ಹಡಗಿನಲ್ಲಿ ಸಿಲುಕಿದ್ದವರು ಊರಿಗೆ


Team Udayavani, May 3, 2020, 8:39 AM IST

ಹಡಗಿನಲ್ಲಿ ಸಿಲುಕಿದ್ದವರು ಊರಿಗೆ

ಸಾಂದರ್ಭಿಕ ಚಿತ್ರ

ಪಡುಬಿದ್ರಿ: ಲಾಕ್‌ಡೌನ್‌ನಿಂದ ತೊಂದರೆಗೊಳಗಾಗಿ 40 ದಿನಗಳಿಂದ ಸಮುದ್ರದಲ್ಲಿಯೇ ಅಲೆದ ಟುಯಿ ಕಂಪೆನಿಗೆ ಸೇರಿದ ಮರೆಲ್ಲಾ ಕ್ರೂಸೆಸ್‌ ಹಡಗಿನಲ್ಲಿ ಕರ್ತವ್ಯದಲ್ಲಿದ್ದ ಮಂಗಳೂರು ಆಕಾಶಭವನದ ಲಿವಿಟ್‌ ಡಿ’ಸೋಜಾ, ಕೋಡಿಕಲ್‌ನ ಹರಿಪ್ರಸಾದ್‌ ರಾವ್‌ ಅವರು ಮುಂಬಯಿ ಮೂಲಕ ವಿಶೇಷ ಬಸ್‌ನಲ್ಲಿ ಆಗಮಿಸಿ ಉಡುಪಿ ಜಿಲ್ಲಾ ಗಡಿ ದಾಟಿ ತವರೂರಿಗೆ ಶುಕ್ರವಾರ ತಲುಪಿದ್ದಾರೆ. ಅವರು ಮನೆಗೆ ತೆರಳದೆ ಕಾವೂರಿನ ಕೊಠಡಿಯೊಂದರಲ್ಲಿ ಸ್ವಯಂ ಕ್ವಾರಂಟೈನ್‌ಗೆ ಒಳಗಾಗಿದ್ದಾರೆ.

ಭಾರತದ 145 ಮಂದಿ ಸಹಿತ ವಿವಿಧ ರಾಷ್ಟ್ರಗಳ 600 ಮಂದಿ ಸಿಬಂದಿಯಿದ್ದ ಹಡಗು ಲಾಕ್‌ಡೌನ್‌ನಿಂದ ಬಂದರು ಸೇರಲಾಗದೆ ಮಾ. 14ರಿಂದ ಸಮುದ್ರದಲ್ಲಿಯೇ ಸಿಲುಕಿತ್ತು. ಈ ಮಧ್ಯೆ ಚೆನ್ನೈ, ಮಂಗಳೂರು, ಮುಂಬಯಿಗಳಲ್ಲಿ ಬಂದರು ಪ್ರವೇಶಿಸಲು ಪ್ರಯತ್ನಿಸಿ ದರೂ ಅವಕಾಶ ಸಿಗಲಿಲ್ಲ. ಹಾಗಾಗಿ ಹಡಗಿನಲ್ಲಿದ್ದ ಭಾರತೀಯರು ಪ್ರಧಾನಿ ನರೇಂದ್ರ ಮೋದಿಯವರಿಗೆ ಟ್ವೀಟ್‌ ಮಾಡಿ ಊರಿಗೆ ತೆರಳಲು ಅವಕಾಶ ಕಲ್ಪಿಸುವಂತೆ ವಿನಂತಿಸಿದ್ದರು. ಕೊನೆಗೆ ಎ. 23ರಂದು ಮುಂಬಯಿ ಬಂದರಿನಲ್ಲಿ ಅವರನ್ನು ಇಳಿಸಲಾಯಿತು. ಬಳಿಕ ಅಂಧೇರಿಯಲ್ಲಿ 5 ದಿನಗಳ ಕಾಲ ಕ್ವಾರಂಟೈನ್‌ ಮಾಡಲಾಯಿತು. ಎಲ್ಲರ ತಪಾಸಣೆ ವರದಿ ನೆಗೆಟಿವ್‌ ಬಂದ ಬಳಿಕ ಎ. 30ರಂದು ಬಸ್‌, ಕಾರು ಗಳಲ್ಲಿ ಅವರವರ ಊರುಗಳಿಗೆ ಕಳುಹಿಸಲಾಯಿತು.

ಬೆಳಗಾವಿಯ ರಾಹುಲ್‌, ಉ.ಕ. ದಾಂಡೇಲಿಯ ಗ್ಲೋಬಿನ್‌, ಮೈಸೂರಿನ ರಕ್ಷಿತ್‌, ಕೇರಳ, ತಮಿಳುನಾಡಿನ ತಲಾ ಓರ್ವರು ಸೇರಿ 23 ಮಂದಿ ಈ ಬಸ್‌ನಲ್ಲಿ ಆಗಮಿಸಿದ್ದರು. ದಾರಿಯಲ್ಲಿ 20 ಕಡೆಗಳಲ್ಲಿ ಅವರ ತಪಾಸಣೆ ನಡೆಸ ಲಾಗಿದೆ. ಎಲ್ಲ ಕೇಂದ್ರಗಳಲ್ಲಿಯೂ ಪ್ರತಿಯೊಬ್ಬರ ವಿವರ ಪಡೆಯಲಾಗಿದೆ ಎಂದು ಹರಿಪ್ರಸಾದ್‌ ರಾವ್‌ ವಿವರಿಸಿದ್ದಾರೆ.
ಆತಂಕ ತಂದ ಉಷ್ಣಾಂಶ ಹಡಗು ಸಿಬಂದಿ ದ.ಕ. ಜಿಲ್ಲೆ ಪ್ರವೇ
ಶಿಸುವ ಹೆಜಮಾಡಿ ತಪಾಸಣೆ ಕೇಂದ್ರದಲ್ಲಿ ಪೊಲೀಸರು, ಆರೋಗ್ಯ ಇಲಾಖೆ ಸಿಬಂದಿ ಆರೋಗ್ಯ ತಪಾಸಣೆ ನಡೆಸಿ
ದಾಗ ದೇಹದ ಉಷ್ಣತೆ ಹೆಚ್ಚು ತೋರಿಸಿದ್ದು ಆತಂಕಕ್ಕೆ ಕಾರಣವಾಯಿತು. ಒಂದು ಗಂಟೆ ಕಾಲ ವಿಶ್ರಮಿಸಲು ಹೇಳಿ ಮತ್ತೆ ತಪಾಸಣೆ ಮಾಡಿದಾಗ ಸರಿಯಾದ ಉಷ್ಣತೆ ತೋರಿಸಿದ್ದರಿಂದ ತೆರಳಲು ಅವಕಾಶ ಕಲ್ಪಿಸಲಾಯಿತು.

ಟಾಪ್ ನ್ಯೂಸ್

9

6.69 ಕೋಟಿ ರೂ. ಖೋಟಾನೋಟು ವಶಕ್ಕೆ: ಕೇಂದ್ರ ಏಜೆನ್ಸಿ ತನಖೆ ಆರಂಭ

1-a-DK-SHI

D.K. Suresh ಅವರದ್ದು ಹೃದಯವಂತಿಕೆಯಲ್ಲವೇ?: ಡಿಸಿಎಂ ಡಿ.ಕೆ. ಶಿವಕುಮಾರ್ ವಾಗ್ದಾಳಿ

1-wewqeqwe

Lok Sabha Polls: ಶಿಂಧೆ ಸೇನೆ ಸೇರ್ಪಡೆಯಾದ ಖ್ಯಾತ ನಟ ಗೋವಿಂದ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

1—-wewqe

Punjab ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಹೆಣ್ಣು ಮಗುವಿನ ಜನನ

8

ʼAadujeevithamʼ Twitter review: ಪೃಥ್ವಿರಾಜ್‌ ಅಭಿನಯಕ್ಕೆ ಬಹುಪರಾಕ್; ಹೇಗಿದೆ ಸಿನಿಮಾ?

12-baikampady

Fire; ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಅಗ್ನಿ ಅವಘಡ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Pernankila Temple:  ಪೆರ್ಣಂಕಿಲ ದೇಗುಲ: ಧಾರ್ಮಿಕ ಪ್ರಕ್ರಿಯೆ

Pernankila Temple: ಪೆರ್ಣಂಕಿಲ ದೇಗುಲ: ಧಾರ್ಮಿಕ ಪ್ರಕ್ರಿಯೆ

Kaup ಸುಗ್ಗಿ ಮಾರಿಪೂಜೆ ಸಂಪನ್ನ: 2 ಲಕ್ಷಕ್ಕೂ ಅಧಿಕ ಭಕ್ತರಿಂದ ಕ್ಷೇತ್ರ ದರ್ಶನ

Kaup ಸುಗ್ಗಿ ಮಾರಿಪೂಜೆ ಸಂಪನ್ನ: 2 ಲಕ್ಷಕ್ಕೂ ಅಧಿಕ ಭಕ್ತರಿಂದ ಕ್ಷೇತ್ರ ದರ್ಶನ

Vadabandeshwara Temple: ವಡಭಾಂಡೇಶ್ವರ ಬಲರಾಮ ದೇವಸ್ಥಾನ: ವೈಭವದ ಮಹಾ ರಥೋತ್ಸವ ಸಂಪನ್ನ

Vadabandeshwara Temple: ವಡಭಾಂಡೇಶ್ವರ ಬಲರಾಮ ದೇವಸ್ಥಾನ: ವೈಭವದ ಮಹಾ ರಥೋತ್ಸವ ಸಂಪನ್ನ

Udyavara: ತಪಾಸಣೆ ನಿರತ ಕಾರಿಗೆ ಕಾರು ಢಿಕ್ಕಿ; ಮಹಿಳೆಗೆ ಗಾಯ

Udyavara: ತಪಾಸಣೆ ನಿರತ ಕಾರಿಗೆ ಕಾರು ಢಿಕ್ಕಿ; ಮಹಿಳೆಗೆ ಗಾಯ

Udupi; ಕಾರು ಢಿಕ್ಕಿ: ಸ್ಕೂಟರ್‌ ಸವಾರ ಆಸ್ಪತ್ರೆಗೆ

Udupi; ಕಾರು ಢಿಕ್ಕಿ: ಸ್ಕೂಟರ್‌ ಸವಾರ ಆಸ್ಪತ್ರೆಗೆ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

9

6.69 ಕೋಟಿ ರೂ. ಖೋಟಾನೋಟು ವಶಕ್ಕೆ: ಕೇಂದ್ರ ಏಜೆನ್ಸಿ ತನಖೆ ಆರಂಭ

ಲೋಕಸಭೆ ಅಖಾಡ 2024: ಸವಾಲು ಗೆದ್ದ ಶೆಟ್ಟರ್‌ ಮುಂದಿದೆ ಅಗ್ನಿ ಪರೀಕ್ಷೆ

ಲೋಕಸಭೆ ಅಖಾಡ 2024: ಸವಾಲು ಗೆದ್ದ ಶೆಟ್ಟರ್‌ ಮುಂದಿದೆ ಅಗ್ನಿ ಪರೀಕ್ಷೆ

ಬಾಗಲಕೋಟೆ: ಕೋಟೆ ನಾಡಿನ ದಾಹ ತೀರಿಸುವ ದಾನಿಗಳು!

ಬಾಗಲಕೋಟೆ: ಕೋಟೆ ನಾಡಿನ ದಾಹ ತೀರಿಸುವ ದಾನಿಗಳು!

1-a-DK-SHI

D.K. Suresh ಅವರದ್ದು ಹೃದಯವಂತಿಕೆಯಲ್ಲವೇ?: ಡಿಸಿಎಂ ಡಿ.ಕೆ. ಶಿವಕುಮಾರ್ ವಾಗ್ದಾಳಿ

1-wewqeqwe

Lok Sabha Polls: ಶಿಂಧೆ ಸೇನೆ ಸೇರ್ಪಡೆಯಾದ ಖ್ಯಾತ ನಟ ಗೋವಿಂದ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.