ಮನೆಯಲ್ಲಿ ಜಲ ಮರು ಪೂರಣ: ಕೃಷಿಗೆ ವರದಾನ


Team Udayavani, Jul 26, 2019, 5:00 AM IST

m-30

ಸುಬ್ರಹ್ಮಣ್ಯ: ಅಂತರ್ಜಲ ವೃದ್ಧಿಸುವ ನಿಟ್ಟಿನಲ್ಲಿ ಜಲಮರುಪೂರಣದ ಹಲವು ವಿಧಾನಗಳು ಕೃಷಿಕರಿಗೆ ವರದಾನ. ಇದಕ್ಕೆ ನಿದರ್ಶನ ಎಂಬಂತೆ 24 ಕೊಳವೆ ಬಾವಿಗಳನ್ನು ತೋಡಿ ಸೋಲು ಕಂಡಿದ್ದ ಪಂಜದ ಕೃಷಿಕರೊಬ್ಬರು ಕೊಳವೆ ಬಾವಿಗೆ ಜಲಮರು ಪೂರಣದ ಬಳಿಕ ಇದೀಗ ಜಲ ಸಂರಕ್ಷಣೆ ಸಾಧ್ಯ ಎನ್ನುವುದನ್ನು ಮನಗಂಡಿದ್ದಾರೆ. ಪಂಜದ ಸಂಗಾತಿ ಸ್ಟೋರ್ಸ್‌ನ ಮಾಲಕ, ಕೃಷಿಕ ವೆಂಕಟ್ರಮಣ ಭಟ್‌ ಕೊಳವೆ ಬಾವಿಗೆ ಜಲಮರುಪೂರಣ ವ್ಯವಸ್ಥೆ ಅಳವಡಿಸಿಕೊಳ್ಳುವ ಮೂಲಕ ಮನೆಯಿಂದಲೇ ಜಲ ಸಂರಕ್ಷಣೆಯ ಜಾಗೃತಿಗೆ ಮುಂದಾಗಿದ್ದಾರೆ.

ವೆಂಕಟ್ರಮಣ ಭಟ್‌ ನೀರಿನ ಅಗತ್ಯಕ್ಕಾಗಿ ಜಮೀನಿನಲ್ಲಿ 24 ಕೊಳವೆಬಾವಿಗಳನ್ನು ಕೊರೆಸಿದ್ದರು. ಅದರಲ್ಲಿ ಕೆಲವೊಂದರಲ್ಲಿ ಮಾತ್ರ ನೀರಿದೆ. ಬೇಸಗೆಯಲ್ಲಿ ತೋಟ ಒಣಗುತ್ತದೆ ಎಂದು ಅನಿಸಿದ ತತ್‌ಕ್ಷಣವೇ ಮತ್ತೂಂದು ಕೊಳವೆಬಾವಿ ಕೊರೆಸಲು ಮುಂದಾಗುತ್ತಿದ್ದರು. ನಿರೀಕ್ಷಿತ ಪ್ರಮಾಣದಲ್ಲಿ ನೀರು ಸಿಗದಿದ್ದಾಗ ಹತಾಶರಾಗುತ್ತಿದ್ದರು. ನಷ್ಟಕ್ಕೂ ಒಳಗಾಗಿದ್ದರು.

ಪರಿಹಾರ ಮಾರ್ಗ: ಜಲಮರುಪೂರಣವೇ ಇದಕ್ಕೆ ದಾರಿ ಎಂದು ತೀರ್ಮಾನಿಸಿ ಕೊಳವೆಬಾವಿ ರೀಚಾರ್ಜ್‌ ಮಾಡಿದ್ದಾರೆ. ಕೊಳವೆಬಾವಿ ತೆಗೆಯುವುದೇ ಪರಿಹಾರವಲ್ಲ. ತೆಗೆದ ನೀರನ್ನು ತುಂಬಿಸಬೇಕು. ಅಂತರ್ಜಲ ತುಂಬಿಸುವುದೂ ನಮ್ಮ ಕರ್ತವ್ಯ ಎನ್ನುವ ಅವರು, 24 ಕೊಳವೆ ಬಾವಿಗೂ ರೀಜಾರ್ಜ್‌ ಮಾಡಲು ಯೋಜನೆ ಹಾಕಿಕೊಂಡಿದ್ದಾರೆ. ಈ ವರ್ಷ ಕನಿಷ್ಠ 3 ಕೊಳವೆಬಾವಿ ರೀಚಾರ್ಜ್‌ ಅನ್ನು ಕಾರ್ಯರೂಪಕ್ಕೆ ತಂದಿದ್ದಾರೆ.

ಕಾರ್ಯ ವಿಧಾನ: ಮನೆಯ ಛಾವಣಿ ನೀರನ್ನು ಸಂಗ್ರಹ ಮಾಡಿ ಅದಕ್ಕೆ ವಿಶೇಷ ಮಾದರಿಯ ಫಿಲ್ಟರ್‌ ಅಳವಡಿಸಿ,  ಆ ನೀರು ಮೊದಲನೇ ಕೊಳವೆಬಾವಿಗೆ ಸೇರುವಂತೆ ಮಾಡಿದ್ದಾರೆ. ಆ ಕೊಳವೆಬಾವಿ ಎಲ್ಲ ನೀರನ್ನು ಏಕಕಾಲಕ್ಕೆ ತೆಗೆದುಕೊಳ್ಳುವುದಿಲ್ಲ.

ಕೊಂಚ ಕೊಂಚವೇ ರೀಜಾರ್ಜ್‌ ಆಗುತ್ತದೆ. ಹೆಚ್ಚಾದ ನೀರು ಕೊಳವೆಬಾವಿಯ ಮೇಲ್ಭಾಗದ ತೂತಿನ ಮೂಲಕ ಇನ್ನೊಂದು ಕೊಳವೆಬಾವಿಗೆ ಹೋಗುತ್ತದೆ. ಅದರಲ್ಲೂ ಹೆಚ್ಚಾಗಿ ನೀರು ಮತ್ತೂಂದು ಕೊಳವೆಬಾವಿಗೆ ಹೋಗುತ್ತದೆ. ಅಂಡರ್‌ ಗ್ರೌಂಡ್‌ ಪೈಪ್‌ ಮೂಲಕ ವ್ಯವಸ್ಥೆ ಮಾಡಿಕೊಂಡಿದ್ದಾರೆ.

ಸಾಮಾಜಿಕ ಕಾರ್ಯ
ಪ್ರತಿಯೊಬ್ಬರೂ ಜಲಪಮರುಪೂರಣ ಮಾಡಬೇಕು. ನಾನು ಅನೇಕ ವರ್ಷಗಳಿಂದ ಭೂಮಿಯ ಒಳಗಿದ್ದ ನೀರು ತೆಗೆದೆ. ನಿರಂತರವಾಗಿ ಕೊಳವೆಬಾವಿ ಕೊರೆದೆ. ಈಚೆಗೆ ಕೊರೆಸಿದ ಕೊಳವೆಬಾವಿಯಲ್ಲಿ ಉತ್ತಮ ನೀರಿತ್ತು. ಅನಂತರ ಕಡಿಮೆಯಾಗುತ್ತಾ ಬಂತು. ಈಗ ಜ್ಞಾನೋದಯವಾಗಿದೆ. ನಾವು ತೆಗೆದ ನೀರನ್ನು ಭೂಮಿಗೆ ಮತ್ತೆ ತುಂಬಿಸಲೇಬೇಕು. ಈ ರೀತಿ ಮಾಡುವುದರಿಂದ ನನಗೆ ಮಾತ್ರ ಪ್ರಯೋಜನ ಎಂದು ಭಾವಿಸಬಾರದು. ಇದೊಂದು ಸಾಮಾಜಿಕ ಕಾರ್ಯ ಎಂದುಕೊಂಡು ಈ ಕೆಲಸ ಮಾಡಬೇಕು ಎನ್ನುತ್ತಾರೆ ಭಟ್‌.

ನೀರಿನ ಲಿಕ್ಕಾಚಾರವಿರಲಿ
ಒಂದು ಮೀಟರ್‌ ಪ್ರದೇಶದಲ್ಲಿ ಸುಮಾರು10×10ರಂತೆ ಸರಾಸರಿ ವರ್ಷದಲ್ಲಿ 4,500 ಲೀಟರ್‌ ಮಳೆ ನೀರು ಸಂಗ್ರಹವಾಗುತ್ತದೆ. ಒಬ್ಬನಿಗೆ ಒಂದು ದಿನಕ್ಕೆ ಸರಾಸರಿ 90ರಿಂದ 100 ಲೀಟರ್‌ ನೀರು ಬೇಕಾಗುತ್ತದೆ. ಒಂದು ವರ್ಷ ಸಂಗ್ರಹವಾದ ಮಳೆ ನೀರು ಒಬ್ಬ ವ್ಯಕ್ತಿಗೆ 45 ದಿನಕ್ಕೆ ಸಾಕಾಗಬಹುದು. ಈ ಪ್ರಕಾರ ವರ್ಷಕ್ಕೆ ಎಷ್ಟು ನೀರು ಬೇಕಾಗುತ್ತದೆ ಎನ್ನುವುದನ್ನು ಲೆಕ್ಕ ಹಾಕಿ ಅಷ್ಟು ಪ್ರದೇಶದ ನೀರು ಸಂಗ್ರಹ ಮಾಡಿ ಬಳಕೆ ಮಾಡಬಹುದು ಎನ್ನುತ್ತಾರೆ ವೆಂಕಟ್ರಮಣ ಭಟ್‌.

ಆಧುನಿಕ ಮಾದರಿ
ಮನೆಯ ಛಾವಣಿಗೆ ಅಳವಡಿಸಿರುವ ಫಿಲ್ಟರ್‌ ಆಧುನಿಕ ವಿನ್ಯಾಸ ಹಾಗೂ ವ್ಯವಸ್ಥೆ ಒಳಗೊಂಡಿದೆ. ಮಳೆ ಬಂದಾಗ ಛಾವಣಿಯಲ್ಲಿದ್ದ ಕಸ, ಕಡ್ಡಿ ನೀರಿನ ಜತೆ ಕೊಳವೆಬಾವಿಗೆ ಸೇರದಂತೆ ಫಿಲ್ಟರ್‌ ತಡೆಯುತ್ತದೆ. ಫಿಲ್ಟರ್‌ ಕೆಳಭಾಗದಲ್ಲಿ ಟ್ಯಾಪ್‌ ಇದೆ. ಇದು ಬಿಟ್ಟಿದ್ದರೆ ಅಟೋ ಕ್ಲೀನಿಂಗ್‌ ಆಗುತ್ತದೆ ಎನ್ನುತ್ತಾರೆ ವೆಂಕಟ್ರಮಣ ಭಟ್‌. ಇಲ್ಲಿ ಅಲ್ಪ ಪ್ರಮಾಣದ ನೀರು ಭೂಮಿಗೆ ಹೋದರೂ ಪರವಾಗಿಲ್ಲ. ಆದರೆ ಸ್ವತ್ಛವಾದ ನೀರು ಕೊಳವೆಬಾವಿಗೆ ಇಳಿಯುತ್ತದೆ. ಈ ಮಾದರಿಯ ಫಿಲ್ಟರ್‌ ಗಮನ ಸೆಳೆದಿದೆ.

ಸಮಸ್ಯೆಗೆ ಪರಿಹಾರ
ಜಲಮರುಪೂರಣದ ಬಗ್ಗೆ ಪಡೆದ ಅನುಭವವನ್ನು ಮತ್ತೂಬ್ಬರಿಗೆ ದಾಟಿಸುವುದರಿಂದ ಅವರೂ ಅಳವಡಿಸಿ ಕೊಳ್ಳುವಂತಾಗುತ್ತದೆ. ಈ ಮೂಲಕ ಎಲ್ಲರಲ್ಲಿ ಜಾಗೃತಿ ಮೂಡಿದಲ್ಲಿ ಖಂಡಿತ ಸಂಭವನೀಯ ನೀರಿನ ಸಮಸ್ಯೆ ಪರಿಹರಿಸಬಹುದು. ಇದು ಸಾಮಾಜಿಕ‌ ಜವಾಬ್ದಾರಿ ರೀತಿಯಲ್ಲಿ ಆಗಬೇಕು. ತನ್ನ ಬಳಿ ಯಾರೆ ಬಂದರೂ ಉಚಿತ ಮಾಹಿತಿ ನೀಡಲು ಸಿದ್ಧ.
– ವೆಂಕಟ್ರಮಣ ಭಟ್‌, ಕೃಷಿಕ, ಪಂಜ

ಟಾಪ್ ನ್ಯೂಸ್

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು

11-belthangady

LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ

Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

IPL: ಎಲ್ಲೆ ಮೀರಿ ವಿಕೆಟ್‌ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್‌ ಸಲಾಂಗೆ ಛೀಮಾರಿ

IPL: ಎಲ್ಲೆ ಮೀರಿ ವಿಕೆಟ್‌ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್‌ ಸಲಾಂಗೆ ಛೀಮಾರಿ

IPL: ಇಂಪ್ಯಾಕ್ಟ್ ಪ್ಲೇಯರ್‌ ನಿಯಮಕ್ಕೆ ಅಕ್ಷರ್‌ ಪಟೇಲ್‌ ಕೂಡ ವಿರೋಧ

IPL: ಇಂಪ್ಯಾಕ್ಟ್ ಪ್ಲೇಯರ್‌ ನಿಯಮಕ್ಕೆ ಅಕ್ಷರ್‌ ಪಟೇಲ್‌ ಕೂಡ ವಿರೋಧ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

12

B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್‌ವೈ ಗರಂ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.