ಜೂ.1ರಿಂದ ಉಡುಪಿಯಲ್ಲಿ ನಿರಂತರವಾಗಿ ಖಾಸಗಿ ಬಸ್ಸು ಓಡಾಟ: ಶಾಸಕ ರಘುಪತಿ ಭಟ್
Team Udayavani, May 30, 2020, 5:50 PM IST
ಉಡುಪಿ: ಜಿಲ್ಲೆಯ ಜನತೆ ಬಹುವಾಗಿ ನಂಬಿಕೊಂಡಿರುವ ಖಾಸಗಿ ಬಸ್ಸುಗಳ ಓಡಾಟವನ್ನು ಸೋಮವಾರದಿಂದ ಆರಂಭಿಸಲು ನಿರ್ಧರಿಸಲಾಗಿದೆ ಎಂದು ಶಾಸಕ ಕೆ. ರಘುಪತಿ ಭಟ್ ತಿಳಿಸಿದ್ದಾರೆ.
ಕೋವಿಡ್ – 19 ಮಹಾಮಾರಿಯ ಸಂಕಷ್ಟದಿಂದ ಲಾಕ್ ಡೌನ್ ಹೇರಿಕೆಯಾದ ದಿನಗಳಿಂದ ಉಡುಪಿಯಲ್ಲಿ ಖಾಸಗಿ ಬಸ್ಸು ಸಂಚಾರ ಸಂಪೂರ್ಣ ತಡೆ ಹಿಡಿಯಲಾಗಿತ್ತು. ಸದ್ಯ ಬಸ್ ಸಂಚಾರಕ್ಕೆ ಸರಕಾರ ಅನುಮತಿ ನೀಡಿರದ್ದರು ಜನರು ಬಸ್ಸೇರಲು ಆತಂಕ ತೋರುವ ಕಾರಣ ಕಳೆದ ಒಂದು ವಾರಗಳಿಂದ ಉಚಿತ ಸಿಟಿ ಬಸ್ ಸೇವೆ ನೀಡಲಾಗಿತ್ತು. ಈ ಸೇವೆ ಭಾನುವಾರ ಅಂತ್ಯವಾಗುತ್ತಿದೆ.
ಈ ಸಂಬಂಧ ಇಂದು ಖಾಸಗಿ ಬಸ್ಸು ಮಾಲಕರೊಂದಿಗೆ ಶಾಸಕರು ಚರ್ಚೆ ನಡೆಸಿದ್ದು, ಬಸ್ಸಿನ ಸಿಬ್ಬಂದಿಗಳ ರಕ್ಷಣೆಯ ಜೊತೆಗೆ ಪ್ರಯಾಣಿಕರ ರಕ್ಷಣೆಗೂ ಆದ್ಯತೆಯನ್ನು ನೀಡಿ ಸೋಮವಾರ ನಿರಂತರವಾಗಿ ಉಡುಪಿಯಲ್ಲಿ ಖಾಸಗಿ ಸಿಟಿ ಬಸ್ಸು ಓಡಿಸುವ ಬಗ್ಗೆ ನಿರ್ಧರಿಸಲಾಗಿದೆ.
ಪ್ರಾರಂಭಿಕವಾಗಿ 25 ಬಸ್ಸುಗಳು ನಂತರ ಜನರ ಬೇಡಿಕೆಗಣುಗುಣವಾಗಿ ಬಸ್ಸು ಓಡಿಸುವುದು. ಬಸ್ಸಿನಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್ ಧರಿಸುವುದು, ಸ್ಯಾನಿಟೈಸರ್ ಬಳಸುವುದು ಹಾಗೂ ಬಸ್ಸನ್ನು ಸ್ಯಾನಿಟೈಸಿಂಗ್ ಮಾಡುವುದು ಕಡ್ಡಾಯವಾಗಿರುತ್ತದೆ ಎಂದು ತೀರ್ಮಾನಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ
MUST WATCH
ಹೊಸ ಸೇರ್ಪಡೆ
Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ
Delhi Police: ಮಾರುತಿ ಸ್ವಿಫ್ಟ್ ಕಾರಿನಲ್ಲಿ 30ಕ್ಕೂ ಅಧಿಕ ಕುರಿ, ಮೇಕೆ ಸಾಗಾಟ!
BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ
Kannada Cinema; ಬ್ಯಾಡ್ ಬಾಯ್ಸ್ ಬಂದ್ರು..! ವಿದ್ಯಾರ್ಥಿ ವಿದ್ಯಾರ್ಥಿನಿಯರ ಹಾಡಿದು…
Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ