ವಿಟ್ಲ: ಟಿಪ್ಪರ್ ಲಾರಿ – ಬೈಕ್ ನಡುವೆ ಢಿಕ್ಕಿ: ಯುವಕ ಸಾವು
Team Udayavani, Dec 4, 2022, 9:43 PM IST
ವಿಟ್ಲ: ವೀರಕಂಬ ಗ್ರಾಮದ ಮಜಿ ಶಾಲಾ ಮುಂಭಾಗ ಟಿಪ್ಪರ್ ಲಾರಿ ಮತ್ತು ಬೈಕ್ ನಡುವೆ ಶನಿವಾರ ಸಂಭವಿಸಿದ ಅಪಘಾತದಲ್ಲಿ ಗಾಯಗೊಂಡಿದ್ದ ಮಾಣಿಲ ಗ್ರಾಮದ ಮನೋಜ್ ಪೂಜಾರಿ (26) ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
ಅವರು ಅಮರ್ ಕನ್ಸ್ಟ್ರಕ್ಷನ್ನಲ್ಲಿ ಸಿವಿಲ್ ಎಂಜಿನಿಯರ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಅಪಘಾತದಲ್ಲಿ ಬೈಕ್ ಸಂಪೂರ್ಣವಾಗಿ ನಜ್ಜುಗುಜ್ಜಾಗಿತ್ತು.