ಮಹಿಳಾ ಸಶಕ್ತಿ, ಪರಿಸರ ಸಂರಕ್ಷಣೆ ಉಪನ್ಯಾಸ


Team Udayavani, Feb 7, 2018, 5:13 PM IST

7-Feb-22.jpg

ನಗರ : ಒಂದೊಮ್ಮೆ ಕಾಡು ಪ್ರಾಣಿಗಳಿಂದ ಮನುಷ್ಯನಿಗೆ ತೊಂದರೆ ಎಂದು ಹೇಳಲಾಗುತ್ತಿತ್ತು. ಆದರೆ ಈಗ ಮನುಷ್ಯನಿಂದಲೇ ಅರಣ್ಯಕ್ಕೆ ಹಾನಿ ಆಗುತ್ತಿದೆ. ಅರಣ್ಯ ಲೂಟಿ ಮಾಡುವ ಮಾಫಿಯಾ ಬಹುದೊಡ್ಡದಾಗಿ ಬೆಳೆದಿದ್ದು, ರಾಜಕೀಯ, ಇಲಾಖೆಯ ಬೆಂಬಲವನ್ನು ಪಡೆದುಕೊಂಡಿದ್ದಾರೆ. ತಮ್ಮ ಮಾಫಿಯಾವನ್ನು ಮರೆಮಾಚಲು ನಕ್ಸಲ್‌, ಪ್ರೇತಾತ್ಮದ ಕಥೆ ಕಟ್ಟುತ್ತಿದ್ದಾರೆ ಎಂದು ಪರಿಸರ ತಜ್ಞ ದಿನೇಶ್‌ ಹೊಳ್ಳ ವಿಶ್ಲೇಷಿಸಿದರು.

ಲಯನ್ಸ್‌, ಲಯನೆಸ್‌ ಕ್ಲಬ್‌, ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಆಶ್ರಯದಲ್ಲಿ ಮನೀಷಾ ಸಭಾಂಗಣದಲ್ಲಿ ಮಂಗಳವಾರ ನಡೆದ ಮಹಿಳಾ ಸಬಲೀಕರಣ ಮತ್ತು ಪರಿಸರ ಸಂರಕ್ಷಣೆ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮಾನವನ ಆಕ್ರಮಣ
ಕಡವೆಯೊಂದು ಕಾಲಿಗೆ ಗಾಜಿನ ಚೂರು ಚುಚ್ಚಿಸಿಕೊಂಡಿದ್ದು, ರಕ್ತದ ಕಲೆ ಕಾಡಿನ ದಾರಿಯಲ್ಲಿ ಹರಡಿತ್ತು. ಕಡವೆ ಕಾಲಿನಲ್ಲಿ ಗಾಜಿನ ಚೂರು ಹಾಗೇ ಇದ್ದರೆ, ಆರೇ ತಿಂಗಳಲ್ಲಿ ಅದು ಅಸುನೀಗುತ್ತದೆ. ಈ ಬಗ್ಗೆ ಇಲಾಖೆ ಗಮನ ಸೆಳೆದಾಗ ಎಂದಿನ ಹಾರಿಕೆ ಉತ್ತರ. ಅರಣ್ಯದ ಮಗ್ಗುಲಿನಲ್ಲಿ ಹಗಲಿನ ವೇಳೆಯೇ ಬೇಟೆ ನಡೆಸುವವರಿದ್ದಾರೆ. ಕಾಡುಕೋಣದ ಮಾಂಸಕ್ಕೆ ಉತ್ತಮ ಬೇಡಿಕೆ ಇದ್ದು, ಬೇಟೆ ಆಡುವುದರ ಚಿತ್ರೀಕರಣವನ್ನು ಮಾಡಿ ದ್ದೇವೆ. ದಾಖಲೆ ಸಹಿತ ಇಲಾಖೆಗೆ ತೋರಿಸಿದರೆ, ನಮ್ಮನ್ನೇ ಸಾಗಹಾಕಿದರು. ಇದರ ಮೇಲೆ ಮಾಫಿಯಾಗಳಿಂದ ಬೆದರಿಕೆ ಕರೆ. ಹೀಗೆ ಅರಣ್ಯದ ಮೇಲಾಗುತ್ತಿರುವ ಮಾನವನ ಆಕ್ರಮಣವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟರು.

ಪಕ್ಷಿಗಳು ಆಹಾರ ತಿನ್ನುವಾಗ, ಆನೆ, ಕಾಡುಕೋಣದ ಲದ್ದಿಯಿಅಂದ ಅರಣ್ಯ ಅಭಿವೃದ್ಧಿ ಆಗುತ್ತಾ ಸಾಗುತ್ತದೆ. ಆದರೆ ಮನುಷ್ಯನಿದ್ದಲ್ಲಿ ಅರಣ್ಯ ನಾಶವಾಗುತ್ತದೆ. ಗಾಂಜಾ ಬೆಳೆಸಲೋಸುಗ ಅರಣ್ಯ ಜಾಗಕ್ಕೆ ಹಾನಿ ಮಾಡುತ್ತಾರೆ. ಇದಕ್ಕಾಗಿ ಕಟ್ಟುಕತೆಗಳನ್ನು ಹೆಣೆಯುತ್ತಾರೆ. ಈ ಎಲ್ಲ ಮಾಹಿತಿಗಳನ್ನು ಅರಣ್ಯ ಇಲಾಖೆ, ವಿಜ್ಞಾನಿಗಳಿಂದ ಪಡೆದುಕೊಳ್ಳಲು ಸಾಧ್ಯವಿಲ್ಲ. ಬುಡಕಟ್ಟು ಜನಾಂಗದವರು ಇದನ್ನೆಲ್ಲ ನಮ್ಮ ಮುಂದಿಡುತ್ತಾರೆ ಎಂದು ವಿವರಿಸಿದರು.

ರಾಜಕಾರಣಿಗಳು ಪರಿಸರವನ್ನು ಕೊಲ್ಲುತ್ತಿದ್ದಾರೆ
ನೇತ್ರಾವತಿ ನದಿಗೆ 9 ಉಪನದಿಗಳಿವೆ. ಅವುಗಳಿಗೆ 27ರಷ್ಟು ಹಳ್ಳಗಳು ಸೇರುತ್ತವೆ. ನದಿಯನ್ನೋ ಉಪನದಿಯನ್ನೋ ತಿರುಗಿಸಿದರೆ ಏನೂ ಆಗುವುದಿಲ್ಲ ಎನ್ನುವವರು ತಮ್ಮ ದೇಹದ ಒಂದು ನರವನ್ನು ಕತ್ತರಿಸಿ ನೋಡಲಿ. ನದಿ ಮೂಲವನ್ನು ವ್ಯವಸ್ಥಿತವಾಗಿ ಮುಗಿಸುವ ಯತ್ನ ಎತ್ತಿನಹೊಳೆ ಯೋಜನೆ. ಸರಕಾರಕ್ಕೆ ಇಂತಹ ವಿಫಲ ಯೋಜನೆಗಳನ್ನು ರೂಪಿಸುವುದೇ ಕೆಲಸ. ಯೋಜನೆ ವಿಫಲವಾದರೆ ಮಾತ್ರ ಸಾಕಷ್ಟು ಲಾಭ. ಆಗ ಇನ್ನೊಂದು ಯೋಜನೆಯನ್ನು ಜಾರಿಗೆ ತರಬಹುದು. ನೇತ್ರಾವತಿ ನದಿಯ ವ್ಯರ್ಥ ಎಂದು ಹೇಳುವ ನೀರು, ಮುಂದೆ ಮಳೆಯ ರೂಪದಲ್ಲಿ ಪಶ್ಚಿಮ ಘಟ್ಟಗಳನ್ನು ತಲುಪುತ್ತವೆ. ಪಾಶ್ಚಿಮಾತ್ಯ ಧ್ಯೇಯ ಧೋರಣೆಗಳ ಮೂಲಕ ರಾಜಕಾರಣಿಗಳು ಪರಿಸರವನ್ನು ಕೊಲ್ಲುತ್ತಿದ್ದಾರೆ ಎಂದು ವಿಷಾದಿಸಿದರು.

ಕಾರಿಡಾರ್‌ಗೆ ಹಾನಿ
ಆನೆ, ಹುಲಿ ಕಾರಿಡಾರ್‌ಗೆ ಹಾನಿಯಾದ ಕಾರಣ, ಅವು ನಾಡಿಗೆ ಬರುತ್ತಿವೆ. ಆನೆ ದಾಳಿ ಮಾಡಿತು ಎನ್ನುವುದು ಸುದ್ದಿ ಆಗುತ್ತಿದೆ. ಆದರೆ ಮನುಷ್ಯ ಕಾಡಿನ ಮೇಲೆ ದಾಳಿ ಮಾಡಿದ ಎನ್ನುವುದು ಸುದ್ದಿಯೇ ಆಗುತ್ತಿಲ್ಲ. ಏಕೆಂದರೆ ಆನೆಗೆ ಮತದಾನದ ಹಕ್ಕಿಲ್ಲ, ಅಲ್ಲವೇ ಎಂದು ಚುಚ್ಚಿದರು. ಲಯನ್ಸ್‌ ಕ್ಲಬ್‌ ಅಧ್ಯಕ್ಷ ಸುಂದರ್‌ ರೈ ಅಧ್ಯಕ್ಷತೆ ವಹಿಸಿದ್ದರು. ಕಾಲೇಜು ಪ್ರಾಂಶುಪಾಲ ಝೆವಿಯರ್‌ ಡಿ’ಸೋಜಾ ಉಪಸ್ಥಿತರಿದ್ದರು. ಉಪನ್ಯಾಸಕ ನರೇಂದ್ರ ರೈ ದೇರ್ಲ ಅತಿಥಿಗಳ ಪರಿಚಯ ಮಾಡಿದರು.

ಹಸಿರು ಸೈನಿಕರು ಬೇಕು
ಗಡಿ ಕಾಯಲು ಸೈನಿಕರು ಇರುವಂತೆ, ಅರಣ್ಯ ಸಂಪತ್ತನ್ನು ರಕ್ಷಿಸಲು ಹಸಿರು ಸೈನಿಕರ ಅಗತ್ಯವಿದೆ. ಕಾವೇರಿ, ಮಹಾದಾಯಿ ಮೊದಲಾದ ಹೋರಾಟಗಳಿಗೆ ಸ್ವಯಂಪ್ರೇರಿತರಾಗಿ ಜನ ಬರುತ್ತಾರೆ. ಆದರೆ ನೇತ್ರಾವತಿ ನದಿ ಹೋರಾಟಕ್ಕೆ ಜನರೇ ಬರುತ್ತಿಲ್ಲ. ನೀರಿನ ಸಮಸ್ಯೆ ಎದುರಾದಾಗ ಮಾತ್ರ ನಾವು ಎಚ್ಚೆತ್ತುಕೊಳ್ಳುತ್ತೇವೆ. ಇಂತಹ
ಯೋಜನೆಗಳನ್ನು ವಿರೋಧಿಸಿ, ಪರಿಸರವನ್ನು ಉಳಿಸಿಕೊಳ್ಳುವ ಕೆಲಸ ಹಸಿರು ಸೈನಿಕರಿಂದ ಆಗಬೇಕಿದೆ ಎಂದು ದಿನೇಶ್‌ ಹೊಳ್ಳ ಹೇಳಿದರು.

ಪ್ರಾಣಿಗಳ ಒಗ್ಗಟ್ಟು
ಕಾಡಿಗೆ ಚಾರಣ ಹೋದ ಸಂದರ್ಭ ಮುಸುವವೊಂದು ವಿಚಿತ್ರ ಸದ್ದು ಹೊರಡಿಸಿತು. ಇದನ್ನು ಅನುಸರಿಸಿ ಒಂದಷ್ಟು ಪಕ್ಷಿಗಳು ಅರಚುತ್ತಾ ಹಾರಿ ಹೋದವು. ಜತೆಗಿದ್ದ ಬುಡಕಟ್ಟು ಜನಾಂಗದ ವ್ಯಕ್ತಿಯೊಬ್ಬರು ಅಪಾಯದ ಸುಳಿವು ನೀಡಿದರು. ಸ್ವಲ್ಪ ಮುಂದೆ ಹೋಗುತ್ತಲೇ ಐದು ಹುಲಿಗಳು ಮೇಲೆರಗಲು ಸಿದ್ಧವಾಗಿದ್ದವು. ತನಗೆ ಅಗತ್ಯ ಅಥವಾ ಸಂಬಂಧವೇ ಇಲ್ಲದ ಇನ್ನೊಂದು ಪಕ್ಷಿ, ಪ್ರಾಣಿಗೆ ಮುಸುವ ನಿರಂತರವಾಗಿ ಅಪಾಯದ ಸಂದೇಶ ರವಾನಿಸುತ್ತದೆ. ಆದರೆ ಮನುಷ್ಯರೊಳಗೆ ಜಾತಿ- ಧರ್ಮದ ಹೆಸರಿನಲ್ಲಿ ಕಚ್ಚಾಡುತ್ತಿದ್ದೇವೆ ಎಂದು ದಿನೇಶ್‌ ಹೊಳ್ಳ ತಮ್ಮ
ಅನುಭವವನ್ನು ಬಿಚ್ಚಿಟ್ಟರು. 

ಟಾಪ್ ನ್ಯೂಸ್

15

ಶರ್ಟ್‌ ಒಳಗೆ ಕಂತೆ ಕಂತೆ ನೋಟುಗಳನ್ನು ಬಚ್ಚಿಟ್ಟು ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದ ವ್ಯಕ್ತಿ!

ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ

ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ

Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ

Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

AMU: ಇತಿಹಾಸದಲ್ಲೇ ಮೊದಲು… ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿ ನೇಮಕ

AMU: ಇತಿಹಾಸದಲ್ಲೇ ಮೊದಲು… ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿ ನೇಮಕ

Mandya LokSabha Constituency:ಸಕ್ಕರೆ ನಾಡಿನ ಪಾರುಪತ್ಯಕ್ಕೆ ಸಾಂಪ್ರದಾಯಿಕ ಜಿದ್ದಾಜಿದ್ದಿ

Mandya LokSabha Constituency:ಸಕ್ಕರೆ ನಾಡಿನ ಪಾರುಪತ್ಯಕ್ಕೆ ಸಾಂಪ್ರದಾಯಿಕ ಜಿದ್ದಾಜಿದ್ದಿ

Tragedy: ಕುಂದಾಪುರದಿಂದ ನೆಂಟರ ಮನೆಗೆ ಬಂದಿದ್ದ ಇಬ್ಬರು ಬಾಲಕರು ನೀರು ಪಾಲು

Tragedy: ಕುಂದಾಪುರದಿಂದ ನೆಂಟರ ಮನೆಗೆ ಬಂದಿದ್ದ ಇಬ್ಬರು ಬಾಲಕರು ನೀರು ಪಾಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Venur: ನಾಯಿಯನ್ನು ಹೊತ್ತೊಯ್ದ ಚಿರತೆ! ವೈರಲ್ ಆಯ್ತು ಸಿಸಿಟಿವಿ ದೃಶ್ಯ

Venur: ನಾಯಿಯನ್ನು ಹೊತ್ತೊಯ್ದ ಚಿರತೆ! ವೈರಲ್ ಆಯ್ತು ಸಿಸಿಟಿವಿ ದೃಶ್ಯ

Uppinangady ಬೆಲೆಬಾಳುವ ಮರ ಕಡಿದು ಸಾಗಾಟ

Uppinangady ಬೆಲೆಬಾಳುವ ಮರ ಕಡಿದು ಸಾಗಾಟ

Padmaraj ಅವರಿಂದ ಕೋಮು ಸಾಮರಸ್ಯ ಮರು ಸ್ಥಾಪನೆ: ರಮಾನಾಥ ರೈ ವಿಶ್ವಾಸ

Padmaraj ಅವರಿಂದ ಕೋಮು ಸಾಮರಸ್ಯ ಮರು ಸ್ಥಾಪನೆ: ರಮಾನಾಥ ರೈ ವಿಶ್ವಾಸ

Belthangady ಲಾರಿ-ಆಮ್ನಿ ನಡುವೆ ಅಪಘಾತ: ಚಾಲಕನಿಗೆ ಗಾಯ

Belthangady ಲಾರಿ-ಆಮ್ನಿ ನಡುವೆ ಅಪಘಾತ: ಚಾಲಕನಿಗೆ ಗಾಯ

Puttur ಶ್ರೀಗಂಧ ದಾಸ್ತಾನು ಪತ್ತೆ: ಓರ್ವ ಸೆರೆ

Puttur ಶ್ರೀಗಂಧ ದಾಸ್ತಾನು ಪತ್ತೆ: ಓರ್ವ ಸೆರೆ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

1-gadaga

Gadaga: ಸೈಕ್ಲಿಸ್ಟ್ ಪವಿತ್ರಾ ಕುರ್ತಕೋಟಿ ಸೈಕ್ಲಿಂಗ್ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಆಯ್ಕೆ

15

ಶರ್ಟ್‌ ಒಳಗೆ ಕಂತೆ ಕಂತೆ ನೋಟುಗಳನ್ನು ಬಚ್ಚಿಟ್ಟು ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದ ವ್ಯಕ್ತಿ!

ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ

ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ

Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ

Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.