ತುಳು ಲಿಪಿ ಕಲಿಕೆಯತ್ತ ಕರಾವಳಿ ಜನರ ಚಿತ್ತ

ಲಾಕ್‌ಡೌನ್‌ ಸಮಯ ಸದ್ಬಳಕೆ ;ಸೋಶಿಯಲ್‌ ನೆಟ್‌ವರ್ಕ್‌ ಸಹಾಯ

Team Udayavani, May 6, 2020, 6:27 AM IST

ತುಳು ಲಿಪಿ ಕಲಿಕೆಯತ್ತ ಕರಾವಳಿ ಜನರ ಚಿತ್ತ

ಉಡುಪಿ: ಲಾಕ್‌ಡೌನ್‌ನಿಂದ ಸದ್ಯ ಜನತೆ ಮನೆಯಲ್ಲೇ ಇದ್ದು ಆಫೀಸು ಕೆಲಸ ಬಳಿಕ ಟಿ.ವಿ., ಮೊಬೈಲ್‌ ಇತ್ಯಾದಿಗಳಲ್ಲಿ ಸಮಯ ಕಳೆದರೆ, ಉಡುಪಿ- ಮಂಗಳೂರು ಜನ ತುಳು ಭಾಷೆಯ ಕಲಿಕೆ ಮೂಲಕ ಈ ಲಾಕ್‌ಡೌನ್‌ನ ಸಮಯದ ಸದ್ಬಳಕೆ, ಭಾಷಾಭಿಮಾನದ ಕೆಲಸದಲ್ಲಿ ನಿರತರಾಗಿದ್ದಾರೆ. ಜತೆಗೆ ಸೋಶಿಯಲ್‌ ನೆಟ್‌ವರ್ಕ್‌ ಗಳಲ್ಲೂ ತುಳು ಅಕ್ಷರಗಳನ್ನು ಕಲಿಸುವ ಕಾರ್ಯ ನಡೆಯುತ್ತಿದ್ದು, ಫೇಸ್‌ಬುಕ್‌ಗಳಲ್ಲಿ ತುಳು ಪೇಜ್‌ಗಳು ಈ ನಿಟ್ಟಿನಲ್ಲಿ ಸಕ್ರಿಯವಾಗಿವೆ.

ಕಲಿಕೆಗೆ ಪ್ರೇರಣೆ
ಸಾಮಾಜಿಕ ಜಾಲತಾಣಗಳಾದ ಯೂಟ್ಯೂಬ್‌ನ ಫೇಸ್‌ಬುಕ್‌ಗಳಲ್ಲಿ ತುಳು ಲಿಪಿ ಕಲಿಕೆ ನೋಟ್ಸ್‌, ಪಿಡಿಎಫ್, ವಿಡಿಯೋಗಳನ್ನು ಪೋಸ್ಟ್‌ ಮಾಡುವ ಮೂಲಕ ಜನರನ್ನು ಭಾಷಾಭ್ಯಾಸಕ್ಕೆ ಹುರಿದುಂಬಿಸಲಾಗುತ್ತಿದೆ. ಆನ್‌ಲೈನ್‌ ತುಳುಲಿಪಿ, ಟ್ವಿಟ್‌ ತುಳುನಾಡು, ಜೈ ತುಳುನಾಡು ಸಹಿತ ಅನೇಕ ವಾಟ್ಸಾಪ್‌ಗ್ರೂಪ್ ಗಳು ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿವೆ. ಜತೆಗೆ ಜನರು ತಮ್ಮ ತಮ್ಮಲ್ಲೇ ಕಲಿಕ ವಾಟ್ಸಾಪ್‌ ಗ್ರೂಪ್‌ ಗಳನ್ನು  ಮಾಡಿ ತುಳು ಲಿಪಿ ಕಲಿಕೆಯಲ್ಲಿ ನಿರತರಾಗುತ್ತಿದ್ದಾರೆ. ಹಾಗೇ ಫೇಸ್‌ಬುಕ್‌ ತುಳುನಾಡ ಪೇಜ್ ‌ಗಳು ಜನರು ಸಂಶಯ ಗಳಿಗೆ ಪ್ರತಿಕ್ರಿಯಿಸಿ, ಅಕ್ಷರ ಕಲಿಸುವ, ಹೆಸರು, ಊರಿನ ಹೆಸರು, ದೇವಸ್ಥಾನಗಳ ಹೆಸರು, ಶುಭಾಶಯಗಳನ್ನು ತಿಳಿಸುವ ಬಗ್ಗೆ ತುಳು ಲಿಪಿಯಲ್ಲಿ ಬರೆದು ಪಿಎನ್‌ಜಿ ಫಾಮ್ಯಾಟ್‌ ಮೂಲಕ ಜನರಿಗೆ ನೀಡುತ್ತಿದೆ.

ಹೊರರಾಜ್ಯವರಲ್ಲೂ ಆಸಕ್ತಿ
ಹೊರ ರಾಜ್ಯದಲ್ಲಿರುವ ಮಂದಿಯೂ ತುಳು ಲಿಪಿಯನ್ನು ಕಲಿಯುವಲ್ಲಿ ಹೆಚ್ಚಿನ ಆಸಕ್ತಿಯನ್ನು ತೋರುತ್ತಿದ್ದು, ತಾಯಿ ನಾಡಿನ ಭಾಷೆಯನ್ನು ಪ್ರಚಾರ ಮಾಡುವ ಕೆಲಸದಲ್ಲಿ ನಿರತರಾಗಿದ್ದಾರೆ.

ಆಸಕ್ತಿ ಹೆಚ್ಚಾಗುತ್ತಿದೆ
ಕಳೆದ ಒಂದು ತಿಂಗಳಿಂದ ಗೂಗಲ್‌, ಸಾಮಾಜಿಕ ಜಾಲತಾಣಗಳಲ್ಲಿ ತುಳು ಅಕ್ಷರವನ್ನು ಕಲಿಯುತ್ತಿದ್ದು, ಸದ್ಯ ವಾಕ್ಯಗಳನ್ನು ಬರೆಯಲು ಕಲಿತಿದ್ದೇನೆ. ಅನೇಕ ಮಂದಿ ಸಲಹೆ ಕೇಳುತ್ತಿದ್ದಾರೆ. ತುಳು ಲಿಪಿ ಕಲಿಕೆಯ ಆಸಕ್ತಿ ಹೆಚ್ಚಾಗುತ್ತಿದೆ ಎಂದು ಗೋವಾದಲ್ಲಿರುವ ಮಂಗಳೂರಿನ ಮೂಲದ ಅಭಯಚಂದ್ರ ಹೇಳುತ್ತಾರೆ.

ಶಾಲೆಗಳಲ್ಲಿ ಕಾರ್ಯಾಗಾರ ನಡೆಸುವ ಯೋಚನೆ
ಲಾಕ್‌ಡೌನ್‌ನಿಂದ ವಿವಿಧ ಸಂಘಟನೆಗಳು ನಡೆಸಬೇಕಿದ್ದ ಕಾರ್ಯಾಗಾರಗಳಿಗೆ ತಡೆಯಾಗಿದ್ದು, ಮುಂದಿನ ದಿನಗಳಲ್ಲಿ ಉಡುಪಿ ಸೇರಿದಂತೆ ಮಂಗಳೂರು ಭಾಗದ ವಿವಿಧ ಶಾಲೆಗಳಲ್ಲಿ ಕಾರ್ಯಾಗಾರ ನಡೆಸುವ ಯೋಚನೆ ಇದೆ. 30 ಪ್ರೊಫೆಶನಲ್‌ ಶಿಕ್ಷಕರು ತಯಾರಾಗಿದ್ದಾರೆ. ತುಳು ಅಕಾಡೆಮಿಯಿಂದಲೂ ಪ್ರೋತ್ಸಾಹ ಸಿಕ್ಕಿದೆ. ಉಡುಪಿ ಶಾಸಕರು ಕೂಡ ತುಳು ಕಲಿಕೆಗೆ ಪೋತ್ಸಾಹ ನೀಡುತ್ತಿದ್ದಾರೆ.
-ಶರತ್‌ ಕೊಡವೂರು, ಕಿರಣ್‌ ತುಳುವೆ, ಸದಾಶಿವ ಮುದ್ರಾಡಿ,
ತುಳು ಲಿಪಿ ಪ್ರಚಾರಕರು, ಜೈ ತುಳುನಾಡು ಪಡುಕೆರೆ

ತುಳು ಲಿಪಿ ಕಲಿಯುವ ಆಸಕ್ತಿ
ತುಳು ಪುಸ್ತಕ ನೋಡಿ ತುಳು ಲಿಪಿಯನ್ನು ಕಲಿತಿದ್ದೇವೆ. ಲಿಪಿ ಕಲಿಕೆಗೆ ನಿರಂತರ ಅಭ್ಯಾಸ ಬೇಕು. ಉಡುಪಿ ಭಾಗದಲ್ಲಿ ಅನೇಕರು ತುಳು ಲಿಪಿ ಕಲಿಯುವ ಆಸಕ್ತಿ ತೋರುತ್ತಿದ್ದಾರೆ. ವಾಟ್ಸ್‌ಆ್ಯಪ್‌, ಫೇಸ್‌ಬುಕ್‌ನಲ್ಲಿ ಅನೇಕರು ನಮ್ಮಲ್ಲಿ ತುಳು ಬರಹದ ಬಗ್ಗೆ, ಹೆಸರುಗಳನ್ನು ಬರೆಯುವ ಬಗ್ಗೆ ವಿಚಾರಿಸುತ್ತಿದ್ದಾರೆ.
-ವಿಷ್ಣುಮೂರ್ತಿ, ಉಡುಪಿ ನಿವಾಸಿ

ಟಾಪ್ ನ್ಯೂಸ್

19

Aamir Khan: ರಾಜಕೀಯ ಪಕ್ಷದ ಪರ ಪ್ರಚಾರ; ನಕಲಿ ವಿಡಿಯೋ ವಿರುದ್ಧ FIR ದಾಖಲಿಸಿದ ಆಮಿರ್‌

BCCI instructions to share photos of the IPL match day ground!

IPL 2024 ಪಂದ್ಯ ದಿನ ಮೈದಾನದ ಫೋಟೋ ಹಂಚದಂತೆ ಬಿಸಿಸಿಐ ಸೂಚನೆ!

Mishap: ಭೀಕರ ರಸ್ತೆ ಅಪಘಾತ: ಕ್ರೇನ್ ಗೆ ಡಿಕ್ಕಿ ಹೊಡೆದ ರಿಕ್ಷಾ 7 ಮಂದಿ ಸ್ಥಳದಲ್ಲೇ ಮೃತ್ಯು

Mishap: ಭೀಕರ ರಸ್ತೆ ಅಪಘಾತ: ಕ್ರೇನ್ ಗೆ ಡಿಕ್ಕಿ ಹೊಡೆದ ರಿಕ್ಷಾ 7 ಮಂದಿ ಸ್ಥಳದಲ್ಲೇ ಮೃತ್ಯು

Sensible voters know who to win: Yatnal

Vijayapura; ಯಾರನ್ನು ಗೆಲ್ಲಿಸಬೇಕೆಂದು ಪ್ರಜ್ಞಾವಂತ ಮತದಾರರಿಗೆ ಗೊತ್ತಿದೆ: ಯತ್ನಾಳ್

1-ckm-rsrt-close

Tourists ಗಮನಕ್ಕೆ: ಈ 2 ದಿನಗಳ ಕಾಲ ಚಿಕ್ಕಮಗಳೂರಿನ‌ ಎಲ್ಲ ಹೋಂ ಸ್ಟೇ, ರೆಸಾರ್ಟ್‌ ಬಂದ್!

ಸಿ.ಟಿ.ರವಿ

Vijayapura; ವಿಕಸಿತ ಭಾರತಕ್ಕೆ ವಿಶ್ವನಾಯಕ ಮೋದಿ ನಾಯಕತ್ವ ಅನಿವಾರ್ಯ: ಸಿ.ಟಿ.ರವಿ

ಶಿಕಾರಿಪುರದಲ್ಲೇ ಅಪ್ಪ ಮಕ್ಕಳ ಶಿಕಾರಿ ಮಾಡುತ್ತೇನೆ… ವಿಜಯೇಂದ್ರ ವಿರುದ್ಧ ಈಶ್ವರಪ್ಪ ಕಿಡಿ

ಶಿಕಾರಿಪುರದಲ್ಲೇ ಅಪ್ಪ ಮಕ್ಕಳ ಶಿಕಾರಿ ಮಾಡುತ್ತೇನೆ… ವಿಜಯೇಂದ್ರ ವಿರುದ್ಧ ಈಶ್ವರಪ್ಪ ಕಿಡಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕಾಲರಾ ರೋಗ ತಡೆಗೆ ಸಕಲ ಮುನ್ನೆಚ್ಚರಿಕೆ; ತೆರೆದ ಸ್ಥಿತಿಯಲ್ಲಿ ಆಹಾರೋತ್ಪನ್ನ ಮಾರಾಟ ಅಪಾಯಕಾರಿ

ಕಾಲರಾ ರೋಗ ತಡೆಗೆ ಸಕಲ ಮುನ್ನೆಚ್ಚರಿಕೆ; ತೆರೆದ ಸ್ಥಿತಿಯಲ್ಲಿ ಆಹಾರೋತ್ಪನ್ನ ಮಾರಾಟ ಅಪಾಯಕಾರಿ

Former Prime Minister ಇಂದಿರಾ ಗಾಂಧಿಗೆ ಪುನರ್‌ಜನ್ಮ ನೀಡಿ, ಪ್ರಧಾನಿಯಾಗಿಸಿದ ಕ್ಷೇತ್ರ

Former Prime Minister ಇಂದಿರಾ ಗಾಂಧಿಗೆ ಪುನರ್‌ಜನ್ಮ ನೀಡಿ, ಪ್ರಧಾನಿಯಾಗಿಸಿದ ಕ್ಷೇತ್ರ

ಶ್ರೀಕೃಷ್ಣನಿಗೆ ಪಾರ್ಥಸಾರಥಿ ಸುವರ್ಣ ರಥ: ಪುತ್ತಿಗೆ ಶ್ರೀ ಸಂಕಲ್ಪ

Udupi; ಶ್ರೀಕೃಷ್ಣನಿಗೆ ಪಾರ್ಥಸಾರಥಿ ಸುವರ್ಣ ರಥ: ಪುತ್ತಿಗೆ ಶ್ರೀ ಸಂಕಲ್ಪ

Manipal ಮಾಹೆ ವಿ.ವಿ.ಗೆ ಕ್ವಾಕ್ವರೆಲಿ ಸಿಮಾಂಡ್ಸ್‌ ಶ್ರೇಯಾಂಕ ಗರಿ

Manipal ಮಾಹೆ ವಿ.ವಿ.ಗೆ ಕ್ವಾಕ್ವರೆಲಿ ಸಿಮಾಂಡ್ಸ್‌ ಶ್ರೇಯಾಂಕ ಗರಿ

Udupi-Chikmagalur Constituency; ಈವರೆಗಿನ ಅಭ್ಯರ್ಥಿ, ಸಂಸದರು ಕರಾವಳಿಗರೇ ಆಗಿದ್ದರು!

Udupi-Chikmagalur Constituency; ಈವರೆಗಿನ ಅಭ್ಯರ್ಥಿ, ಸಂಸದರು ಕರಾವಳಿಗರೇ ಆಗಿದ್ದರು!

MUST WATCH

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

udayavani youtube

ಕೇಕ್ ಪ್ರಿಯರಿಗೆ ಹೇಳಿ ಮಾಡಿಸಿದ ಜಾಗ ಔರಾ .

ಹೊಸ ಸೇರ್ಪಡೆ

19

Aamir Khan: ರಾಜಕೀಯ ಪಕ್ಷದ ಪರ ಪ್ರಚಾರ; ನಕಲಿ ವಿಡಿಯೋ ವಿರುದ್ಧ FIR ದಾಖಲಿಸಿದ ಆಮಿರ್‌

BCCI instructions to share photos of the IPL match day ground!

IPL 2024 ಪಂದ್ಯ ದಿನ ಮೈದಾನದ ಫೋಟೋ ಹಂಚದಂತೆ ಬಿಸಿಸಿಐ ಸೂಚನೆ!

Mishap: ಭೀಕರ ರಸ್ತೆ ಅಪಘಾತ: ಕ್ರೇನ್ ಗೆ ಡಿಕ್ಕಿ ಹೊಡೆದ ರಿಕ್ಷಾ 7 ಮಂದಿ ಸ್ಥಳದಲ್ಲೇ ಮೃತ್ಯು

Mishap: ಭೀಕರ ರಸ್ತೆ ಅಪಘಾತ: ಕ್ರೇನ್ ಗೆ ಡಿಕ್ಕಿ ಹೊಡೆದ ರಿಕ್ಷಾ 7 ಮಂದಿ ಸ್ಥಳದಲ್ಲೇ ಮೃತ್ಯು

choo mantar kannada movie

Sharan; ಮೇ 10ಕ್ಕೆ ‘ಛೂ ಮಂತರ್‌’ ತೆರೆಗೆ ಸಿದ್ಧ

Sensible voters know who to win: Yatnal

Vijayapura; ಯಾರನ್ನು ಗೆಲ್ಲಿಸಬೇಕೆಂದು ಪ್ರಜ್ಞಾವಂತ ಮತದಾರರಿಗೆ ಗೊತ್ತಿದೆ: ಯತ್ನಾಳ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.