂಮಿಗೆ ಜಾಗ ಮೀಸ ಲಿಟ್ಟಿ ದ್ದರೂ, ಅದು ಕೂಡ ಗೊಂದಲದಲ್ಲಿದೆ. ರುದ್ರಭೂಮಿಯ ನಿವೇಶ ನದ ಸಮಸ್ಯೆಯನ್ನು ಅಂತಿಮ ಗೊಳಿಸುವುದಕ್ಕೆ ಅಧಿಕಾರಿಗಳು ಇಚ್ಛಾಶಕ್ತಿ ಪ್ರದರ್ಶಿಸುತ್ತಿಲ್ಲ ಎಂಬ ಆರೋಪವೂ ಇದೆ.

ಸಾವಿರಕ್ಕೂ ಅಧಿಕ ಅರ್ಜಿ :

ಗ್ರಾಮದಲ್ಲಿ ಹಲವಾರು ಮಂದಿ ನಿವೇಶನರಹಿತರಾಗಿದ್ದು ಫಲಾನುಭವಿಗಳ ಸಂಖ್ಯೆ ಸಾವಿರ ದಾಟಿದೆ. ಆದರೆ ಅದರ ಹಂಚಿಕೆಯೂ ಇನ್ನೂ ಕೂಡ ವಿಳಂಬವಾಗುತ್ತಲೇ ಇದೆ. ಅಂದರೆ ಒಂದೇ ಮನೆಯಲ್ಲಿ 10-15 ಮಂದಿ ವಾಸಿಸುತ್ತಿದ್ದು, ಅವರು ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ಆದರೆ ಅದಕ್ಕೆ ಸರಕಾರಿ ಭೂಮಿಯ ಲಭ್ಯತೆಯ ಆಧಾರದಲ್ಲಿ ಭೂಮಿ ಹಂಚಿಕೆಯ ಕಾರ್ಯ ನಡೆಯಬೇಕಿದೆ.

-ಕಿರಣ್‌ ಸರಪಾಡಿ

 

ಟಾಪ್ ನ್ಯೂಸ್

1-kudre

Horse riding ಎಚ್ಚರಿಕೆ: ಅಪಾಯಕಾರಿ ಗ್ಲ್ಯಾಂಡರ್ಸ್‌ ಸೋಂಕು ಅಂಟಿಕೊಂಡೀತು ಹುಷಾರು!

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

1-aewr

DRDO; ನಿರ್ಭಯ್‌ ಪರೀಕ್ಷಾರ್ಥ ಉಡಾವಣೆ ಯಶಸ್ವಿ

1eewqe

Iran ವಶದಲ್ಲಿದ್ದ ಹಡಗಿನ ಮಹಿಳಾ ಸಿಬಂದಿ ವಾಪಸ್‌

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

11

ಆಲೆಟ್ಟಿ: ಅರಣ್ಯಕ್ಕೆ ತಗುಲಿದ ಬೆಂಕಿ

Payaswini river: ಪಯಸ್ವಿನಿ ನದಿಯಲ್ಲಿ ಮುಳುಗಿ ಓರ್ವ ಸಾವು

Payaswini river: ಪಯಸ್ವಿನಿ ನದಿಯಲ್ಲಿ ಮುಳುಗಿ ಓರ್ವ ಸಾವು

Beltangady: ಮನೆ ಮಾಲಕಿ ಮೇಲೆ ಸಾಕು ನಾಯಿ ದಾಳಿ

Beltangady: ಮನೆ ಮಾಲಕಿ ಮೇಲೆ ಸಾಕು ನಾಯಿ ದಾಳಿ

ಶೇ. 100 ಮತದಾನದ ಭರವಸೆ ನೀಡಿದ ಬಾಂಜಾರು ಮಲೆ, ಎಳನೀರು ಗ್ರಾಮಸ್ಥರು

ಶೇ. 100 ಮತದಾನದ ಭರವಸೆ ನೀಡಿದ ಬಾಂಜಾರು ಮಲೆ, ಎಳನೀರು ಗ್ರಾಮಸ್ಥರು

CAR-D

Sullia: ರಸ್ತೆ ಬದಿ ನಿಲ್ಲಿಸಿದ್ದ ಕಾರಿಗೆ ಕಂಟೈನರ್‌ ಢಿಕ್ಕಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-kudre

Horse riding ಎಚ್ಚರಿಕೆ: ಅಪಾಯಕಾರಿ ಗ್ಲ್ಯಾಂಡರ್ಸ್‌ ಸೋಂಕು ಅಂಟಿಕೊಂಡೀತು ಹುಷಾರು!

30

CET Exam: ಮೊದಲ ದಿನ ಸುಸೂತ್ರವಾಗಿ ನಡೆದ ಸಿಇಟಿ

1-wqeqwe

Maharashtra; ರತ್ನಾಗಿರಿ- ಸಿಂಧುದುರ್ಗದಲ್ಲಿ ರಾಣೆ vs ಠಾಕ್ರೆ ಕಾದಾಟ

1-HM

Mathura ನನ್ನನ್ನು ಗೋಪಿಕೆಯೆಂದು ಭಾವಿಸುವೆ: ಬಿಜೆಪಿ ಅಭ್ಯರ್ಥಿ ಹೇಮಾ

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.