ಜಿಂಕೆ ಅಡ್ಡ ಬಂದು ಬೈಕ್ ಪಲ್ಟಿ : ಜಿಂಕೆ ಮೃತ್ಯು : ಸವಾರ ಗಂಭೀರ ಗಾಯ..!
Team Udayavani, Nov 21, 2021, 7:58 AM IST
ಶಿರ್ವ : ಬೈಕ್ಗೆ ಅಡ್ಡ ಬಂದ ಜಿಂಕೆಯೊಂದು ಸ್ಥಳದಲ್ಲೇ ಸಾವನ್ನಪ್ಪಿದ್ದು, ಬೈಕ್ ಸವಾರ ಗಂಭೀರ ಗಾಯಗೊಂಡ ಘಟನೆ ಶಂಕರಪುರ ಎಂಬಲ್ಲಿ ನಡೆದಿದೆ.
ಬಂಟಕಲ್ ನಿವಾಸಿ ಹರ್ಷಿತ್(20) ಎಂಬಾತ ಗಾಯಗೊಂಡ ಬೈಕ್ ಸವಾರ ಎನ್ನಲಾಗಿದೆ
ತಾಲೂಕಿನ ಶಂಕರಪುರದ ಸುಭಾಸ್ನಗರ ಎಂಬಲ್ಲಿಯ ರಾಜ್ಯ ಹೆದ್ದಾರಿಯಲ್ಲಿ ಬೈಕ್ಗೆ ಜಿಂಕೆಯೊಂದು ಅಡ್ಡ ಬಂದ ಪರಿಣಾಮ ಜಿಂಕೆ ಸ್ಥಳದಲ್ಲೇ ಸಾವನ್ನಪ್ಪಿದ್ದು, ಬೈಕ್ ಸವಾರ ಹರ್ಷಿತ್ ಗಂಭೀರ ಗಾಯಗೊಂಡು ಉಡುಪಿಯ ಅಜ್ಜರಕಾಡು ಆಸ್ಪತ್ರೆಗೆ ದಾಖಲಿಸಲಾಗಿದೆ. ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಥಳೀಯರು ಸಹಕರಿಸಿದ್ದಾರೆ.