ಉಡುಪಿ: ನಾಯಿಗಾಗಿ ಯುವಕ-ಯುವತಿಯ ಗಲಾಟೆ; ಯುವಕನನ್ನು ಬಿಟ್ಟು ಯುವತಿಯೊಂದಿಗೆ ತೆರಳಿದ ನಾಯಿ!
Team Udayavani, Apr 11, 2021, 3:58 PM IST
Representative image used
ಉಡುಪಿ: ಯುವಕ, ಯುವತಿ ನಾಯಿಗಾಗಿ ಗಲಾಟೆ ನಡೆಸಿದ ಪ್ರಸಂಗ ಉಡುಪಿ ನಗರದ ಅಜ್ಜರಕಾಡು ಪೆಟ್ಶಾಪ್ ಬಳಿ ನಡೆದಿದೆ.
ಯುವಕನೊಬ್ಬ ಶುಕ್ರವಾರ ಸಾಯಂಕಾಲ ಅಜ್ಜರಕಾಡು ಪೆಟ್ ಶಾಪ್ ಬಳಿ ನಾಯಿಯನ್ನು ಕರೆದು ಕೊಂಡು ಬಂದಿದ್ದಾರೆ. ಆಕಸ್ಮಿಕವಾಗಿ ಅದೇ ಸ್ಥಳದಲ್ಲಿ ನಾಯಿಯನ್ನು ಕಂಡ ಯುವತಿಯೊಬ್ಬಳು ಇದು ನನ್ನ ನಾಯಿ; ಏಳೆಂಟು ತಿಂಗಳ ಹಿಂದೆ ನಾಪತ್ತೆಯಾಗಿತ್ತು. ನಿನ್ನ ಬಳಿ ಹೇಗೆ ಬಂತು ಎಂದು ಪ್ರಶ್ನಿಸಿದ್ದಾಳೆ.
ಇದನ್ನೂ ಓದಿ:ಉಡುಪಿ ಜಿಲ್ಲಾಧಿಕಾರಿ ಹೆಸರಿನಲ್ಲಿ ನಕಲಿ ಫೇಸ್ ಬುಕ್ ಖಾತೆ!
ಯುವಕ ಸಹ ಇದು ನನ್ನದೇ ನಾಯಿ. ನಿಮ್ಮ ನಾಯಿ ಅಲ್ಲ ಎಂದಿದ್ದಾರೆ. ಕಪ್ಪು ಬಣ್ಣದ ನಾಯಿಗಾಗಿ ಇಬ್ಬರ ನಡುವೆ ಕೆಲಕಾಲ ವಾಗ್ವಾದ ನಡೆದಿದೆ.
ಯುವತಿ ನಾಯಿಯ ಹೆಸರು ಹೇಳಿ ಕರೆದಿದ್ದು, ನಾಯಿ ಸಹ ಯುವತಿ ಜತೆ ಆತ್ಮೀಯವಾಗಿ ವರ್ತಿಸಿದೆ. ಬಳಿಕ ಹೊಯ್ಸಳ ಪೊಲೀಸರು ಸ್ಥಳಕ್ಕೆ ಆಗಮಿಸಿ ಇಬ್ಬರ ಜಗಳ ಬಿಡಿಸಿ, ಮಾತುಕತೆ ಮೂಲಕ ರಾಜಿ ಮಾಡಿಸಿದ್ದಾರೆ.
ಇದನ್ನೂ ಓದಿ: ಈ ಕಾಂಗರುಗಳು ಜಗಳ ಆಡುತ್ತಿವೆಯೇ? ಅಥವಾ ತುಂಟಾಟ ಮಾಡುತ್ತಿವೆಯೇ?
ನಾಯಿ ಯುವತಿಯ ಜತೆಗೆ ಹೋಗಲು ಮನಸ್ಸು ಮಾಡುವ ಮೂಲಕ ಪ್ರಕರಣ ಇತ್ಯರ್ಥ ಕಂಡಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ
MUST WATCH
ಹೊಸ ಸೇರ್ಪಡೆ
BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ
ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ
ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’
Kollywood: ಅಜಿತ್ ಹುಟ್ಟುಹಬ್ಬಕ್ಕೆ ಸೂಪರ್ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್ ಖುಷ್
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ