ಕಡಲ ಕಿನಾರೆ ಬಳಿ ಗದ್ದೆ ನಿರ್ಮಿಸಿ ತೆನೆ ಸಿದ್ಧಪಡಿಸಿ ಕದಿರು ಕಟ್ಟಿದ ಪಂಡರಿನಾಥ ಭಜನ ಮಂದಿರ

ಸುಮಾರು 60 ಮನೆಗಳಿಗೆ ತಲುಪಿದ ತೆನೆ

Team Udayavani, Oct 18, 2020, 8:57 AM IST

ಕಡಲ ಕಿನಾರೆ ಬಳಿ ಗದ್ದೆ ನಿರ್ಮಿಸಿ ತೆನೆ ಸಿದ್ಧಪಡಿಸಿ ಕದಿರು ಕಟ್ಟಿದ ಪಂಡರಿನಾಥ ಭಜನ ಮಂದಿರ

ಕಟಪಾಡಿ: ಕನಕೋಡ ಪಡುಕರೆ ಕಡಲ ಕಿನಾರೆ ಪಕ್ಕದ ಪಂಡರಿನಾಥ ಭಜನ ಮಂದಿರದ ವತಿಯಿಂದ ಸದಸ್ಯರೆಲ್ಲಾ ಸ್ವತಃ ಶ್ರಮವಹಿಸಿ ಹೊಸದಾಗಿ ಗದ್ದೆಯನ್ನು ನಿರ್ಮಿಸಿ ನಾಟಿ ಮಾಡುವ ಮೂಲಕ ತೆನೆಯನ್ನು ಸಿದ್ಧ ಪಡಿಸಿ ಕದಿರು ಕಟ್ಟುವ (ತೆನೆ ಕಟ್ಟುವ) ಧಾರ್ಮಿಕ ಕಾರ್ಯಕ್ರಮ ನಡೆದಿದೆ.

ಬೆಳೆದು ನಿಂತ ಪೈರನ್ನು ಭಜನ ಮಂದಿರದ ಆಡಳಿತ ಮಂಡಳಿಯು ಶ್ರದ್ಧಾ ಪೂರ್ವಕವಾಗಿ ಗದ್ದೆಯಿಂದ ತೆಗೆದುಕೊಂಡು ಭಜನ ಮಂದಿರಕ್ಕೆ ತಂದು ಪೂಜಿಸಿ ತೆನೆ ಕಟ್ಟುವ ಕಾಯಕವನ್ನು ಪೂರೈಸಿದ್ದಾರೆ. ಭಜನ ಮಂದಿರದಲ್ಲಿ ನಡೆಯುವ ಈ ಧಾರ್ಮಿಕ ಕಾರ್ಯಕ್ರಮಕ್ಕಾಗಿಯೇ ಈ ಬಾರಿ ಕಡಲ ಕಿನಾರೆ ಬಳಿಯಲ್ಲಿ ಸುಮಾರು 200 ಚದರ ಅಡಿ ಪ್ರದೇಶದಲ್ಲಿ ಸಾಕಷ್ಟು ಮಣ್ಣನ್ನು ಹದಗೊಳಿಸಿ ಹೊಸದಾಗಿ ಗದ್ದೆಯನ್ನು ನಿರ್ಮಿಸಿ ಸುಮಾರು 70 ದಿನಗಳ ಹಿಂದೆಯೇ ನಾಟಿ ಕೆಲಸವನ್ನು ಪೂರೈಸಲಾಗಿತ್ತು. ಸಮುದ್ರದ ಉಪ್ಪು ನೀರಿನಿಂದ ಬೆಳೆ ಹಾನಿಗೀಡಾಗದಂತೆ ಸಾಕಷ್ಟು ಸುರಕ್ಷತೆ ವಹಿಸಿ ಉತ್ತಮ ಫಸಲು ಭರಿತ ಪೈರನ್ನು ಸಿದ್ಧ ಪಡಿಸಲಾಗಿತ್ತು. ನಾಟಿ ಕೆಲಸಕ್ಕೆ ನುರಿತ ಕೃಷಿ ಕಾರ್ಮಿಕರ ಬಳಕೆಯನ್ನೂ ಮಾಡಲಾಗಿತ್ತು.

ಕನಕೋಡ

ಇದನ್ನೂ ಓದಿ:ಉಡುಪಿಯನ್ನು ಡ್ರಗ್ಸ್‌ ಮುಕ್ತ ಜಿಲ್ಲೆಯನ್ನಾಗಿಸುವ ಗುರಿ:ಎಸ್‌ಪಿ

ಸಮುದ್ರ ತೀರ, ಮರಳು ಮತ್ತು ಉಪ್ಪು ನೀರಿನ ಅಂಶ ಹೆಚ್ಚು ಇರುವ ಈ ಸ್ಥಳದಲ್ಲಿ ಭತ್ತದ ಬೆಳೆ ಬೆಳೆಯುವುದೇ ಸಂಶಯವಾಗಿತ್ತು. ಆದರೂ ಪ್ರಯತ್ನಿಸುವ ಇರಾದೆಯಿಂದ ಮಂದಿರದ ಸದಸ್ಯರೆಲ್ಲರೂ ಒಗ್ಗೂಡಿಕೊಂಡು ಮಣ್ಣು ಹದ ಮಾಡಿ ಗದ್ದೆ ನಿರ್ಮಿಸಿ ಭತ್ತದ ಬೆಳೆ ಬೆಳೆಯಲಾಯಿತು. ಧಾರ್ಮಿಕ ಶ್ರದ್ಧೆಯಿಂದ ಗದ್ದೆಯಿಂದ ತೆನೆಯನ್ನು ಮಂದಿರಕ್ಕೆ ತಂದು ಪೂಜಿಸಿ ತೆನೆ ಕಟ್ಟುವ ಧಾರ್ಮಿಕ ಕೆಲಸಕ್ಕೆ ಈ ಗದ್ದೆಯ ಫಸಲು ಭರಿತ ಪೈರನ್ನು ಬಳಸಲಾಗಿದೆ ಎಂದು ಕೃಷ್ಣ ಜಿ. ಕೋಟ್ಯಾನ್, ಮಾಜಿ ಅಧ್ಯಕ್ಷ, ಪಂಡರಿನಾಥ ಭಜನ ಮಂದಿರ, ಕನಕೋಡ, ಉದ್ಯಾವರ, ಪಡುಕರೆ, ಕುತ್ಪಾಡಿ, ಕನಕೋಡ, ಕಡೆಕಾರು, ಕುದ್ರುಕೆರೆ, ಕಿದಿಯೂರು, ಪಡುಕರೆ, ಮಲ್ಪೆ ಪಡುಕರೆ ಪ್ರದೇಶದ ಸುಮಾರು 60 ಮನೆಗಳಿಗೆ  ಸ್ವತಃ ಸಿದ್ಧ ಪಡಿಸಿದ ಈ ತೆನೆಯನ್ನು ತಮ್ಮ ತೆನೆಕಟ್ಟುವುದಕ್ಕೆ ಬಳಸಿಕೊಂಡಿರುತ್ತಾರೆ ಎಂದು ಭಜನ ಮಂದಿರದ ಆಡಳಿತ ಮಂಡಳಿ ಉದಯವಾಣಿಗೆ ತಿಳಿಸಿದ್ದಾರೆ

ಕನಕೋಡ

ಟಾಪ್ ನ್ಯೂಸ್

NIA (2)

Rameshwaram Cafe case: ಎನ್‌ಐಎಯಿಂದ ಸಹ ಸಂಚುಕೋರನ ಬಂಧನ

1-qqwewqe

Congress ಹಾಸನ, ಮಂಡ್ಯದಲ್ಲೂ ಗೆಲ್ಲಲಿದೆ : ಸಚಿವ ಎಂ.ಬಿ.ಪಾಟೀಲ್

1-eewqe

BJP MP ಜಿಗಜಿಣಗಿ ಮಾಡಿದ ಅಪಮಾನವನ್ನು ಸಮಾಜದ ಮನೆ ಮನೆಗೆ ತಿಳಿಸುತ್ತೇವೆ: ರಾಠೋಡ

9

6.69 ಕೋಟಿ ರೂ. ಖೋಟಾನೋಟು ವಶಕ್ಕೆ: ಕೇಂದ್ರ ಏಜೆನ್ಸಿ ತನಖೆ ಆರಂಭ

1-a-DK-SHI

D.K. Suresh ಅವರದ್ದು ಹೃದಯವಂತಿಕೆಯಲ್ಲವೇ?: ಡಿಸಿಎಂ ಡಿ.ಕೆ. ಶಿವಕುಮಾರ್ ವಾಗ್ದಾಳಿ

1-wewqeqwe

Lok Sabha Polls: ಶಿಂಧೆ ಸೇನೆ ಸೇರ್ಪಡೆಯಾದ ಖ್ಯಾತ ನಟ ಗೋವಿಂದ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi: ಕರ್ತವ್ಯದಲ್ಲಿದ್ದ ಪೊಲೀಸ್‌ಗೆ ಹಲ್ಲೆ, ಜೀವಬೆದರಿಕೆ: ಪ್ರತ್ಯೇಕ ಪ್ರಕರಣ ದಾಖಲು

Udupi: ಕರ್ತವ್ಯದಲ್ಲಿದ್ದ ಪೊಲೀಸ್‌ಗೆ ಹಲ್ಲೆ, ಜೀವಬೆದರಿಕೆ: ಪ್ರತ್ಯೇಕ ಪ್ರಕರಣ ದಾಖಲು

Belapu: ರೈಲ್ವೇ ಹಳಿ ಬಳಿ ಬಿದ್ದು ಸಾವು

Belapu: ರೈಲ್ವೇ ಹಳಿ ಬಳಿ ಬಿದ್ದು ಸಾವು

Pernankila Temple:  ಪೆರ್ಣಂಕಿಲ ದೇಗುಲ: ಧಾರ್ಮಿಕ ಪ್ರಕ್ರಿಯೆ

Pernankila Temple: ಪೆರ್ಣಂಕಿಲ ದೇಗುಲ: ಧಾರ್ಮಿಕ ಪ್ರಕ್ರಿಯೆ

Kaup ಸುಗ್ಗಿ ಮಾರಿಪೂಜೆ ಸಂಪನ್ನ: 2 ಲಕ್ಷಕ್ಕೂ ಅಧಿಕ ಭಕ್ತರಿಂದ ಕ್ಷೇತ್ರ ದರ್ಶನ

Kaup ಸುಗ್ಗಿ ಮಾರಿಪೂಜೆ ಸಂಪನ್ನ: 2 ಲಕ್ಷಕ್ಕೂ ಅಧಿಕ ಭಕ್ತರಿಂದ ಕ್ಷೇತ್ರ ದರ್ಶನ

Vadabandeshwara Temple: ವಡಭಾಂಡೇಶ್ವರ ಬಲರಾಮ ದೇವಸ್ಥಾನ: ವೈಭವದ ಮಹಾ ರಥೋತ್ಸವ ಸಂಪನ್ನ

Vadabandeshwara Temple: ವಡಭಾಂಡೇಶ್ವರ ಬಲರಾಮ ದೇವಸ್ಥಾನ: ವೈಭವದ ಮಹಾ ರಥೋತ್ಸವ ಸಂಪನ್ನ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Checkbounce case: ಆರೋಪಿ ಮಹಿಳೆ ಖುಲಾಸೆ

Checkbounce case: ಆರೋಪಿ ಮಹಿಳೆ ಖುಲಾಸೆ

Udupi: ಕರ್ತವ್ಯದಲ್ಲಿದ್ದ ಪೊಲೀಸ್‌ಗೆ ಹಲ್ಲೆ, ಜೀವಬೆದರಿಕೆ: ಪ್ರತ್ಯೇಕ ಪ್ರಕರಣ ದಾಖಲು

Udupi: ಕರ್ತವ್ಯದಲ್ಲಿದ್ದ ಪೊಲೀಸ್‌ಗೆ ಹಲ್ಲೆ, ಜೀವಬೆದರಿಕೆ: ಪ್ರತ್ಯೇಕ ಪ್ರಕರಣ ದಾಖಲು

NIA (2)

Rameshwaram Cafe case: ಎನ್‌ಐಎಯಿಂದ ಸಹ ಸಂಚುಕೋರನ ಬಂಧನ

Fraud: ಸರಕಾರಿ ಉದ್ಯೋಗ ಆಮಿಷ: ಲಕ್ಷಾಂತರ ರೂಪಾಯಿ ವಂಚನೆ

Fraud: ಸರಕಾರಿ ಉದ್ಯೋಗ ಆಮಿಷ: ಲಕ್ಷಾಂತರ ರೂಪಾಯಿ ವಂಚನೆ

Kokkada: ತೋಟದಲ್ಲಿ ಕಟ್ಟಿದ್ದ ದನ ಕಳವು

Kokkada: ತೋಟದಲ್ಲಿ ಕಟ್ಟಿದ್ದ ದನ ಕಳವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.