“ದಿನೇಶ್ಗೆ ಕಾನೂನು ಅರಿವಿನ ಕೊರತೆ
Team Udayavani, Jan 20, 2020, 5:46 AM IST
ಉಡುಪಿ: ಸಿಎಎ ವಿಚಾರದಲ್ಲಿ ದಿನೇಶ್ ಗುಂಡೂರಾವ್ ಅವರಿಗೆ ಕಾನೂನಿನ ಅರಿವಿನ ಕೊರತೆಯಿದೆ ಎಂದು ಕೇಂದ್ರ ಸಚಿವ ಸದಾನಂದ ಗೌಡ ಪ್ರತಿಕ್ರಿಯಿಸಿದರು.
ಉಡುಪಿಗೆ ರವಿವಾರ ಆಗಮಿಸಿದ ಅವರು ಸುದ್ದಿಗಾರರ ಜತೆ ಮಾತನಾಡಿದರು. ಸಿಎಎ ವಿಚಾರದಲ್ಲಿ ಗುಂಡೂರಾವ್ ಹೇಳಿಕೆ ಬಾಲಿಶತನದಿಂದ ಕೂಡಿದೆ, ಅವರಿಗೆ ಕಾನೂನಿನ ಆಳವಾದ ಅಧ್ಯಯನವಿಲ್ಲ. ಪೌರತ್ವ ತಿದ್ದುಪಡಿ ಕಾಯಿದೆ ವಿಚಾರದಲ್ಲಿ ಜನರಲ್ಲಿರುವ ಗೊಂದಲವನ್ನು ನಾವು ನಿವಾರಿಸುತ್ತೇವೆ. ದೇಶದ 130 ಕೋಟಿ ಜನರಿಗೆ ಕಾಯ್ದೆಯಿಂದ ತೊಂದರೆ ಆಗುವುದಿಲ್ಲ ಎಂದು ಡಿ.ವಿ. ಹೇಳಿದರು. ಕಾಂಗ್ರೆಸ್ನವರಿಗೆ ಐದೂವರೆ ವರ್ಷ ಬಿಜೆಪಿ ಸರಕಾರವನ್ನು ವಿರೋ ಧಿಸಲು ಏನೂ ವಿಷಯ ಸಿಕ್ಕಿಲ್ಲ. ಅದಕ್ಕೀಗ ಸಿಎಎ ವಿಚಾರ ಎತ್ತಿಕೊಂಡಿದ್ದಾರೆ. ಕಾಂಗ್ರೆಸ್ ಒಳಜಗಳದಿಂದ ವಿಭಜನೆಗೊಳ್ಳುತ್ತಿದೆ. ಅದನ್ನು ನಿಲ್ಲಿಸಲಿ, ಬಳಿಕ ದೇಶ ಒಡೆಯುವ ಹೇಳಿಕೆ ನೀಡಲಿ ಎಂದರು.
ಸಚಿವ ಸಂಪುಟ ಪುನಾರಚನೆ ವಿಚಾರ ಮುಖ್ಯಮಂತ್ರಿಗಳ ವಿವೇಚನೆಗೆ ಬಿಟ್ಟದ್ದು. ಮುಖ್ಯಮಂತ್ರಿಗಳು ಪಕ್ಷದ ವರಿಷ್ಠರ ಜತೆ ಈ ವಿಚಾರವಾಗಿ ಚರ್ಚಿಸಿದ್ದಾರೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ