ಜಿಲ್ಲಾ ಗಡಿ: ಹಗಲು ವೇಳೆ ಪೊಲೀಸರ ಹಿಂದೆಗೆತ


Team Udayavani, May 27, 2020, 10:21 PM IST

ಜಿಲ್ಲಾ ಗಡಿ: ಹಗಲು ವೇಳೆ ಪೊಲೀಸರ ಹಿಂದೆಗೆತ

ಪಡುಬಿದ್ರಿ: ಉಡುಪಿ ಜಿಲ್ಲಾ ಗಡಿಯ ಹೆಜಮಾಡಿ ಚೆಕ್‌ಪೋಸ್ಟ್‌ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್‌ ಸಿಬಂದಿಯನ್ನು ಬುಧವಾರ ಮಧ್ಯಾಹ್ನದ ವೇಳೆಗೆ ಇಲಾಖೆಯು ಹಿಂಪಡೆದಿದೆ. ಆದರೆ ರಾತ್ರಿಯ ವೇಳೆ ಇವರ ಪಾಳಿ ಮುಂದುವರಿಯಲಿದೆ. ಈ ಕುರಿತಾಗಿ ಕಾಪು ವೃತ್ತ ನಿರೀಕ್ಷಕ ಮಹೇಶ್‌ ಪ್ರಸಾದ್‌ ಅವರಲ್ಲಿ ಮಾಹಿತಿ ಕೇಳಿದಾಗ, ಈಗಾಗಲೇ ಲಾಕ್‌ಡೌನ್‌ ವಿಚಾರದಲ್ಲಿ ಸಾಕಷ್ಟು ವಿನಾಯತಿಗಳನ್ನು ನೀಡಲಾಗಿದೆ. ಹಾಗಾಗಿ ಉಡುಪಿ, ದ.ಕ., ಜಿಲ್ಲೆಗಳನ್ನು ಒಂದು ಘಟಕವಾಗಿಸಿದ್ದರಿಂದ ಅಂತರ್‌ ಜಿಲ್ಲಾ ವಾಹನ ಸಂಚಾರಕ್ಕೆ ನಿರ್ಬಂ ಧಗಳಿಲ್ಲ. ಈ ನಿಟ್ಟಿನಲ್ಲಿ ಹಗಲು ವೇಳೆಯಲ್ಲಿ ಪೊಲೀಸ್‌ ತಪಾಸಣೆ ಅಗತ್ಯವಿಲ್ಲ ಎಂಬು ದಾಗಿ ಅರಿತು ಪೊಲೀಸರನ್ನು ಹಿಂದಕ್ಕೆ ಕರೆಸಿಕೊಳ್ಳಲಾಗಿದೆ ಎಂದಿದ್ದಾರೆ. ಶಿರೂರು ಮತ್ತು ಹೊಸಂಗಡಿ ಗಡಿ ಭಾಗಗಳಲ್ಲಿ 24 ಗಂಟೆಗಳ ಪೊಲೀಸರ ನಿಗಾವಣೆ ಇದೆ. ಇದೇ ವೇಳೆ ಹೆಜಮಾಡಿಯಲ್ಲಿನ ದ.ಕ., ಜಿಲ್ಲೆಗೆ ಸಂಬಂಧಿಸಿದ ಚೆಕ್‌ಪೋಸ್ಟ್‌ನಲ್ಲಿ ಹಗಲು ವೇಳೆ ಕೂಡ ಪೊಲೀಸ್‌ ತಪಾಸಣೆ ಎಂದಿನಂತೆ ಮಂದುವರಿದಿದೆ.

ಕ್ವಾರಂಟೈನ್‌ ತಪ್ಪಿಸಿಕೊಳ್ಳಲಾರರೇ?
ಕೊರೊನಾ ಮಹಾಮಾರಿಯಿಂದಾಗಿ ಲಾಕ್‌ಡೌನ್‌ ಆರಂಭವಾದಾಗಿನಿಂದ ಪೊಲೀಸ್‌ ಬಲವನ್ನು ಹೆಜಮಾಡಿ ಯಂತಹ ಜಿಲ್ಲಾ ಚೆಕ್‌ಪೋಸ್ಟ್‌ಗಳಲ್ಲಿ ಜಿಲ್ಲೆ, ಅಂತರ್‌ ಜಿಲ್ಲಾ, ರಾಜ್ಯಗಳ ವಾಹನ ತಪಾಸಣೆಗಾಗಿ ವ್ಯವಸ್ಥೆ ಮಾಡಲಾಗಿತ್ತು. ಆದರೂ ಇದೀಗ ಹಗಲು ವೇಳೆಯಲ್ಲಿ ಪೊಲೀಸರು ಇಲ್ಲದಿರುವುದನ್ನು ಅರಿತು ಬೇರೆ ರಾಜ್ಯಗಳ ಮಂದಿ ಉಡುಪಿ ಜಿಲ್ಲೆಗೆ ಆಗಮಿಸಿದಲ್ಲಿ ಕ್ವಾರಂಟೈನ್‌ ತಪ್ಪಿಸಿ ನೇರ ಮನೆಗೇ ತೆರಳುವ ಅಪಾಯವೂ ಇದೆ ಎಂಬುದು ಸಾರ್ವಜನಿಕ ಅಭಿಪ್ರಾ ಯವಾಗಿದೆ. ಆದರೆ ಪೊಲೀಸ್‌ ಮೂಲಗಳು ಇದನ್ನು ಅಲ್ಲಗೆಳೆದಿದ್ದು ಕೇರಳದಿಂದ ಬರುವ ಮಂದಿಯನ್ನು ತಲ ಪಾಡಿಯಲೆತ್ತು ವೈಮಾನಿಕ ಮಾರ್ಗವಾಗಿ ಬರುವ ಮಂದಿಯನ್ನು ಅಲ್ಲಲ್ಲೇ ತಪಾಸಣೆ ನಡೆಸಿ ಆಯಾಯ ತಾ| ಕೇಂದ್ರಗಳಿಗೆ ಕ್ವಾರಂಟೈನ್‌ಗಾಗಿ ರವಾನಿಸಲಾಗುವುದು. ಮಾಹಿತಿ ಆಧರಿಸಿ ಸ್ಥಳೀಯ ಪೊಲೀಸರೂ ನಿಗಾ ವಹಿಸಲಿದ್ದಾರೆ.

ಪಡುಬಿದ್ರಿ ಠಾಣೆ ಸೇಫ್‌
ಪಡುಬಿದ್ರಿ ಪೊಲೀಸ್‌ ಠಾಣಾ ಸಿಬಂದಿಯ ಗಂಟಲ ದ್ರವ ಪರೀಕ್ಷೆಯ ವರದಿ ಈಗಾಗಲೇ ಬಂದಿದೆ. ಪಡುಬಿದ್ರಿ ಪೊಲೀಸ್‌ ಠಾಣೆ ಸೇಫ್‌ ಆಗಿದೆ. ಎಲ್ಲರ ವರದಿಯೂ ನೆಗೆಟಿವ್‌ ಬಂದಿರು ವುದಾಗಿ ಪಡುಬಿದ್ರಿ ಠಾಣಾಧಿಕಾರಿ ಸುಬ್ಬಣ್ಣ ತಿಳಿಸಿದ್ದಾರೆ. ಪಡುಬಿದ್ರಿಯ ಹೊಟೇಲೊಂದರಲ್ಲಿ ಕ್ವಾರಂಟೈನ್‌ನಲ್ಲಿರುವ 18 ಮಂದಿಯ ಗಂಟಲ ದ್ರವ ಪರೀಕ್ಷೆಯ ವರದಿ ಇನ್ನಷ್ಟೇ ಬರಬೇಕಿದೆ. ಬಂದ ಬಳಿಕ ನೆಗೆಟಿವ್‌ ಆದಲ್ಲಿ ಅವರನ್ನೂ ಮನೆಗೆ ಕಳುಹಿಸಿಕೊಡಲಾಗುವುದು ಎಂದು ಪಡುಬಿದ್ರಿ ಪ್ರಾ.ಆ. ಕೇಂದ್ರದ ವೈದ್ಯಾಧಿಕಾರಿ ಬಿ.ಬಿ. ರಾವ್‌ ಹೇಳಿದ್ದಾರೆ.

ಅಂತಾರಾಜ್ಯ ಪ್ರಯಾಣಿಕರ ತಪಾಸಣೆ ಗಾಗಿ ಹೆಜಮಾಡಿ ಚೆಕ್‌ಪೋಸ್ಟ್‌ ಹಗಲಲ್ಲೂ ಕಾರ್ಯನಿರ್ವಹಿಸುತ್ತದೆ ಎಂಬುದಾಗಿ ಉಡುಪಿ ಜಿಲ್ಲಾ ಪೊಲೀಸ್‌ ಸೂಚನೆ ತಿಳಿಸಿದೆ. ಚೆಕ್‌ ಪೋಸ್ಟ್‌ ಗಳನ್ನು ತೆಗೆಯಲಾಗಿಲ್ಲ. ಅಂತಾರಾಜ್ಯ ಮಂದಿಯ ಜಿಲ್ಲಾ ಒಳ ಪ್ರವೇಶದ ವೇಳೆ ತಪಾಸಣೆ ನಡೆಸಿ ಕ್ವಾರೆಂಟೈನ್‌ಗೆ ಒಳಪಡಿಸಲು ಶಿರೂರು, ಹೆಜಮಾಡಿ, ಸೋಮೇಶ್ವರ, ಹೊಸಂಗಡಿಗಳಲ್ಲಿ ಹಗಲು ವೇಳೆಗಳಲ್ಲೂ ಚೆಕ್‌ಪೋಸ್ಟ್‌ ನಿಗಾವಣೆ ಕಾರ್ಯ ಮುಂದುವರಿಯಲಿದೆ.

ಮುಕ್ತ ವಾಹನ ಸಂಚಾರಕ್ಕೆ ಅವಕಾಶ
ಕೊಲ್ಲೂರು: ಎರಡು ತಿಂಗಳುಗಳಿಂದ ಇಲ್ಲಿನ ಗಡಿ ಪ್ರದೇಶವಾದ ದಳಿ ಎಂಬಲ್ಲಿ ಒದಗಿಸಲಾಗಿದ್ದ ಬಿಗು ಪೊಲೀಸ್‌ ಬಂದೋಬಸ್ತ್ ವ್ಯವಸ್ಥೆ ಮೇ 26 ರಿಂದ ಸಡಿಲಗೊಳಿಸಲಾಗಿದೆ.ಬಹುತೇಕ ವೈದ್ಯಾ ಧಿಕಾರಿಗಳು, ದಾದಿಯರು ಹಾಗೂ ವಿಶೇಷ ಪೊಲೀಸ್‌ ತಂಡದೊಡನೆ ಕಂದಾಯ ಇಲಾಖೆ ಅ ಧಿಕಾರಿಗಳ ನೇತೃತ್ವದಲ್ಲಿ ಶಿವಮೊಗ್ಗ ಹಾಗೂ ಇನ್ನಿತರ ಜಿಲ್ಲೆಗಳಿಂದ ಯಾರೊಬ್ಬರು ಗಡಿ ದಾಟದಂತೆ ವಿಶೇಷ ವ್ಯವಸ್ಥೆ ಏರ್ಪಡಿಸಿ ಪ್ರತಿ ವಾಹನ ತಪಾಸಣೆ ನಡೆಯುತ್ತಿತ್ತು. ಬುಧವಾರದಿಂದ ಹಗಲು ಹೊತ್ತಿನಲ್ಲಿ ನಡೆಯುತ್ತಿದ್ದ ವಾಹನ ತಪಾಸಣೆ ರದ್ದುಗೊಳಿಸಲಾಗಿದ್ದು, ರಾತ್ರಿ ವೇಳೆಯಲ್ಲಿ ಮಾತ್ರ ತಪಾಸಣೆ ಮುಂದುವರಿಯಲಿದೆ. ಈ ರೀತಿಯ ಬದಲಾವಣೆಯು ಒಂದಿಷ್ಟು ಗೊಂದಲದ ವಾತಾವರಣ ಸೃಷ್ಟಿ ಮಾಡಿದೆ.

ಟಾಪ್ ನ್ಯೂಸ್

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ

Puttur; ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ಅಣ್ಣಾಮಲೈ

Lok Sabha Election ಕಾಂಗ್ರೆಸ್‌ಗೆ 20ಕ್ಕೂ ಅಧಿಕ ಸ್ಥಾನ: ದಿನೇಶ್‌

Lok Sabha Election ಕಾಂಗ್ರೆಸ್‌ಗೆ 20ಕ್ಕೂ ಅಧಿಕ ಸ್ಥಾನ: ದಿನೇಶ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

12

Theft; ಕೊಲ್ಲೂರು: ಮಹಿಳೆಯ ಚಿನ್ನ, ನಗದು ಕಳವು

11-udyavara

Sand Mining; ಉದ್ಯಾವರ: ಚುನಾವಣ ಚೆಕ್‌ಪೋಸ್ಟ್‌ ಬಳಿ ಅಕ್ರಮ ಮರಳು ಸಾಗಾಟ ಪತ್ತೆ

10-shirva

ಮೂಡುಬೆಳ್ಳೆ ಶ್ರೀಮಹಾಲಿಂಗೇಶ್ವರ, ಶ್ರೀ ಮಹಾಗಣಪತಿ, ಶ್ರೀ ಸೂರ್ಯನಾರಾಯಣ ದೇಗುಲ

Lok Sabha Election 2024 ಕೊಡುವವನ ಪಾತ್ರ ನಿರ್ವಹಿಸಲು ಮತದಾರ ಸಜ್ಜು

Lok Sabha Election 2024 ಕೊಡುವವನ ಪಾತ್ರ ನಿರ್ವಹಿಸಲು ಮತದಾರ ಸಜ್ಜು

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.