ಉಡುಪಿ: ಕರ್ತವ್ಯಕ್ಕೆ ಹಾಜರಾಗದ ಕೆಎಸ್ಆರ್ ಟಿಸಿ ನೌಕರರು, ದೂರದೂರಿನ ಪ್ರಯಾಣಿಕರ ಪರದಾಟ
Team Udayavani, Apr 7, 2021, 9:33 AM IST
ಉಡುಪಿ: ಕೆಎಸ್ಆರ್ ಟಿಸಿ ನೌಕರರ ಮುಷ್ಕರ ಉಡುಪಿ ಜಿಲ್ಲೆಯಲ್ಲಿಯೂ ಕಂಡು ಬಂತು. ಹೊರ ಜಿಲ್ಲೆಗೆ ಹೋಗುವವರು ಬಸ್ ಸ್ಟ್ಟಾಂಡ್ ನಲ್ಲಿ ಕಾದು ಕುಳಿತ ದೃಶ್ಯಗಳು ಉಡುಪಿ ಸರ್ಕಾರಿ ಬಸ್ ನಿಲ್ದಾಣದಲ್ಲಿ ಕಂಡು ಬಂತು.
ಉಡುಪಿ ಕೆಎಸ್ಆರ್ ಟಿಸಿ ಡಿಪೋದಿಂದ ಮಂಗಳವಾರ ಹೊರಟ ಬಸ್ಸುಗಳು ಆಗಮಿಸಲಿಲ್ಲ. ಉಡುಪಿ ಡಿಪೋದಲ್ಲಿ ನಿಂತಿರುವ ಬಸ್ಸುಗಳೂ ನೌಕರರು ಆಗಮಿಸದ ಕಾರಣ ಸ್ಥಗಿತಗೊಂಡಿದ್ದವು.
ಇದನ್ನೂ ಓದಿ:ಕರಾವಳಿಗೆ ತಟ್ಟದ ಬಸ್ ಬಂದ್ ಬಿಸಿ: ಮಂಗಳೂರು KSRTC ಬಸ್ ನಿಲ್ದಾಣದೊಳಗೆ ಬಂದ ಖಾಸಗಿ ಬಸ್ ಗಳು
ಬೆಳಗ್ಗಿನ ಹೊತ್ತು ಶಿವಮೊಗ್ಗ, ಚಿತ್ರದುರ್ಗ ಸೇರಿದಂತೆ ದೂರದ ಊರುಗಳಿಗೆ ತೆರಳುವವರು ತೊಂದರೆಗೊಳಗಾದರು. ಇದರಿಂದಾಗಿ ಖಾಸಗಿ ಬಸ್ಸುಗಳಲ್ಲಿ ಪ್ರಯಾಣಿಕರು ಅತ್ಯಧಿಕ ಸಂಖ್ಯೆಯಲ್ಲಿ ಕಂಡುಬಂದರು.
ಇದನ್ನೂ ಓದಿ: ಮುಷ್ಕರದ ಮಧ್ಯೆಯೂ ಬಸ್ ಬಂತು: ಕರ್ತವ್ಯ ಪ್ರಜ್ಞೆ ಮೆರೆದ ಹೊಸಪೇಟೆ ಡಿಪೋ ನೌಕರರು
ಇದನ್ನೂ ಓದಿ:ಸಾರಿಗೆ ನೌಕರರ ಮುಷ್ಕರ: ಖಾಸಗಿ ಬಸ್ ಓಡಾಟ, ಪ್ರಯಾಣಿಕರ ಪರದಾಟ