ಕರಕುಶಲಕರ್ಮಿಗಳಿಗೆ ಗೌರವ = ಪರಂಪರೆಗೆ ಗೌರವ

ಸಿಸಿಐ ಪ್ರಶಸ್ತಿ ವಿತರಿಸಿ ಡಾ| ಸಂಧ್ಯಾ ಪೈ

Team Udayavani, Apr 3, 2019, 12:15 PM IST

020419Astro05

ಉಡುಪಿ: ಕರಕುಶಲಕರ್ಮಿ ಗಳನ್ನು ಸಮ್ಮಾನಿಸುವುದೆಂದರೆ ನಮ್ಮ
ಪರಂಪರೆ, ಸಂಸ್ಕೃತಿಯನ್ನು ಸಮ್ಮಾನಿಸಿ ದಂತೆ ಎಂದು “ತರಂಗ’ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕಿ ಡಾ| ಸಂಧ್ಯಾ ಎಸ್‌. ಪೈ ಬಣ್ಣಿಸಿದರು.
ಮಂಗಳವಾರ ಮಣಿಪಾಲದಲ್ಲಿ ನಡೆದ ಚೆನ್ನೈಯ ಭಾರತೀಯ ಕರಕುಶಲ ಮಂಡಳಿ (ಸಿಸಿಐ) ವಾರ್ಷಿಕ ಅಧಿವೇಶನದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತ ನಾಡಿದ ಅವರು, ಕರಕುಶಲ ವೃತ್ತಿಪರರನ್ನು ಗುರುತಿಸದೆ ಹೋದರೆ ಮತ್ತು ಮುಂದಿನ ಪೀಳಿಗೆಗೆ ಇದನ್ನು ಹಸ್ತಾಂತರಿಸದಿದ್ದರೆ ಭವಿಷ್ಯದಲ್ಲಿ ಇದಿಲ್ಲವಾಗಬಹುದು ಎಂದು ಕಳವಳ ವ್ಯಕ್ತಪಡಿಸಿದರು.
ಅಧ್ಯಕ್ಷತೆಯನ್ನು ಸಿಸಿಐ ಅಧ್ಯಕ್ಷೆ ಗೀತಾರಾಮ್‌ ವಹಿಸಿದ್ದರು. ವಿವಿಧ ಸಾಧಕ ಕರಕುಶಲಕರ್ಮಿಗಳಾದ ಮಧ್ಯಪ್ರದೇಶದ ಹಾಜಿ ಇಬ್ರಾಹಿಂ ಕತ್ರಿ, ಬೆಂಗಳೂರಿನ ಎನ್‌. ಗಣೇಶ್‌, ಅಹ್ಮದಾಬಾದ್‌ನ ಕಾರ್ತಿಕ್‌ ಚೌಹಾಣ್‌, ರಾಜಸ್ಥಾನ ಜೈಪುರದ ಮೋಹಿತ್‌ ಜಾಂಗೇಡ್‌, ತಮಿಳುನಾಡು ಕಾರೈಕುಡಿಯ ಎಸ್‌.ಪಿ. ಮುಖಯ್ಯ, ಪಶ್ಚಿಮ ಬಂಗಾಲ ನಾಡಿಯಾದ ಬರೇನ್‌ಕುಮಾರ್‌ ಬಸಿಕ್‌, ಒಡಿಶಾ ಪುರಿಯ ಪ್ರಶಾಂತ್‌ ಮಹಾರಾಣ ಅವರನ್ನು ತಲಾ 10,000 ರೂ., ಶಾಲು, ಹಾರವನ್ನು ಒಳಗೊಂಡ ವಾರ್ಷಿಕ ಪ್ರಶಸ್ತಿಗಳೊಂದಿಗೆ ಪುರಸ್ಕರಿಸ ಲಾಯಿತು. ಸಿಸಿಐ ಮಾಜಿ ಅಧ್ಯಕ್ಷೆ ಉಷಾ ಕೃಷ್ಣ ಸ್ವಾಗತಿಸಿ ಸುಧಾ ರವಿ ವಂದಿಸಿದರು.

ನೈಸರ್ಗಿಕ ಬುದ್ಧಿವಂತರು
ನಾವು ರ್‍ಯಾಂಕ್‌ ಗಳಿಸಿದವರನ್ನು ಗೌರವಿಸುತ್ತೇವೆ. ಬುದ್ಧಿಮತ್ತೆ ಹೊಂದಿದವರು ಸ್ಮರಣ ಶಕ್ತಿಯಿಂದ ಸಾಮರ್ಥ್ಯವನ್ನು ತೋರಿಸುತ್ತಾರೆ. ಕರಕುಶಲಕರ್ಮಿಗಳಾದರೋ ನೈಸರ್ಗಿಕ ಬುದ್ಧಿವಂತರು ಎಂದು ಕರೆಯಬಹುದು. ಅವರು ಸಹಜವಾದ ನೈಸರ್ಗಿಕ ಭಾವನೆಗಳನ್ನು ಸ್ಮರಣೀಯವಾಗುವಂತೆ ಮತ್ತು ಕಣ್ಣಿಗೆ ಕಾಣುವಂತೆ ಸೃಷ್ಟಿಸುತ್ತಾರೆ. ಈಗ ಮಕ್ಕಳಿಗೆ ನಡೆಯುತ್ತಿರುವ ವಿವಿಧ ಶಿಬಿರಗಳಲ್ಲಿ ಇಂತಹ ಕಲೆಗಳನ್ನೂ ಪರಿಚಯಿಸಬೇಕು. ನಾವೀಗ ಹಣ, ಐಷಾರಾಮಿತನ, ಅಂತಸ್ತು, ಅಧಿಕಾರಗಳ ಹಿಂದೆ ಹೋಗುತ್ತಿರುವುದರಿಂದ ಕರಕುಶಲಕಲೆಗಳನ್ನು ಯುವ ಪೀಳಿಗೆಗೆ ಹಸ್ತಾಂತರಿಸದೆ ಹೋದರೆ ಈ ಕಲೆ ಉಳಿಯುವುದಿಲ್ಲ ಎಂದರು.

ಟಾಪ್ ನ್ಯೂಸ್

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

1-aewr

DRDO; ನಿರ್ಭಯ್‌ ಪರೀಕ್ಷಾರ್ಥ ಉಡಾವಣೆ ಯಶಸ್ವಿ

1eewqe

Iran ವಶದಲ್ಲಿದ್ದ ಹಡಗಿನ ಮಹಿಳಾ ಸಿಬಂದಿ ವಾಪಸ್‌

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ

Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ

8

Malpe Beach: ಈಜಲು ಹೋದ ಮೂವರು ಸಮುದ್ರಪಾಲು; ಓರ್ವನ ಸಾವು, ಇಬ್ಬರ ರಕ್ಷಣೆ

4

ಕೋತಲಕಟ್ಟೆ: ಹೆದ್ದಾರಿ ಬಳಿ ನಿಲ್ಲಿಸಿದ್ದ ಸ್ಕೂಟಿ ಕಳವು

7-thekkatte

Thekkatte ಶ್ರೀರಾಮ ಭಜನಾ ಮಂದಿರದಲ್ಲಿ ರಾಮನವಮಿ: ರಾವಣ ದಹನ ಮತ್ತು ಓಕುಳಿ ಉತ್ಸವ ಸಂಪನ್ನ

Manipal ಕೌಶಲ ಅಭಿವೃದ್ಧಿ ಕೇಂದ್ರ -ಭುವನೇಂದ್ರ ಕಾಲೇಜು ಒಡಂಬಡಿಕೆ

Manipal ಕೌಶಲ ಅಭಿವೃದ್ಧಿ ಕೇಂದ್ರ -ಭುವನೇಂದ್ರ ಕಾಲೇಜು ಒಡಂಬಡಿಕೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

30

CET Exam: ಮೊದಲ ದಿನ ಸುಸೂತ್ರವಾಗಿ ನಡೆದ ಸಿಇಟಿ

1-wqeqwe

Maharashtra; ರತ್ನಾಗಿರಿ- ಸಿಂಧುದುರ್ಗದಲ್ಲಿ ರಾಣೆ vs ಠಾಕ್ರೆ ಕಾದಾಟ

1-HM

Mathura ನನ್ನನ್ನು ಗೋಪಿಕೆಯೆಂದು ಭಾವಿಸುವೆ: ಬಿಜೆಪಿ ಅಭ್ಯರ್ಥಿ ಹೇಮಾ

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.