ಡಿವಿ, ಶೋಭಾ ಸಹಿತ ಕರಾವಳಿಯ ನಾಲ್ವರಿಗೆ ಸಚಿವ ಸ್ಥಾನ ಸಾಧ್ಯತೆ?
Team Udayavani, May 25, 2019, 6:00 AM IST
ಉಡುಪಿ: ಬಿಜೆಪಿ ಕೇಂದ್ರದಲ್ಲಿ ಸರಕಾರ ರಚಿಸುವ ಕಾರ್ಯ ಆರಂಭಿಸಿದ್ದು, ರಾಜ್ಯದಿಂದ ನಾಲ್ವರಿಗೆ ಸಚಿವ ಸ್ಥಾನ ಸಿಗುವ ಸಾಧ್ಯತೆ ಇದೆ. ಇದರಲ್ಲಿ ಎರಡು ಸಹಾಯಕ ದರ್ಜೆ ಮತ್ತು ಎರಡು ಸಂಪುಟ ದರ್ಜೆ ಸ್ಥಾನ ದೊರಕಬಹುದು ಎನ್ನಲಾಗುತ್ತಿದೆ.
ಶೋಭಾ ಕರಂದ್ಲಾಜೆ ಹೆಸರು ಸಚಿವ ಹುದ್ದೆಗೆ ಕೇಳಿಬರುತ್ತಿದೆ. ದ. ಭಾರತದಿಂದ ಆಯ್ಕೆಯಾದ ಮಹಿಳಾ ಸದಸ್ಯೆ ಇವರೊಬ್ಬರೇ. ನಿರ್ಮಲಾ ಸೀತಾರಾಮನ್ ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದರೂ ಲೋಕ ಸಭೆಗೆ ಆಯ್ಕೆಯಾದ ಮಹಿಳಾ ಸದಸ್ಯರಿಲ್ಲ. ಮಂಡ್ಯದಲ್ಲಿ ಸುಮಲತಾಗೆ ಬಿಜೆಪಿ ಬೆಂಬಲ ಕೊಟ್ಟಿತ್ತೇ ವಿನಾ ಅಧಿಕೃತ ಅಭ್ಯರ್ಥಿ ಅಲ್ಲ. ಹೀಗಾಗಿ ಶೋಭಾಗೆ ಪದವಿ ಸಿಗುವ ಸಾಧ್ಯತೆಗಳಿವೆ. ಎಲ್ಲ ಸಂಸದರನ್ನು ಶನಿವಾರ ದಿಲ್ಲಿಗೆ ಬರಲು ತಿಳಿಸಿದ್ದು, ಶೋಭಾ ಕೂಡ ತೆರಳಲಿದ್ದಾರೆ. ಹೀಗಾಗಿ ಅವರ ವಿಜಯೋತ್ಸವ ಕಾರ್ಯಕ್ರಮಗಳನ್ನು ರದ್ದುಪಡಿಸಲಾಗಿದೆ.
ಸದಾನಂದ ಗೌಡ (ಬೆಂಗಳೂರು ಉತ್ತರ), ಸುರೇಶ ಅಂಗಡಿ (ಬೆಳಗಾವಿ), ರಮೇಶ ಜಿಗಜಿಣಗಿ (ವಿಜಯಪುರ), ಪ್ರಹ್ಲಾದ ಜೋಷಿ (ಧಾರವಾಡ), ಬಿ.ವೈ. ರಾಘವೇಂದ್ರ (ಶಿವಮೊಗ್ಗ), ಡಾ| ಉಮೇಶ ಜಾಧವ (ಕಲಬುರಗಿ) ಹೆಸರುಗಳೂ ಕೇಳಿಬರುತ್ತಿವೆ. ಡಿವಿ ಅಥವಾ ಶೋಭಾರನ್ನು ಒಕ್ಕಲಿಗರ ಕೋಟದಲ್ಲಿ, ಅಂಗಡಿ ಅಥವಾ ರಾಘವೇಂದ್ರ ಅವರನ್ನು ಲಿಂಗಾಯತರ ಕೋಟದಲ್ಲಿ, ಜಿಗಜಿಣಗಿ ಅಥವಾ ಡಾ| ಉಮೇಶ ಜಾಧವ ಅವರನ್ನು ಪರಿಶಿಷ್ಟರ ಕೋಟಾದಡಿ ಸೇರಿಸಿಕೊಳ್ಳಬಹುದು. ಅನಂತ ಕುಮಾರ ಹೆಗಡೆ ರಾಜ್ಯದಲ್ಲಿಯೇ ಅತ್ಯಧಿಕ ಮತಗಳ ಅಂತರದಿಂದ ಗೆದ್ದಿರುವುದರಿಂದ, ಹಿಂದಿನ ಬಾರಿ ಸಚಿವ ರಾಗಿದ್ದ ಕಾರಣ ಇವರೂ ಮಂತ್ರಿಯಾಗಬಹುದು.
ರಾಜ್ಯದಲ್ಲಿ ಬಿಜೆಪಿ ಸರಕಾರ ರಚನೆಯಾಗಿ ಯಡಿಯೂರಪ್ಪ ಸಿಎಂ ಆದರೆ ರಾಘವೇಂದ್ರರಿಗೆ ಕೇಂದ್ರ ಸಚಿವಗಿರಿ ಸಿಗದಿರುವ ಸಾಧ್ಯತೆಯೂ ಇದೆ. ಇವರಲ್ಲಿ ಅಥವಾ ದ.ಕ. ಸಂಸದ ನಳಿನ್ ಸಹಿತ ಬೇರೆ ಯಾರಿಗಾದರೂ ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನ ಸಿಗಲೂಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ
MUST WATCH
ಹೊಸ ಸೇರ್ಪಡೆ
Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ
Delhi Police: ಮಾರುತಿ ಸ್ವಿಫ್ಟ್ ಕಾರಿನಲ್ಲಿ 30ಕ್ಕೂ ಅಧಿಕ ಕುರಿ, ಮೇಕೆ ಸಾಗಾಟ!
BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ
Kannada Cinema; ಬ್ಯಾಡ್ ಬಾಯ್ಸ್ ಬಂದ್ರು..! ವಿದ್ಯಾರ್ಥಿ ವಿದ್ಯಾರ್ಥಿನಿಯರ ಹಾಡಿದು…
Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ