ಅವಿಭಕ್ತ ಕುಟುಂಬಕ್ಕಿಲ್ಲ ಶೂನ್ಯ ಬಡ್ಡಿ ದರದ ಸಾಲ!

ಒಂದು ಪಡಿತರಕ್ಕೆ 3 ಲಕ್ಷ ರೂ. ಮಿತಿ; ಮಿಗತೆ ಸಾಲಕ್ಕೆ ಶೇ.7.4 ಬಡ್ಡಿದರ ಪಾವತಿ ಕಡ್ಡಾಯ

Team Udayavani, May 3, 2020, 8:56 AM IST

ಅವಿಭಕ್ತ ಕುಟುಂಬಕ್ಕಿಲ್ಲ ಶೂನ್ಯ ಬಡ್ಡಿ ದರದ ಸಾಲ!

ಮುಂಡಾಜೆ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ಇದುವರೆಗೆ ಮಂಗಳಾ ಕಿಸಾನ್‌ ಕ್ರೆಡಿಟ್‌ ಕಾರ್ಡ್‌ (ಎಂಕೆಸಿಸಿ) ಹೆಸರಿನಲ್ಲಿ ಸಿಗುತ್ತಿದ್ದ ಶೂನ್ಯ ಬಡ್ಡಿ ದರದ ಸಾಲ ಇನ್ನು ಮುಂದೆ ಅವಿಭಕ್ತ ಕುಟುಂಬಗಳ ಎಲ್ಲ ರೈತರಿಗೂ ಲಭ್ಯವಾಗದು. ಈ ಸಂಬಂಧ ರಾಜ್ಯ ಸರಕಾರ ಹೊಸ ನಿಯಮಾವಳಿ ಹೊರಡಿಸಿದೆ.

ಪ್ರಾ.ಕೃ.ಪ.ಸ. ಸಂಘ ಗಳಲ್ಲಿ ರೈತರಿಗೆ ಎಂಕೆಸಿಸಿ ಹೆಸರಲ್ಲಿ 3 ಲಕ್ಷ ರೂ. ತನಕ ಸಾಲ ಸಿಗುತ್ತಿದೆ. ವರ್ಷದೊಳಗೆ ಅಸಲು ಮೊತ್ತ ಪಾವತಿಸಿದರೆ ನವೀಕರಿಸಲು ಅವಕಾಶ ಇದೆ. ಈ ಸಾಲ ಶೇ. 12 ಬಡ್ಡಿ ಹೊಂದಿ ದ್ದರೂ ಶೇ. 7.4 ಬಡ್ಡಿಯನ್ನು ರಾಜ್ಯ ಸರಕಾರ ಹಾಗೂ ಇನ್ನುಳಿದ ಶೇ. 4.6ನ್ನು ಕೇಂದ್ರ ಸರಕಾರ ಮತ್ತು ನಬಾರ್ಡ್‌ ಭರಿಸುತ್ತವೆ. ಅವಿಭಕ್ತ ಕುಟುಂಬಗಳಲ್ಲಿ ಕೃಷಿ ಜಮೀನನ್ನು ಪಾಲು ಮಾಡಿಕೊಂಡರೂ ಒಂದೇ ಮನೆಯಲ್ಲಿ, ಒಂದೇ ಪಡಿತರ ಚೀಟಿ ಪಡೆದು ವಾಸವಿರುವ ಅನೇಕ ಮಂದಿ ಇದ್ದಾರೆ. ಉದಾಹರಣೆಗೆ ಮೂವರು ಸಹೋದರರು ಇದ್ದರೆ ಆಸ್ತಿ ಪಾಲು ಮಾಡಿ ಕೊಂಡು ಅವರವರ ಹೆಸರಲ್ಲಿ ಪಹಣಿ ಪತ್ರ ಹೊಂದಿರು ತ್ತಾರೆ. ಆದರೂ ಒಂದೇ ಮನೆಯಲ್ಲಿದ್ದು ಒಂದೇ ಪಡಿತರ ಚೀಟಿ ಹೊಂದಿರುತ್ತಾರೆ. ಕೆಲವೆಡೆ ಪತಿ-ಪತ್ನಿ ಬೇರೆ ಬೇರೆ ಪಹಣಿ ಪತ್ರ ಹೊಂದಿರುವುದೂ ಇದೆ. ಇದುವರೆಗೆ ಇಂಥವರೂ ಪ್ರಾ.ಕೃ.ಪ.ಸ. ಸಂಘಗಳಿಂದ 3 ಲಕ್ಷ ರೂ. ವರೆಗಿನ ಕೃಷಿ ಸಾಲವನ್ನು ಶೂನ್ಯ ಬಡ್ಡಿದರದಲ್ಲಿ ಪಡೆಯಲು ಅರ್ಹರಾಗಿದ್ದರು.

ಬದಲಾದ ನಿಯಮ ಆದರೆ ಇತ್ತೀಚೆಗೆ ಕರ್ನಾಟಕ ಸರಕಾರವು 2019ರ ಎ. 1ರಿಂದ ಪೂರ್ವಾನ್ವಯ ಆಗುವಂತೆ ಹೊಸ ನಿಯಮ ಪ್ರಕಟಿಸಿದೆ. ಇದರಂತೆ ಒಂದು ಕುಟುಂಬದಲ್ಲಿ ಆಸ್ತಿ ಎಷ್ಟು ಜನರಿಗೆ ಪಾಲಾಗಿದ್ದರೂ ಪಹಣಿ ಪತ್ರ ಪ್ರತ್ಯೇಕವಾಗಿದ್ದರೂ ಹೆಸರು ಒಂದೇ ಪಡಿತರ ಚೀಟಿಯಲ್ಲಿ ಇದ್ದರೆ ಒಟ್ಟು 3 ಲಕ್ಷ ರೂ. ಸಾಲ ಮಾತ್ರ ಶೂನ್ಯ ಬಡ್ಡಿ ದರಕ್ಕೆ ಅರ್ಹವಾಗುತ್ತದೆ. ಉದಾಹರಣೆಗೆ ಒಂದು ಕುಟುಂಬದ ಮೂವರು ತಲಾ 2 ಲಕ್ಷ ರೂ.ಗಳಂತೆ 6 ಲಕ್ಷ ರೂ. ಸಾಲ ಪಡೆದಿದ್ದರೆ 3 ಲಕ್ಷ ರೂ.ಗೆ ಶೂನ್ಯ ಬಡ್ಡಿದರ ಅನ್ವಯಿಸುತ್ತದೆ. ಉಳಿದ ಸಾಲಕ್ಕೆ ರಾಜ್ಯ ಸರಕಾರದ ಭಾಗವಾದ ವಾರ್ಷಿಕ ಶೇ. 7.4 ಬಡ್ಡಿದರ ಪಾವತಿಸಬೇಕು. ಈ ಹೊಸ ಕಾನೂನಿನಿಂದ ಅನೇಕ ಅವಿಭಕ್ತ ಕುಟುಂಬಗಳು ಕಂಗಾಲಾಗಿವೆ. ಕೊರೊನಾ, ಮಾರುಕಟ್ಟೆ ಸಮಸ್ಯೆ  ಇತ್ಯಾದಿಗಳಿಂದ ಈಗಾಗಲೇ ಕಂಗೆಟ್ಟಿರುವ ರೈತ ರಿಗೆ ಈ ನಿಯಮ ಗಾಯದ ಮೇಲೆ ಬರೆ ಎಳೆದಿದೆ.

ಬೇರೆ ಬೇರೆ ಪಹಣಿ ಪತ್ರ ಹೊಂದಿದ್ದರೂ ಸಾಲ ಪಡೆದವರ ಹೆಸರು ಒಂದೇ ಪಡಿತರ ಚೀಟಿಯಲ್ಲಿದ್ದರೆ 3 ಲಕ್ಷ ರೂ. ಮೊತ್ತಕ್ಕೆ ಮಾತ್ರ ಶೂನ್ಯ ಬಡ್ಡಿದರ ಅನ್ವಯಿಸುತ್ತದೆ.
– ಪ್ರವೀಣ್‌ ನಾಯಕ್‌, ಉಪ ನಿಬಂಧಕರು, ಸಹಕಾರ ಇಲಾಖೆ, ಮಂಗಳೂರು

ಈ ನಿಯಮವನ್ನು ಕೈ ಬಿಡುವಂತೆ ಈಗಾ ಗಲೇ ಹಲವಾರು ಮನವಿಗಳು ಬಂದಿದ್ದು, ಸರಕಾರದ ಗಮನಕ್ಕೆ ತರಲಾಗುವುದು.
– ಹರೀಶ್‌ ಪೂಂಜ,  ಶಾಸಕರು, ಬೆಳ್ತಂಗಡಿ

ಟಾಪ್ ನ್ಯೂಸ್

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ

1-qwqwewqe

IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್

1-wqqwewqe

BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು

11-belthangady

LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ

Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ

ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.