ಪೊಲಿಪು : ಮೂರು ಮನೆಗಳಿಗೆ ಸಿಡಿಲು ಬಡಿದು ಅಪಾರ ಹಾನಿ
Team Udayavani, Jun 20, 2021, 6:59 PM IST
ಕಾಪು : ಕಾಪು ಪುರಸಭೆ ವ್ಯಾಪ್ತಿಯ ಉಳಿಯಾರಗೋಳಿ ಗ್ರಾಮದ ಪೊಲಿಪು ಪರಿಸರದಲ್ಲಿ ಸಿಡಿಲಾರ್ಭಟಕ್ಕೆ ಮೂರು ಮನೆಗಳಲ್ಲಿನ ವಿದ್ಯುತ್ ವಯರಿಂಗ್ ಸಹಿತ ವಿದ್ಯುತ್ ಅವಲಂಭಿತ ಗೃಹೋಪಯೋಗಿ ಸೊತ್ತುಗಳು ಸುಟ್ಟು ಕರಕಲಾದ ಘಟನೆ ರವಿವಾರ ಮುಂಜಾನೆ ನಡೆದಿದೆ.
ರವಿವಾರ ಮುಂಜಾನೆ 4 ಗಂಟೆಯ ವೇಳೆಗೆ ಪೊಲಿಪು ಯಾರ್ಡ್ ಬಳಿಯ ರಾಘವ ಅಮೀನ್, ಸಾಧು ಆಚಾರ್ಯ ಮತ್ತು ಪ್ರಕಾಶ್ ಎಂಬವರ ಮನೆಗಳಿಗೆ ಸಿಡಿಲು ಬಡಿದಿದ್ದು ಅಪಾರ ಸೊತ್ತು ಹಾನಿಯುಂಟಾಗಿದೆ.
ಇದನ್ನೂ ಓದಿ:ಪ್ರಧಾನಿ ನೇತೃತ್ವದ ಸರ್ವ ಪಕ್ಷಗಳ ಸಭೆಯನ್ನು ಸ್ವಾಗತಿಸಿದ ಕಾಶ್ಮೀರದ ಪ್ರಾದೇಶಿಕ ಪಕ್ಷಗಳು..!
ಯಾರ್ಡ್ ಬೀಚ್ ಬಳಿಯ ರಾಘವ ಅಮೀನ್ ಅವರ ಮನೆಗೆ ಸಿಡಿಲು ಬಡಿದು ವಯರಿಂಗ್ ಸುಟ್ಟು ಹೋಗಿದ್ದು, ಮನೆಯ ಗೋಡೆ ಬಿರುಕು ಬಿಟ್ಟಿದೆ. ಸಾಧು ಆಚಾರ್ಯ ಅವರ ಮನೆಗೆ ಸಿಡಿಲು ಬಡಿದು ಇನ್ವರ್ಟರ್, ರೆಫ್ರಿಜರೇಟರ್ ಮತ್ತು ವಯರಿಂಗ್ ಸುಟ್ಟು ಹೋಗಿದೆ. ರಿಕ್ಷಾ ಚಾಲಕ ಪ್ರಕಾಶ್ ಅವರ ಮನೆಯ ಫ್ರಿಡ್ಜ್ ಮತ್ತು ವಯರಿಂಗ್ ಸುಟ್ಟು ಹೋಗಿದೆ.
ಸಿಡಿಲಿನ ಆರ್ಭಟ ಮತ್ತು ಆಘಾತದ ವೇಲೆ ಮನೆಯವರು ಗಾಢ ನಿದ್ದೆಯಲ್ಲಿದ್ದು, ಮನೆಯಲ್ಲಿದವರು ಅಪಾಯದಿಂದ ಪಾರಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
K. Jayaprakash Hegde; ಮೀನುಗಾರಿಕೆ, ಪ್ರವಾಸೋದ್ಯಮದ ಅಭಿವೃದ್ದಿಗೆ ಹೆಚ್ಚಿನ ಆಧ್ಯತೆ
Amit Shah: 2024ರ ಚುನಾವಣೆಯಲ್ಲಿ ಎನ್ ಡಿಎಗೆ 400ಕ್ಕೂ ಅಧಿಕ ಸ್ಥಾನ ಖಚಿತ: ಶಾ
ಕ್ರಿಕೆಟ್ ಬಗ್ಗೆ ಕಿಂಚಿತ್ತೂ ಜ್ಞಾನವಿಲ್ಲದ ವ್ಯಕ್ತಿಗೆ ಡ್ರೀಮ್11ನಲ್ಲಿ ಒಲಿಯಿತು 1.5 ಕೋಟಿ
IPL; ಸ್ಟಾಯಿನಿಸ್ ಏಟಿಗೆ ತವರಲ್ಲೆ ಚಾಂಪಿಯನ್ ಚೆನ್ನೈ ಠುಸ್!
Congress vs BJP; ಬ್ರಹ್ಮಾವರದಲ್ಲಿ ಶಕ್ತಿ ಪ್ರದರ್ಶನದ ವೇದಿಕೆ!