ಉಡುಪಿ ಜಿಲ್ಲೆ: ಆಗಸ್ಟ್ 14; ಕೋವಿಡ್ ನಿಂದ 6 ಸಾವು, 322 ಪಾಸಿಟಿವ್; 2,262 ನೆಗೆಟಿವ್
Team Udayavani, Aug 14, 2020, 11:37 PM IST
ಸಾಂದರ್ಭಿಕ ಚಿತ್ರ
ಉಡುಪಿ: ಉಡುಪಿ ಜಿಲ್ಲೆಯಲ್ಲಿ ಶುಕ್ರವಾರ ಆರು ಸಾವು ಸಂಭವಿಸಿದ್ದು ಒಟ್ಟು ಸಾವಿಗೀಡಾದವರ ಸಂಖ್ಯೆ 76ಕ್ಕೇರಿದೆ. ಶುಕ್ರವಾರ 322 ಪಾಸಿಟಿವ್ ಮತ್ತು 2,262 ನೆಗೆಟಿವ್ ಪ್ರಕರಣಗಳು ವರದಿಯಾಗಿವೆ.
ಉಡುಪಿ ತಾಲೂಕಿನ 63 ವರ್ಷದ, ಕುಂದಾಪುರ ತಾಲೂಕಿನ 86, 48, 48, 55 ವರ್ಷ ಪ್ರಾಯದವರು ಬೇರೆ ಬೇರೆ ಆರೋಗ್ಯ ಕಾರಣಗಳಿಗಾಗಿ ಮೃತ ಪಟ್ಟಿದ್ದಾರೆ. ಹಿರಿಯಡಕದ 56 ವರ್ಷದವರೊಬ್ಬರನ್ನು ಗುರುವಾರ ಜಿಲ್ಲಾ ಸ್ಪತ್ರೆಗೆ ಕರೆತಂದ ಬಳಿಕ ಮೃತಪಟ್ಟಿದ್ದಾರೆ. ಅವರ ಗಂಟಲ ದ್ರವವನ್ನು ಕಳುಹಿಸಿದ್ದು ಶನಿವಾರ ಪಾಸಿಟಿವ್ ವರದಿಯಾಗಿದೆ.
ಸೋಂಕಿತರಲ್ಲಿ ರೋಗಲಕ್ಷಣ ಇರುವ 52 ಪುರುಷರು, 36 ಮಹಿಳೆಯರು, ರೋಗ ಲಕ್ಷಣ ಇರದ 123 ಪುರುಷರು, 111 ಮಹಿಳೆಯರು ಇದ್ದಾರೆ. ಉಡುಪಿ ತಾಲೂಕಿನ 186, ಕುಂದಾಪುರ ತಾಲೂಕಿನ 95, ಕಾರ್ಕಳ ತಾಲೂಕಿನ 36, ಹೊರ ಜಿಲ್ಲೆಯ ಐವರು ಇದ್ದಾರೆ.
ಶುಕ್ರವಾರ 2,369 ಮಂದಿಯ ಗಂಟಲ ದ್ರವ ಮಾದರಿಗಳನ್ನು ಸಂಗ್ರಹಿಸಲಾಗಿದೆ. 1,640 ಜನರ ಮಾದರಿಗಳ ವರದಿ ಬರಬೇಕಾಗಿದೆ.
ಶುಕ್ರವಾರ 333 ಮಂದಿ ಆಸ್ಪತ್ರೆಗಳಿಂದ, 281 ಮಂದಿ ಮನೆಗಳಿಂದ ಒಟ್ಟು 614 ಮಂದಿ ಬಿಡುಗಡೆಗೊಂಡಿದ್ದಾರೆ. ಪ್ರಸ್ತುತ 1,301 ಮಂದಿ ಆಸ್ಪತ್ರೆಗಳಲ್ಲಿಯೂ, 1,249 ಮಂದಿ ಮನೆಗಳಲ್ಲಿಯೂ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕಾಪು: 175 ಪಾಸಿಟಿವ್ ಪ್ರಕರಣ
ಕಾಪು: ಸ್ಥಳೀಯ ಶಾಸಕರ ಸಹಿತ ಕಾಪು ತಾಲೂಕಿನ ವಿವಿಧೆಡೆ ಕಳೆದ ಐದು ದಿನಗಳಲ್ಲಿ 175 ಮಂದಿಯಲ್ಲಿ ಕೊರೊನಾ ಪಾಸಿಟಿವ್ ದೃಢಪಟ್ಟಿದೆ.
ಉಳ್ತುರು ಗ್ರಾಮದ ಒಂದೇ ಮನೆಯ 15 ಮಂದಿಗೆ ಕೊರೊನಾ
ಕುಂದಾಪುರ: ಬೈಂದೂರಿನ 11 ಮತ್ತು ಕುಂದಾಪುರ ತಾಲೂಕಿನ 24 ಮಂದಿ ಸಹಿತ ಒಟ್ಟು 35 ಮಂದಿಗೆ ಶುಕ್ರವಾರ ಕೊರೊನಾ ಪಾಸಿಟಿವ್ ಬಂದಿದೆ. ಕುಂದಾಪುರ ತಾಲೂಕಿನ ಉಳ್ತುರು ಗ್ರಾಮದ ಒಂದೇ ಮನೆಯ 15 ಮಂದಿಗೆ ಕೊರೊನಾ ಬಾಧಿಸಿದ್ದು, ಪುರಸಭೆ ವ್ಯಾಪ್ತಿಯಲ್ಲಿ, ಸೇನಾಪುರ, ಹಕ್ಲಾಡಿಯ ತಲಾ ಮೂವರಿಗೆ ಬೈಂದೂರಿನ ಐವರು, ಉಪ್ಪುಂದದ ಮೂವರು, ನಾಡದ ಇಬ್ಬರು, ಹೇರಂಜಾಲಿನ ಒಬ್ಬರಿಗೆ ಕೊರೊನಾ ದೃಢಪಟ್ಟಿದೆ.
ಪಡುಬಿದ್ರಿ ಇಬ್ಬರಿಗೆ ಕೊರೊನಾ
ಪಡುಬಿದ್ರಿ: ಪಡುಬಿದ್ರಿಯ ವ್ಯಾಪ್ತಿಯಲ್ಲಿ ಎರ್ಮಾಳು ಮತ್ತು ಹೆಜಮಾಡಿಯಲ್ಲಿ ತಲಾ ಒಬ್ಬರಿಗೆ ಕೊರೊನಾ ಸೋಂಕು ದೃಢಪಟ್ಟಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು
Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ
Malpe Beach: ಈಜಲು ಹೋದ ಮೂವರು ಸಮುದ್ರಪಾಲು; ಓರ್ವನ ಸಾವು, ಇಬ್ಬರ ರಕ್ಷಣೆ
ಕೋತಲಕಟ್ಟೆ: ಹೆದ್ದಾರಿ ಬಳಿ ನಿಲ್ಲಿಸಿದ್ದ ಸ್ಕೂಟಿ ಕಳವು
Thekkatte ಶ್ರೀರಾಮ ಭಜನಾ ಮಂದಿರದಲ್ಲಿ ರಾಮನವಮಿ: ರಾವಣ ದಹನ ಮತ್ತು ಓಕುಳಿ ಉತ್ಸವ ಸಂಪನ್ನ
MUST WATCH
ಹೊಸ ಸೇರ್ಪಡೆ
Mangaluru; ಪೆಟ್ರೋಲ್ ಬದಲು ಡೀಸೆಲ್ ತುಂಬಿಸಿದ ಆರೋಪ: ಕೋರ್ಟ್ಗೆ ಮೊರೆ
RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್
Davanagere; ಮುಖ್ಯಮಂತ್ರಿ ಜವಾಬ್ದಾರಿಯಿಂದ ಹೇಳಿಕೆ ನೀಡಬೇಕು: ಎಂ.ಪಿ. ರೇಣುಕಾಚಾರ್ಯ
ತಂತ್ರಜ್ಞಾನದಿಂದ ಮಾನವ ಜೀವನ ಸುಲಭ: ಸ್ಮಾರ್ಟ್ ಸಿಟಿ ಅಧಿಕಾರಿ ಶ್ರೀನಿವಾಸ
Vijayapura; ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ : ಸಂಸದ ಜಿಗಜಿಣಗಿ