ಮಳೆ ನೀರು ಸಂರಕ್ಷಣೆಗೆ ಯುವಕರ ಪಣ
Team Udayavani, Jul 21, 2018, 3:13 PM IST
ಕಾವು: ಕಾವು ನನ್ಯ ತುಡರ್ ಯುವಕ ಮಂಡಲದ ಯುವಕರು ಅಂತರ್ಜಲವನ್ನು ಹೆಚ್ಚಿಸುವ ಪ್ರಯತ್ನಕ್ಕೆ ಮುಂದಾಗಿದ್ದು, ಮಳೆ ನೀರನ್ನು ಇಂಗಿಸುವ ನಿಟ್ಟಿನಲ್ಲಿ ಇಂಗುಗುಂಡಿ ನಿರ್ಮಾಣ ಮಾಡಲು ಪಣ ತೊಟ್ಟಿದ್ದಾರೆ. ಕೇಂದ್ರ ಸರಕಾರದ ಸ್ವಚ್ಛ ಭಾರತ್ ಸಮ್ಮರ್ ಇಂಟರ್ನ್ಶಿಪ್ ಅಭಿಯಾನದಡಿ ಮಂಗಳೂರು ನೆಹರೂ ಯುವ ಕೇಂದ್ರದ ಸಹಯೋಗದೊಂದಿಗೆ ಕಾರ್ಯವೆಸಗುತ್ತಿರುವ ಜಿಲ್ಲಾ ಪ್ರಶಸ್ತಿ ಪುರಸ್ಕೃತ ಕಾವು ನನ್ಯ ತುಡರ್ ಯುವಕ ಮಂಡಲದಿಂದ ತನ್ನ ಅಭಿಯಾನದ 20ನೇ ಹಂತವಾಗಿ ಸಂಘದ ಸದಸ್ಯ ರಾಘವ ಅವರ ಮನೆಯಲ್ಲಿ ಇಂಗುಗುಂಡಿ ನಿರ್ಮಿಸಲಾಯಿತು.
ಮಳೆಗಾಲದಲ್ಲಿ ಮನೆಯ ಮೇಲ್ಛಾವಣಿಯಿಂದ ಹರಿಯುವ ನೀರನ್ನು ಪೈಪು ಮೂಲಕ ಇಂಗುಗುಂಡಿಗೆ ಹರಿಯುವಂತೆ ಮಾಡಿ ಮಳೆನೀರನ್ನು ಭೂಮಿಗೆ ಇಂಗಿಸುವಂತೆ ಮಾಡಲಾಗಿದೆ. 8 ಫೀಟ್ ಆಳ, 3ಫೀಟ್ ಅಗಲವಿರುವ ಇಂಗುಗುಂಡಿಗೆ ಮಣ್ಣು ಕುಸಿಯದಂತೆ ರಿಂಗ್ ಅಳವಡಿಸಿ ಮುಚ್ಚಳ ಹಾಕಿ ನಿರ್ಮಾಣ ಮಾಡಲಾಗಿದೆ. ಕಾರ್ಯಕ್ರಮದಲ್ಲಿ ಯುವಕ ಮಂಡಲದ ಸ್ಥಾಪಕಾಧ್ಯಕ್ಷ ಸುಬ್ರಾಯ ಬಲ್ಯಾಯ, ಅಧ್ಯಕ್ಷ ಗಂಗಾಧರ ನಾಯ್ಕ, ಮಾಜಿ ಅಧ್ಯಕ್ಷರಾದ ಭಾಸ್ಕರ ಬಲ್ಯಾಯ, ಚಂದ್ರಶೇಖರ ಬಲ್ಯಾಯ, ಪದಾಧಿಕಾರಿಗಳಾದ ನವೀನ ನನ್ಯಪಟ್ಟಾಜೆ, ಜಗದೀಶ ನಾಯ್ಕ ಆಚಾರಿಮೂಲೆ, ಶ್ರೀಕಾಂತ್ ಗೌಡ, ಸತೀಶ ಮದ್ಲ, ರಾಘವ ಬಿ., ಸದಸ್ಯರಾದ ಧನಂಜಯ ನಾಯ್ಕ ಕುಂಞಿಕುಮೇರು, ರಾಮಣ್ಣ ನಾಯ್ಕ ಆಚಾರಿಮೂಲೆ, ಶ್ರೀಕುಮಾರ್ ಬಲ್ಯಾಯ, ಸಂಕಪ್ಪ ಪೂಜಾರಿ ಚಾಕೋಟೆ, ನಿರಂಜನ ಕಾವು, ಭವಿತ್ ರೈ, ಚೇತನ್ ಮದ್ಲ ಪಾಲ್ಗೊಂಡಿದ್ದರು.