12 ಗೋಶಾಲೆಗಳಿಗೆ 24 ಲ.ರೂ. ನೆರವು ಮಂಜೂರು
Team Udayavani, May 7, 2020, 5:18 AM IST
ಸಾಂದರ್ಭಿಕ ಚಿತ್ರ.
ಉಡುಪಿ/ಮಂಗಳೂರು: ದ.ಕ. ಮತ್ತು ಉಡುಪಿ ಜಿಲ್ಲೆಗಳ ವಿವಿಧ ಗೋಶಾಲೆಗಳಿಗೆ ರಾಜ್ಯ ಧಾರ್ಮಿಕ ಪರಿಷತ್ನ ಸಾಮಾನ್ಯ ಸಂಗ್ರಹಣ ನಿಧಿಯಿಂದ ಒಟ್ಟು 24 ಲ.ರೂ. ನೆರವನ್ನು ಧಾರ್ಮಿಕ ದತ್ತಿ ಸಚಿವ ಮತ್ತು ಪರಿಷತ್ ಅಧ್ಯಕ್ಷ ಕೋಟ ಶ್ರೀನಿವಾಸ ಪೂಜಾರಿ ಮಂಜೂರು ಮಾಡಿದ್ದಾರೆ. ಲಾಕ್ಡೌನ್ ಕಾರಣದಿಂದ ಗೋಶಾಲೆಗಳ ಮೇವು ಮತ್ತು ಇತರ ಖರ್ಚಿಗಾಗಿ ಈ ಸಹಾಯಧನವನ್ನು ಮಂಜೂರುಗೊಳಿಸಲಾಗಿದೆ.
ಬಂಟ್ವಾಳ ಪಜೀರು ಬೀಜಗುರಿಯ ಗೋ ವನಿತಾ ಶ್ರಯ ಗೋಶಾಲೆಗೆ 5 ಲ.ರೂ., ನೀಲಾವರ ಗೋಶಾಲೆಗೆ 3 ಲ.ರೂ., ತೆಕ್ಕಟ್ಟೆ ಸಮೀಪದ ಹೂವಿನಕೆರೆ ಗೋಶಾಲೆ, ಬಂಟ್ವಾಳ ಕನ್ಯಾನ ಭಾರತ ಸೇವಾಶ್ರಮದ ಗೋಶಾಲೆ, ಕೊಕ್ಕಡ ಹಳ್ಳಿಂಗೇರಿ ಗೋಶಾಲೆ, ಕಟೀಲು ದೇವಸ್ಥಾನದ ಗೋಶಾಲೆ, ಒಡಿಯೂರು ಗೋಶಾಲೆ, ಮಡ್ಯಾರ್ ಕೋಟೆಕಾರ್ನ ಗೋಶಾಲೆ, ಕಲ್ಲಡ್ಕದ ಶ್ರೀ ರಾಮ ಗೋಶಾಲೆಗೆ ತಲಾ 2 ಲ.ರೂ., ಬೆಳ್ತಂಗಡಿ ಗಂಡಿಬಾಗಿಲಿನ ಸಿಯೋನ್ ಆಶ್ರಮದ ಗೋಶಾಲೆ, ಸೌತಡ್ಕ ಗೋಶಾಲೆಗೆ ತಲಾ 1 ಲ.ರೂ. ಮೊತ್ತವನ್ನು ಮಂಜೂರು ಮಾಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮನೆ ರತ್ನಾಕರ್
BJP ಮೋದಿ ಮಾಡೆಲ್ ಹೆಸರಿನಲ್ಲಿ ಚೊಂಬಿನ ಮಾಡೆಲ್ ನೀಡಿದೆ: ಸುರ್ಜೇವಾಲ
Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!
Bidar; ಬಿರುಗಾಳಿ ಸಹಿತ ಭಾರಿ ಮಳೆ :ಸಿಡಿಲು ಬಡಿದು ರೈತ ಸಾವು
Kalaburgi: ಮಹಿಳೆಯ ಬಾತ್ ರೂಮ್ ವಿಡಿಯೋ ರೆಕಾರ್ಡ್ ಮಾಡಿದ ಸೆಕ್ಯೂರಿಟಿ ಗಾರ್ಡ್