ಯಂತ್ರ ಸಂಪರ್ಕ ದೂರವಾಗಿ ಮನುಷ್ಯ ಸಂಪರ್ಕ ಬೆಳೆಯಲಿ


Team Udayavani, Apr 21, 2019, 6:30 AM IST

chinnara-chittara

ಉಡುಪಿ: ಇಂದು ಯಂತ್ರ ಕೇಂದ್ರೀಕೃತವಾದ ಚಟುವಟಿಕೆ ಹೆಚ್ಚಾಗಿವೆ. ಇದರಿಂದಾಗಿ ಮನುಷ್ಯ ಮನುಷ್ಯರ ನಡುವಿನ ಸಂಪರ್ಕ ದೂರವಾಗಿದೆ. ಮತ್ತೆ ಮನುಷ್ಯ ಸಂಪರ್ಕ ಬೆಳೆಸುವ ಕೆಲಸವಾಗಬೇಕು ಎಂದು ನಿವೃತ್ತ ಪ್ರಾಂಶುಪಾಲ, ಹಿರಿಯ ಕಲಾವಿದ ಪ್ರೊ| ಎಂ.ಎಲ್‌.ಸಾಮಗ ಹೇಳಿದರು.

ಮಣಿಪಾಲದ ಡಾ| ಟಿಎಂಎ ಪೈ ಆ್ಯಂಪಿ ಥಿಯೇಟರ್‌ನಲ್ಲಿ ಮಣಿಪಾಲ್‌ ಗ್ರೂಪ್‌ ವತಿಯಿಂದ ಆಯೋಜಿಸಲಾದ 6ನೇ ವರ್ಷದ ಮಕ್ಕಳ ಬೇಸಗೆ ಶಿಬಿರ “ಚೈತ್ರ ಚಿತ್ತಾರ -2019’ನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.

ನಮ್ಮದು ಬಟನ್‌ಗಳೊಂದಿಗಿನ ಬದುಕು. ಇಂದಿನ ಮಕ್ಕಳ ಆಟಿಕೆಗಳನ್ನು ಕೂಡ ಯಂತ್ರಗಳಿಂದ ಆಕರ್ಷಕವಾಗಿ ಮಾಡಲಾಗುತ್ತದೆ. ಆದರೆ ಅದರಿಂದ ಮನುಷ್ಯ ಸಂಪರ್ಕದ ಖುಷಿ ಸವಿಯುವುದು ಅಸಾಧ್ಯ ಎಂದವರು ತಿಳಿಸಿದರು.

ಅಂದು ಅಜ್ಜನ ಕೋಲು ಎಲ್ಲವೂ…
ಹಿಂದಿನ ಕಾಲದ ಮಕ್ಕಳ ಆಟಕ್ಕೂ ಈಗಿನ ಮಕ್ಕಳ ಆಟಗಳಿಗೂ ಅಜಗಜಾಂತರ. ಆಗಿನ ಆಟದ ಮಜಾವೇ ಬೇರೆ. ಮಕ್ಕಳಿಗೆ ತಮ್ಮ ಅಜ್ಜನ ಒಂದು ಊರುಗೋಲು ಸಿಕ್ಕಿದರೆ ಸಾಕಿತ್ತು. ಅದನ್ನು ಹಿಡಿದು “ಅಜ್ಜನ ಕೋಲಿದು ನನ್ನಯ ಕುದುರೆ…ಹೆಜ್ಜೆ ಹೆಜ್ಜೆಗೆ ಕುಣಿಯುವ ಕುದುರೆ’ ಎಂದು ಆಡುತ್ತಾ ಅದರಲ್ಲೇ ವಿವಿಧ ರೀತಿಯ ಆಟಗಳನ್ನು ಆಡುತ್ತಿದ್ದರು. ಅದ್ಭುತ ಕಲ್ಪನೆಯನ್ನು ಮಾಡಿಕೊಳ್ಳುತ್ತಾ ಅದರಲ್ಲಿಯೇ ಕಳೆದು ಹೋಗುತ್ತಾ ಸಂಭ್ರಮಿಸುತ್ತಿದ್ದರು. ಇಂಥ ಆಟಗಳು ಹಲವಾರು ಮಕ್ಕಳು ಒಂದೇ ಕಡೆ ಸೇರಿ ಜತೆ ಜತೆಯಾಗಿ ಆಟವಾಡಲು ಅವಕಾಶ ಮಾಡಿಕೊಡುತ್ತಿದ್ದವು. ಆಗ ಮನುಷ್ಯ ಸಂಬಂಧ ಬೆಳೆಯುತ್ತಿತ್ತು. ಅಂಥ ಚಟುವಟಿಕೆಗಳು ಮತ್ತೆ ಬೆಳೆಯಬೇಕಾಗಿದೆ ಎಂದವರು ಹೇಳಿದರು.

ಶಿಬಿರದ ಸಂಯೋಜಕ, ನಿರ್ದೇಶಕ ಜಿ.ಪಿ. ಪ್ರಭಾಕರ್‌ ತುಮರಿ, ಮಣಿಪಾಲ್‌ ಟೆಕ್ನಾಲಜಿ ಎಚ್‌ಆರ್‌ ಸೀನಿಯರ್‌ ಮ್ಯಾನೇಜರ್‌ ಪ್ರಕಾಶ್‌ ಜಿ. ಪ್ರಭು ಉಪಸ್ಥಿತರಿದ್ದರು. ಎಚ್‌ಆರ್‌ ಡೆಪ್ಯುಟಿ ಮ್ಯಾನೇಜರ್‌ ಉಷಾರಾಣಿ ಕಾಮತ್‌ ಕಾರ್ಯಕ್ರಮ ನಿರ್ವಹಿಸಿದರು.

10 ದಿನಗಳ ಈ ಶಿಬಿರದಲ್ಲಿ ಗೀತ ಸಂಗೀತ, ಕರಾಟೆ ಕೌಶಲ, ಕಲಾಪೂರ್ಣ ಆಕೃತಿ ರಚನೆ, ಕಾಗದ ಕರಕೌಶಲ, ವಿಜ್ಞಾನ ಮಾದರಿ, ಹೊರಾಂಗಣ ಭೇಟಿ, ಕರಕುಶಲ ವೈಭವ, ನೃತ್ಯ ಸಂಭ್ರಮ, ಬಣ್ಣದ ಲೋಕ, ಭಾರತ ದರ್ಶನ, ಪ್ರಾಯೋಗಿಕ ತಯಾರಿ, ನಾಟಕ ತಾಲೀಮು, ಮಕ್ಕಳ ಚಲನಚಿತ್ರ ಪ್ರದರ್ಶನ, ನಮ್ಮ ಆರೋಗ್ಯ, ಪುರಾಣ ಪ್ರಪಂಚ-ರಸಪ್ರಶ್ನೆ, ಕಥಾ ಕಥನ, ಗಣಿತ ಲೋಕ, ಹಾವು-ನಾವು ಮೊದಲಾದ ಚಟುವಟಿಕೆಗಳು ನಡೆಯಲಿವೆ. ಈಗಿನ ಒತ್ತಡ ಮತ್ತು ಸ್ಪರ್ಧೆಗಳಿಗೆ ಮಕ್ಕಳನ್ನು ಭಾವನಾತ್ಮಕವಾಗಿ ಸಿದ್ಧಗೊಳಿಸುವ ಉದ್ದೇಶ ಕೂಡ ನಮ್ಮದಾಗಿದೆ ಎಂದು ಪ್ರಭಾಕರ್‌ ತುಮರಿ ತಿಳಿಸಿದರು.

ಆಗ ಗೆಳೆಯರ ಹಿಂಡು, ಈಗ ಒಬ್ಬಂಟಿ
ಮುಖ್ಯ ಅತಿಥಿಯಾಗಿದ್ದ ರಂಗಭೂಮಿ ಕಲಾವಿದ ಸಂತೋಷ್‌ ಶೆಟ್ಟಿ ಹಿರಿಯಡಕ ಮಾತನಾಡಿ, “ನಾವು ಹಿಂದೆ ಸಣ್ಣವರಿರುವಾಗ ಆಟಕ್ಕೆಂದು ಮನೆಯಿಂದ ಹೊರಗೆ ಹೋದಾಗ ಹತ್ತಾರು ಮಂದಿ ಗೆಳೆಯರ ಹಿಂಡೇ ಸಿಗುತ್ತಿತ್ತು. ಆದರೆ ಈಗಿನ ಮಕ್ಕಳು ಆಟವಾಡಬೇಕೆಂದು ಮನೆಯಿಂದ ಹೊರಗೆ ಹೊರಟರೂ ಅವರಿಗೆ ಗೆಳೆಯರು ಸಿಗುತ್ತಿಲ್ಲ. ಒಬ್ಬಂಟಿಯಾಗಿರಬೇಕಾಗುತ್ತಿದೆ. ಮಕ್ಕಳ ಜೀವಂತಿಕೆ, ಸಹಜತೆ ಉಳಿಸಿಕೊಳ್ಳುವುದು ಅಗತ್ಯ. ಇಂದಿನ ಸ್ಪರ್ಧಾತ್ಮಕ ಧಾವಂತದಲ್ಲಿ ಸಹಜ ಸಂಬಂಧಗಳು ಶಿಥಿಲಗೊಳ್ಳದಂತೆ ನೋಡಿಕೊಳ್ಳುವ ಅನಿವಾರ್ಯ ಇದೆ’ ಎಂದರು.

ಟಾಪ್ ನ್ಯೂಸ್

5-toll-gate

Toll Gate: ಎ.1ರಿಂದ ಟೋಲ್‌ ದರದಲ್ಲಿ ಹೆಚ್ಚಳ

4-naxal-

Mangaluru: ಶರಣಾಗುವ ನಕ್ಸಲರಿಗೆ ಸಿಗಲಿದೆ 7.50 ಲ.ರೂ. ಪ್ರೋತ್ಸಾಹಧನ

3-blthgdy

Belthangady: ತುಮಕೂರು ತ್ರಿಬ್ಬಲ್ ಮರ್ಡರ್ ಪ್ರಕರಣ;ಮನೆಮಂದಿಗೆ ಇಂದು ತಲುಪಿದ ಮೃತದೇಹ

2-mukthar-ansari

Mukhtar Ansari: ಕುಖ್ಯಾತ ಗ್ಯಾಂಗ್‌ಸ್ಟರ್‌, 5 ಬಾರಿ ಶಾಸಕ ಅನ್ಸಾರಿ ಸಾವು

1-24-friday

Horoscope: ಉದ್ಯೋಗ ಸ್ಥಾನದಲ್ಲಿ ಮೇಲಿನವರಿಂದ ಶ್ಲಾಘನೆ, ಮಹಿಳಾ ಉದ್ಯಮಿಗಳಿಗೆ ಯಶಸ್ಸು

dk-suresh

ಸಂಸದ ಡಿ.ಕೆ.ಸುರೇಶ್‌ ಆಸ್ತಿ ಮೌಲ್ಯ 593 ಕೋಟಿ ರೂ.!

Kohli IPL 2024

IPL; ಇಂದು ಚಿನ್ನಸ್ವಾಮಿಯಲ್ಲಿ ಆರ್‌ಸಿಬಿ ಬಲೆಗೆ ಬೀಳುತ್ತಾ ಕೋಲ್ಕತಾ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5-toll-gate

Toll Gate: ಎ.1ರಿಂದ ಟೋಲ್‌ ದರದಲ್ಲಿ ಹೆಚ್ಚಳ

Udupi: ನೇಣು ಬಿಗಿದು ಆತ್ಮಹತ್ಯೆ

Udupi: ನೇಣು ಬಿಗಿದು ಆತ್ಮಹತ್ಯೆ

Udupi: ಕರ್ತವ್ಯದಲ್ಲಿದ್ದ ಪೊಲೀಸ್‌ಗೆ ಹಲ್ಲೆ, ಜೀವಬೆದರಿಕೆ: ಪ್ರತ್ಯೇಕ ಪ್ರಕರಣ ದಾಖಲು

Udupi: ಕರ್ತವ್ಯದಲ್ಲಿದ್ದ ಪೊಲೀಸ್‌ಗೆ ಹಲ್ಲೆ, ಜೀವಬೆದರಿಕೆ: ಪ್ರತ್ಯೇಕ ಪ್ರಕರಣ ದಾಖಲು

Belapu: ರೈಲ್ವೇ ಹಳಿ ಬಳಿ ಬಿದ್ದು ಸಾವು

Belapu: ರೈಲ್ವೇ ಹಳಿ ಬಳಿ ಬಿದ್ದು ಸಾವು

Pernankila Temple:  ಪೆರ್ಣಂಕಿಲ ದೇಗುಲ: ಧಾರ್ಮಿಕ ಪ್ರಕ್ರಿಯೆ

Pernankila Temple: ಪೆರ್ಣಂಕಿಲ ದೇಗುಲ: ಧಾರ್ಮಿಕ ಪ್ರಕ್ರಿಯೆ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Kannada Cinema: ತೆರೆಗೆ ಬಂತು ಯುವ, ತಾರಿಣಿ

Kannada Cinema: ತೆರೆಗೆ ಬಂತು ಯುವ, ತಾರಿಣಿ

5-toll-gate

Toll Gate: ಎ.1ರಿಂದ ಟೋಲ್‌ ದರದಲ್ಲಿ ಹೆಚ್ಚಳ

4-naxal-

Mangaluru: ಶರಣಾಗುವ ನಕ್ಸಲರಿಗೆ ಸಿಗಲಿದೆ 7.50 ಲ.ರೂ. ಪ್ರೋತ್ಸಾಹಧನ

3-blthgdy

Belthangady: ತುಮಕೂರು ತ್ರಿಬ್ಬಲ್ ಮರ್ಡರ್ ಪ್ರಕರಣ;ಮನೆಮಂದಿಗೆ ಇಂದು ತಲುಪಿದ ಮೃತದೇಹ

2-mukthar-ansari

Mukhtar Ansari: ಕುಖ್ಯಾತ ಗ್ಯಾಂಗ್‌ಸ್ಟರ್‌, 5 ಬಾರಿ ಶಾಸಕ ಅನ್ಸಾರಿ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.