ಜಲ್ಲಿ ರಾಶಿಗೆ ಮುಗ್ಗರಿಸಿ ಬೀಳುವ ಬೈಕ್ ಸವಾರರು
ಮಲ್ಪೆ ಬಾಪುತೋಟ ಬಂದರು ಪ್ರದೇಶ
Team Udayavani, May 1, 2022, 12:03 PM IST
ಮಲ್ಪೆ: ಇಲ್ಲಿನ 3ನೇ ಹಂತದ ಮೀನುಗಾರಿಕೆ ಬಂದರಿನ ಬಾಪುತೋಟ ದಕ್ಕೆಗೆ ಹೋಗುವ ಮೀನುಗಾರಿಕೆ ಇಲಾಖೆಗೆ ಸಂಬಂಧಿಸಿದ ರಸ್ತೆಯ ಬದಿಯಲ್ಲಿ ವಾರಾಹಿ ಕುಡಿಯುವ ನೀರಿನ ಪೈಪ್ಲೈನ್ಗಾಗಿ ಆಗೆತ ಮಾಡಿದ ಜಾಗದಲ್ಲಿ ದಿನನಿತ್ಯ ಅಪಘಾತಗಳು ನಡೆಯುತ್ತದೆ.
ಇದಕ್ಕೆ ಮುಖ್ಯ ಕಾರಣ ಅಗೆತ ಮಾಡಿ ಜಾಗವನ್ನು ಮುಚ್ಚಿ ರಸ್ತೆಯ ಉದ್ದಕ್ಕೆ ಸದ್ಯ ಜಲ್ಲಿ ಕಲ್ಲಿನ ರಾಶಿಯನ್ನು ಸುರಿಯಲಾಗಿದೆ. ದ್ವಿಚಕ್ರ ಸವಾರರು ರಸ್ತೆ ಬದಿಗೆ ಸರಿದರೆ ಬೈಕ್ನಿಂದ ಜಾರಿ ಬಿದ್ದು ಅಪಘಾತಗಳು ನಡೆಯುತ್ತಿರುವುದು ಸಾಮಾನ್ಯವಾಗಿದೆ ಬಿಟ್ಟಿದೆ.
ಕಳೆದ ಮೂರು ತಿಂಗಳ ಹಿಂದೆ ರಸ್ತೆಯ ಬದಿಯಲ್ಲಿ ವಾರಾಹಿಯ ಕುಡಿಯುವ ನೀರಿನ ಪೈಪ್ಲೈನ್ ಆಳವಡಿಸುವ ಕಾರ್ಯ ನಡೆದಿದೆ. 3ನೇ ಹಂತದ ಬಂದರಿನ ಆರಂಭದಿಂದ ಪಡುಕರೆ ಸೇತುವೆವರೆಗೆ ರಸ್ತೆಯನ್ನು ಅಗೆದು ಮುಚ್ಚಲಾಗಿತ್ತು. ಸಾಮಾನ್ಯವಾಗಿ ಆಗೆದ ರಸ್ತೆಯ ಮಣ್ಣನ್ನು ಸಮತಟ್ಟುಗೊಳಿಸಿ ರಸ್ತೆಯನ್ನು ಮೊದಲಿದ್ದಂತೆ ಮಾಡಿ ಹೋಗಬೇಕಾಗಿರುವುದು ಇಲಾಖೆಯ ಕೆಲಸ. ಆದರೆ ಇಲ್ಲಿ ಮಾತ್ರ ಡಾಮರು ಹಾಕದೇ ಜಲ್ಲಿ ಸುರಿದು ಹೋಗಿದ್ದರು ಎನ್ನಲಾಗಿದೆ.
ಮೀನುಗಾರಿಕೆ ಬಂದರು ರಸ್ತೆಯಾದ್ದರಿಂದ ರಾತ್ರಿ ಹಗಲೆನ್ನದೇ ಇಲ್ಲಿ ನಿತ್ಯ ಸಂಚಾರ ಇರುತ್ತದೆ. ಮಾತ್ರವಲ್ಲದೆ ವಾರಾಂತ್ಯದಲ್ಲಿ ಪಡುಕರೆ ಬೀಚ್ಗೆ ಹೋಗುವ ಪ್ರವಾಸಿಗರು ಈ ರಸ್ತೆಯಲ್ಲಿ ಸಂಚರಿಸುತ್ತಿದ್ದು ಅಪಘಾತಗಳಿಗೆ ಎಡೆಮಾಡಿ ಕೊಟ್ಟಂತಾಗುತ್ತದೆ.
ಶೀಘ್ರ ಕ್ರಮ
ವಾರಾಹಿ ಕುಡಿಯುವ ನೀರಿನ ಯೋಜನೆಗೆ ಕೆಲವು ಭಾಗದ ರಸ್ತೆಯನ್ನು ಅಗೆದಿದ್ದಾರೆ. ಅಗೆದ ರಸ್ತೆಯನ್ನು ಮೊದಲಿನಂತೆಯೇ ಸರಿಪಡಿಸಬೇಕಾದದ್ದು ಅದಕ್ಕೆ ಸಂಬಂಧಪಟ್ಟವರ ಕೆಲಸ. ವಾರದೊಳಗೆ ಅವರನ್ನು ಕರೆಸಿ ಮಲ್ಪೆ ಬಂದರು ಭಾಗದ ರಸ್ತೆಯನ್ನು ಸರಿಪಡಿಸಲು ಕ್ರಮ ಕೈಗೊಳ್ಳಲಾಗುವುದು. -ಸುಮಿತ್ರಾ ನಾಯಕ್, ಅಧ್ಯಕ್ಷರು, ಉಡುಪಿ ನಗರಸಭೆ
ನಿತ್ಯ ಅಪಘಾತ
ರಸ್ತೆ ಬದಿ ಅಗೆದ ಹೊಂಡದ ಮಣ್ಣು ಹಾಗೂ ಇದರ ಮೇಲೆ ಹಾಕಿದ ಜಲ್ಲಿ ರಾಶಿಯಿಂದಾಗಿ ಇಲ್ಲಿ ನಿತ್ಯ ಅಪಘಾತಗಳು ನಡೆಯುತ್ತವೆ. ಸಾಕಷ್ಟು ಮಂದಿ ಕೈಕಾಲು ಮುರಿದು ಕೊಂಡಿದ್ದಾರೆ. ಸಂಬಂಧಪಟ್ಟವರು ತತ್ಕ್ಷಣ ಸರಿಪಡಿಸಿಬೇಕು. -ಬೂದ ಪೂಜಾರಿ, ಸ್ಥಳೀಯ ಅಂಗಡಿ ಮಾಲಕರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ
Malpe Beach: ಈಜಲು ಹೋದ ಮೂವರು ಸಮುದ್ರಪಾಲು; ಓರ್ವನ ಸಾವು, ಇಬ್ಬರ ರಕ್ಷಣೆ
ಕೋತಲಕಟ್ಟೆ: ಹೆದ್ದಾರಿ ಬಳಿ ನಿಲ್ಲಿಸಿದ್ದ ಸ್ಕೂಟಿ ಕಳವು
Thekkatte ಶ್ರೀರಾಮ ಭಜನಾ ಮಂದಿರದಲ್ಲಿ ರಾಮನವಮಿ: ರಾವಣ ದಹನ ಮತ್ತು ಓಕುಳಿ ಉತ್ಸವ ಸಂಪನ್ನ
Manipal ಕೌಶಲ ಅಭಿವೃದ್ಧಿ ಕೇಂದ್ರ -ಭುವನೇಂದ್ರ ಕಾಲೇಜು ಒಡಂಬಡಿಕೆ
MUST WATCH
ಹೊಸ ಸೇರ್ಪಡೆ
Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್ಪಿ
Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ
Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ
Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ
Hunsur: ನಾಗರಹೊಳೆಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಕಾಡುಕೋಣ ಬಲಿ