ಮಾರ್ಜಾಲಕ್ಕೆ ಜೀವದಾನ ಮಾಡಿ ಮಾನವೀಯತೆ ಮೆರೆದ ಉಡುಪಿ ಅಗ್ನಿಶಾಮಕ ದಳ
Team Udayavani, Dec 6, 2020, 11:17 AM IST
ಉಡುಪಿ: ಇಲ್ಲಿನ ತೆಂಕಪೇಟೆಯ ವಸತಿ ಸಂಕೀರ್ಣದ ಕಿಟಕಿಯ ಲಿಂಟಾಲ್ ಮೇಲೆ ಸಿಕ್ಕಿ ಬಿದ್ದಿದ್ದ ಸಾಕು ಬೆಕ್ಕೊಂದನ್ನು ಆದಿತ್ಯವಾರ ಉಡುಪಿ ಅಗ್ನಿಶಾಮಕ ದಳದ ಸಿಬ್ಬಂದಿಗಳು ಸಕಾಲದಲ್ಲಿ ಆಗಮಿಸಿ ರಕ್ಷಿಸಿದರು.
ಮಾನವರು ಹೋಗಲು ಸಾಧ್ಯವಾಗದ ಸ್ಥಳದಲ್ಲಿದ್ದ ಬೆಕ್ಕು ಆಯತಪ್ಪಿ ಕೆಳಗೆ ಬಿದ್ದಿದ್ದರೆ ಜೀವಕಳೆದು ಕೊಳ್ಳುತ್ತಿತ್ತು. ಎತ್ತರದ ಏಣಿ ಹಾಕಿಕೊಂಡು ಮೇಲೆ ಏರಿದ ಸಿಬ್ಬಂದಿ ಅದನ್ನು ಓಡಿಸಲು ಪ್ರಯತ್ನಿಸಿದರು.
ಇದನ್ನೂ ಓದಿ:ಕಾರ್ ನ ಬ್ರೇಕ್ ವೈಫಲ್ಯ: ಬುರಾರಿ ಮೇಲ್ಸೇತುವೆಯಲ್ಲಿ ಪರಸ್ಪರ ಢಿಕ್ಕಿಯಾದ ಏಳು ವಾಹನಗಳು!
ಅದು ಕೆಳಗೆ ಹಾರಿಬಿದ್ದರೂ ಪ್ರಾಣಾಪಾಯವಾಗದಂತೆ ಕೆಳಗೆ ಬಲೆಹಾಕಲಾಗಿತ್ತು. ಮೇಲಿಂದ ಓಡಿಸುತ್ತಿದ್ದಂತೆ ಛಂಗನೆ ಕೆಳಗೆ ಹಾರಿದ ಬೆಕ್ಕು ಅಗ್ನಿಶಾಮಕ ಸಿಬಂದಿಯ ಭುಜದ ಮೇಲೆ ಬಿದ್ದು ಓಡಿಹೋಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ
Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು
Politics: ಚಿತ್ರದುರ್ಗ ರಾಜಕೀಯ ನಿರಾಶ್ರಿತರ ಕೇಂದ್ರವೇ?: ರಘುಚಂದನ್
PSI re-examination: ಪಿಎಸ್ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ