ಜಗನ್ ಗೆಲುವು: ಹೆದ್ದಾರಿ ಆಸೆಗೆ ಚಿಗುರು!
Team Udayavani, May 25, 2019, 6:00 AM IST
ಉಡುಪಿ: ಆಂಧ್ರ ಪ್ರದೇಶದಲ್ಲಿ ವೈಎಸ್ಆರ್ ಕಾಂಗ್ರೆಸ್ ಗೆಲುವು ಸಾಧಿಸಿರುವುದಕ್ಕೂ ರಾಷ್ಟ್ರೀಯ ಹೆದ್ದಾರಿ 66ರ ಸುರತ್ಕಲ್-ಕುಂದಾಪುರ ನಡುವಿನ ಕಾಮಗಾರಿಗೂ ಸಂಬಂಧವೇರ್ಪಟ್ಟಿದೆ!
ಹೌದು. ಜಗನ್ ನೇತೃತ್ವದಲ್ಲಿ ವೈಎಸ್ಆರ್ ಕಾಂಗ್ರೆಸ್ ಪ್ರಚಂಡ ಗೆಲುವು ಸಾಧಿಸಿದ ವರದಿ ಹೊರಬೀಳುತ್ತಿರುವಂತೆ ಉಡುಪಿ, ಪಡುಬಿದ್ರಿ, ಕಾಪು, ಕುಂದಾಪುರದ ಕೆಲವೆಡೆ ಹೆದ್ದಾರಿ ಚತುಷ್ಪಥ ಕಾಮಗಾರಿ ಕುರಿತ ಚರ್ಚೆ ಗರಿಗೆದರಿತು. ಇದಕ್ಕೆ ಕಾರಣ ಈ ಹೆದ್ದಾರಿ ಕಾಮಗಾರಿ ನಡೆಸುತ್ತಿರುವ ನವಯುಗ ಕಂಪೆನಿ ರೆಡ್ಡಿ ಮಾಲಕತ್ವದಲ್ಲಿರುವುದು. ಹಲವು ವರ್ಷಗಳಿಂದ ಕುಂಟುತ್ತಿರುವ ಈ ಹೆದ್ದಾರಿ ಕಾಮಗಾರಿ, ಟೋಲ್ ವಿರುದ್ಧ ಈಗಾಗಲೇ ಪ್ರತಿಭಟನೆಗಳು ನಡೆದಿವೆ.
ಎಚ್ಚರಿಕೆ, ಸಹಾಯ?
ಹೆದ್ದಾರಿ ಅವ್ಯವಸ್ಥೆ ಕುರಿತು ಈ ಹಿಂದೆ ಮಾಧ್ಯಮದವರು ಸಂಸದೆ ಶೋಭಾ ಅವರನ್ನು ಪ್ರಶ್ನಿಸಿದಾಗಲೆಲ್ಲ, ನಾನು ಹಲವು ಬಾರಿ ಸಚಿವ ನಿತಿನ್ ಗಡ್ಕರಿ ಅವರೊಂದಿಗೆ ಮಾತನಾ ಡಿದ್ದೇನೆ. ಅವರು ನವಯುಗ ಕಂಪೆನಿಯವರೊಂದಿಗೆ ಮಾತುಕತೆ ನಡೆಸಿ ಎಚ್ಚರಿಕೆ ನೀಡಿದ್ದಾರೆ. ಅದು ತಾನು ಆರ್ಥಿಕ ಸಂಕಷ್ಟದಲ್ಲಿರುವುದನ್ನು ಹೇಳುತ್ತಾ ಬಂದಿದೆ’ ಎನ್ನುತ್ತಿದ್ದರು. ಈಗ ಶೋಭಾ ಮತ್ತೂಮ್ಮೆ ಸಂಸದೆಯಾಗಿದ್ದಾರೆ.
ಆರ್ಥಿಕ ಸಂಕಷ್ಟದಿಂದ ಪಾರು?
ಜಗನ್ ಗೆಲುವು ಅವರ ವ್ಯವಹಾರಕ್ಕೂ ಲಾಭ ತಂದುಕೊಡಬಹುದಾಗಿದ್ದು. ಆ ಮೂಲಕವಾದರೂ ಹೆದ್ದಾರಿ ಕಾಮಗಾರಿ ಪೂರ್ಣಗೊಳ್ಳಬಹುದು ಎಂಬ ಆಶಯ ಜನರದ್ದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಡೀಸೆಲ್ ಇಲ್ಲದೆ ನಿಂತ ವಾಹನ… ಕಸವನ್ನು ಹೆಗಲ ಮೇಲೆ ಹೊತ್ತು ವಿಲೇವಾರಿ ಮಾಡಿದ ಪೌರಕಾರ್ಮಿಕ
Chitradurga; ನಾವು ಯಾರನ್ನೂ ಕಾಯಲ್ಲ, ನಾಮಿನೇಷನ್ ಪಕ್ಕಾ…: ಎಂ.ಚಂದ್ರಪ್ಪ
ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್ಆ್ಯಪ್ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ
Sathish Ninasam- Rachita Ram: ಮ್ಯಾಟ್ನಿಯಲ್ಲಿ ಹಾರರ್ ಶೋ
ಕೋರ್ಟ್ ಮೇಲೆ ಪಟ್ಟಭದ್ರರ ಒತ್ತಡ: ವಕೀಲರ ಪತ್ರ