ಬ್ರಹ್ಮಾವರ: ಒತ್ತುವರಿ ಜಾಗ ಸರ್ವೇ
Team Udayavani, Jul 7, 2020, 5:29 AM IST
ಬ್ರಹ್ಮಾವರ: ಚಾಂತಾರು ಗ್ರಾಮ ವ್ಯಾಪ್ತಿಯ ಬ್ರಹ್ಮಾವರ ಪೇಟೆಯಲ್ಲಿ ಒತ್ತು ವರಿ ಮಾಡಿಕೊಂಡ ಸರಕಾರಿ ಜಾಗ ಸರ್ವೇ ನಡೆಯಿತು.
ಪಿಡಬ್ಲ್ಯುಡಿ ರಸ್ತೆ ಮಾರ್ಜಿನ್ನಲ್ಲಿ ಅನಧಿಕೃತ ಒತ್ತುವರಿಯನ್ನು ಅಳತೆ ಮಾಡಲಾಯಿತು.
ಸರ್ವೇ ಅನಂತರ ರಸ್ತೆ ಮಾರ್ಜಿನ್ ಅತಿಕ್ರಮಿಸಿಕೊಂಡಿರುವ ಅಂಗಡಿಗಳಿಗೆ ನೋಟಿಸ್ ನೀಡಲಾಗುತ್ತದೆ ಎಂದು ಲೋಕೋಪಯೋಗಿ ಇಲಾಖೆ ಸಹಾಯಕ ಎಂಜಿನಿಯರ್ ಗಿರೀಶ್ ತಿಳಿಸಿದರು.
ಲೋಕೋಪಯೋಗಿ, ಕಂದಾಯ ಹಾಗೂ ಪೊಲೀಸ್ ಇಲಾಖೆಯ ಸಹಯೋಗದಲ್ಲಿ ಸರ್ವೇ ನಡೆಯಿತು.
ಹೇರೂರು ನಾಗರಿಕ ಹೋರಾಟ ಸಮಿತಿಯ ಸದಾಶಿವ ಶೆಟ್ಟಿ, ಬ್ರಹ್ಮಾವರ ಪೊಲೀಸ್ ಠಾಣೆಯ ಶಾಂತಾರಾಜ್, ಅಶೋಕ್ ಮೊದಲಾದವರು ಉಪಸ್ಥಿತರಿದ್ದರು.