ಮೆಸ್ಕಾಂ ಬಳಕೆದಾರರಿಗೆ “ಡಿಜಿಟಲ್‌ ಮೀಟರ್‌’ ಬರೆ!


Team Udayavani, Jun 23, 2019, 5:00 AM IST

39

ಈಶ್ವರಮಂಗಲ: ಕೇಂದ್ರ ಸರಕಾರವು ಜಾರಿಗೆ ತಂದ ಹೊಸ ನಿಯಮದ ಪ್ರಕಾರ ವಿದ್ಯುತ್‌ ಬಳಕೆದಾರರಿಗೆ ಡಿಜಿಟಲ್‌ ಮೀಟರ್‌ ಆಳವಡಿಕೆ ಕಾರ್ಯವನ್ನು ಮೆಸ್ಕಾಂ ಉಚಿತವಾಗಿ ಮಾಡಿದೆ. ಹೊಸ ಮೀಟರ್‌ ಸೋರಿಕೆಯನ್ನು ತಡೆಯು ತ್ತಿದೆ. ಹಳೆಯ ಮೀಟರ್‌ಗಿಂತ ಭಿನ್ನವಾಗಿದೆ. ಚಿಕ್ಕ ಸೋರಿಕೆಯನ್ನೂ ಕಂಡು ಹಿಡಿಯುವುದ ರಿಂದ ವಿದ್ಯುತ್‌ ಬಿಲ್‌ ಜಾಸ್ತಿ ಬರುವುದು ಸಾಮಾನ್ಯವಾಗಿದೆ. ಹೊಸ ಮೀಟರ್‌ ಅಳವಡಿಕೆ ಬಳಕೆದಾರಿಗೆ ಬಹಳ ತೊಂದರೆ ಜತೆಗೆ ಮಾನಸಿಕ ಹಿಂಸೆಗೆ ಕಾರಣವಾಗುತ್ತಿದೆ. ಮೆಸ್ಕಾಂ ಇಲಾಖೆ ಗುಣಮಟ್ಟದ ಸೇವೆ ನೀಡಲೆಂದು ಕಾಲ ಕಾಲಕ್ಕೆ ವಿದ್ಯುತ್‌ ದರ ಏರಿಕೆ ಮಾಡಿದರೂ ತಾಂತ್ರಿಕ ತೊಂದರೆ ಸರಿಪಡಿಸಲು ಎಡವುತ್ತಿರುವುದರಿಂದ ಬಳಕೆದಾರರಿಗೆ ಸಮಸ್ಯೆಯಾಗುತ್ತಿದೆ.

ಸಮಸ್ಯೆ ಸರಿಪಡಿಸಲು ಆಗ್ರಹ
ಪಾಣಾಜೆ ಗ್ರಾಮದ ಹೆಚ್ಚಿನ ಬಳಕೆದಾರಿಗೆ ಈ ರೀತಿಯಲ್ಲಿ ಬಿಲ್‌ ಬಂದಿದೆ. ಈ ಸಮಸ್ಯೆಯನ್ನು ಮೆಸ್ಕಾಂ ಬಗೆಹರಿಸಬೇಕಾಗಿದೆ. ಯಾರೋ ಮಾಡಿದ ತಪ್ಪಿಗೆ ಬಡ ಬಳಕೆದಾರರು ತೊಂದರೆ ಪಡುವಂತಾಗಿದೆ. ಆದರೆ, ಸಮಸ್ಯೆ ಪರಿಹರಿಸುವಂತೆ ಮನವಿ ಮಾಡಬೇಕಿದ್ದರೂ ಗ್ರಾಹಕರು ಕುಂಬ್ರಕ್ಕೆ ತೆರಳಬೇಕು. ಹೆಚ್ಚಿನ ಬಳಕೆದಾರರಿಗೆ ತೊಂದರೆ ಆಗಿರುವುದರಿಂದ, ಅದನ್ನು ಸರಿಪಡಿಸಿಕೊಂಡು ಸರಿಯಾದ ಬಿಲ್‌ ಪಾವತಿಸಲು ಎರಡು ತಿಂಗಳ ಕಾಲಾವಕಾಶ ಕೊಡಬೇಕೆಂದು ಬಳಕೆದಾರರು ಆಗ್ರಹಿಸಿದ್ದಾರೆ.

ಹೋಗುವುದೇ ತ್ರಾಸದಾಯಕ
ಗಡಿಭಾಗದ ಪಾಣಾಜೆ, ಬೆಟ್ಟಂಪಾಡಿ, ನಿಡ³ಳ್ಳಿ ಗ್ರಾಮದ ಬಳಕೆದಾರರು ವಿದ್ಯುತ್‌ ಬಿಲ್‌ನ ಸಮಸ್ಯೆಯನ್ನು ಪರಿಹರಿಸಲು ಕುಂಬ್ರ ಮೆಸ್ಕಾಂ ಕಚೇರಿಗೆ ಹೋಗಬೇಕಾಗಿದೆ. ಕುಂಬ್ರ ಗ್ರಾಮಾಂತರ ವಿಭಾಗ ಆದ ಮೇಲೆ ಗ್ರಾಹಕರಿಗೆ ಇದು ಹೊರೆಯಾಗಿದೆ. ಗಡಿಭಾಗದ ಜನರಿಗೆ ಕುಂಬ್ರಕ್ಕೆ ನೇರವಾದ ಸಾರಿಗೆ ಸಂಪರ್ಕ ಇಲ್ಲದ ಕಾರಣ ಸುತ್ತು ಬಳಸಿ ಸಂಚರಿಸಿ, ಪುತ್ತೂರು ನಗರದ ಮೂಲಕ ಕುಂಬ್ರಕ್ಕೆ ಬರಬೇಕಾಗುದೆ. ಹಣ ಮಾತ್ರವಲ್ಲದೆ ಸಮಯವೂ ಅಪವ್ಯಯವಾಗುತ್ತಿದೆ. ಮಳೆಗಾಲದ ಕೃಷಿ ಕೆಲಸಗಳನ್ನು ಬಿಟ್ಟು ಗ್ರಾಹಕರು ವಿದ್ಯುತ್‌ ಬಿಲ್‌ ಸರಿಪಡಿಸಲು ಓಡಾಡಬೇಕಾಗಿದೆ. ಇದರ ಬದಲು ಅಧಿಕಾರಿಗಳೇ ಜನರಿಗೆ ಸರಿಯಾದ ಬಿಲ್‌ ಕೊಡಲು ವ್ಯವಸ್ಥೆ ಮಾಡಬೇಕೆಂದು ಗ್ರಾಹಕರು ಒತ್ತಾಯಿಸಿದ್ದಾರೆ.

420 ರೂ. ಬದಲಿಗೆ 17,251 ರೂ.
ಗ್ರಾಮಾಂತರ ಪ್ರದೇಶದಲ್ಲಿ ಮೇ, ಜೂನ್‌ ತಿಂಗಳ ವಿದ್ಯುತ್‌ ಬಿಲ್ಲುಗಳು ಬಳಕೆದಾರರಿಗೆ ಹೆಚ್ಚು ತೊಂದರೆ ಉಂಟು ಮಾಡಿವೆ. ಮೇ ತಿಂಗಳಲ್ಲಿ ಬಿಲ್ಲುಗಳು ಅಸಮರ್ಪಕವಾಗಿವೆ. ಪಾಣಾಜೆ ಗ್ರಾಮದ ಆರ್ಲಪದವು ನಿವಾಸಿಯೋರ್ವರ ವಿದ್ಯುತ್‌ ಬಿಲ್‌ನ ಹಾಲಿ ಮಾಪಕ 1,842 ಇದ್ದರೆ ಬಳಸಿದ ಯೂನಿಟ್‌ 1842 ಎಂದು ಮಾಪಕ ತೋರಿಸುತ್ತಿದೆ. ನಿಗದಿತ ಶುಲ್ಕ 420 ರೂ., ವಿದ್ಯುತ್‌ ಶುಲ್ಕ 15,357 ರೂ., ಇದರ ಮೇಲೆ ತೆರಿಗೆ 1,382 ರೂ. ಸಹಿತ 17,251 ರೂ. ಬಿಲ್‌ ತೋರಿಸುತ್ತಿದೆ. ಹೆಚ್ಚುವರಿ ಪಾವತಿ ಕಳೆದು ನಿವ್ವಳ 17,054 ರೂ. ಮೊತ್ತವನ್ನು ಜು. 3ರ ಒಳಗಡೆ ಪಾವತಿಸುವಂತೆ ಸೂಚಿಸಲಾಗಿದೆ. ತಿಂಗಳಿಗೆ 1,200 ರೂ. ಬರುವ ಬಿಲ್‌, ಒಂದೇ ತಿಂಗಳಲ್ಲಿ 15 ಪಟ್ಟು ಹೆಚ್ಚಾಗಲು ಸಾಧ್ಯವೇ ಎಂಬ ಪ್ರಶ್ನೆ ಕಾಡುತ್ತಿದೆ. ನಿಗದಿತ ಶುಲ್ಕ 60 ರೂ. ಇದ್ದಲ್ಲಿ 420 ರೂ. ಬಂದಿದೆ. ಒಂದೇ ತಿಂಗಳಲ್ಲಿ ಏಳು ಪಟ್ಟು ಶುಲ್ಕವನ್ನು ಮೆಸ್ಕಾಂ ಏರಿಸಿದೆಯೇ ಎಂಬ ಪ್ರಶ್ನೆಯೂ ಮೂಡಿದೆ.

ಮನೆಗೆ ಬಂದು ಸರಿಪಡಿಸಿ
ಎರಡು ತಿಂಗಳಿನಿಂದ ಮೆಸ್ಕಾಂ ವತಿಯಿಂದ ಹಳೆಯ ಮೀಟರ್‌ ತೆಗೆದು ಅಧುನಿಕ ಡಿಜಿಟಲ್‌ ಮೀಟರ್‌ ಆಳವಡಿಕೆ ಕಾರ್ಯ ನಡೆದಿದೆ. ಮೀಟರ್‌ ರೀಡರ್‌ ನೀಡುವ ಮೆಸ್ಕಾಂ ಬಿಲ್‌ ಶಾಕ್‌ ನೀಡುತ್ತಿದೆ. ಇದರಿಂದ ಗ್ರಾಮೀಣ ಪ್ರದೇಶದ ಬಳಕೆದಾರರಿಗೆ ತುಂಬಾ ತೊಂದರೆಯಾಗುತ್ತಿದೆ. ಕೂಡಲೇ ಸಂಬಂಧಪಟ್ಟ ಇಲಾಖೆ ಗಮನಹರಿಸಿ ಬಳಕೆದಾರರ ಮನೆಗೆ ಬಂದು ಸಮಸ್ಯೆಯನ್ನು ಸರಿಪಡಿಸಬೇಕು.
– ರವೀಂದ್ರ ಭಂಡಾರಿ ಪಾಣಾಜೆ,  ನೊಂದ ಬಳಕೆದಾರ

ಗಮನಕ್ಕೆ ತನ್ನಿ
ವಿದ್ಯುತ್‌ ಸೋರಿಕೆಯನ್ನು ತಡೆಯಲು ಹೊಸ ಮೀಟರ್‌ ಆಳವಡಿಕೆ ಕಾರ್ಯ ನಡೆದಿದೆ. ಹೊಸ ಮೀಟರ್‌ ಮಾಪನದಲ್ಲಿ ಯಾವುದೇ ಸಮಸ್ಯೆ ಇಲ್ಲ. ಸಮಸ್ಯೆ ಅಥವಾ ತಾಂತ್ರಿಕ ಸಮಸ್ಯೆಗಳು ಇದ್ದರೆ ಬಗೆಹರಿಸುತ್ತೇವೆ. ಹೆಚ್ಚುವರಿ ಬಿಲ್‌ ಬಂದಿದ್ದರೆ ನಮ್ಮ ಗಮನಕ್ಕೆ ತನ್ನಿ.
– ರಾಮಚಂದ್ರ ಎ., ಇ.ಇ., ಕುಂಬ್ರ ಮೆಸ್ಕಾಂ

ಮಾಧವ ನಾಯಕ್‌ ಕೆ.

ಟಾಪ್ ನ್ಯೂಸ್

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು

11-belthangady

LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ

Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Bird flu: ಕೇರಳದಲ್ಲಿ ಹಕ್ಕಿಜ್ವರ ಭೀತಿ; ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ

Bird flu: ಕೇರಳದಲ್ಲಿ ಹಕ್ಕಿಜ್ವರ ಭೀತಿ; ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ

Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್‌ ಭೇಟಿ; ಆಯೋಗಕ್ಕೆ “ಕೈ’ ದೂರು

Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್‌ ಭೇಟಿ; ಆಯೋಗಕ್ಕೆ “ಕೈ’ ದೂರು

Transfer order: ರಾಜ್ಯದ 388 ನ್ಯಾಯಾಧೀಶರ ವರ್ಗಾವಣೆ ಮಾಡಿ ಆದೇಶ

Transfer order: ರಾಜ್ಯದ 388 ನ್ಯಾಯಾಧೀಶರ ವರ್ಗಾವಣೆ ಮಾಡಿ ಆದೇಶ

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Odisha: ಎನ್‌ಕೌಂಟರ್‌; ಇಬ್ಬರು ನಕ್ಸಲರ ಹತ್ಯೆ

Odisha: ಎನ್‌ಕೌಂಟರ್‌; ಇಬ್ಬರು ನಕ್ಸಲರ ಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.