ಮತ್ತೆ ಬಾಯ್ದೆರೆದು ಗುಂಡಿ; ರಾ. ಹೆ.ಯಲ್ಲಿ ಸಂಚಾರ- ಅಪಾಯದಲ್ಲಿ ಸವಾರ
Team Udayavani, Aug 7, 2022, 1:28 PM IST
ಕಟಪಾಡಿ: ಕಟಪಾಡಿಯಿಂದ ಉಡುಪಿಯತ್ತ ತೆರಳುವ ಪಶ್ಚಿಮ ಪಾರ್ಶ್ವದ ಇಳಿಜಾರು ಪ್ರದೇಶದ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೃಹದಾಕಾರದ ಗುಂಡಿಯು ಮತ್ತೆ ಬಾಯ್ದೆರೆದು ನಿಂತಿದೆ.
ಗುಂಡಿ ಬಳಿ ಬ್ಯಾರಿಕೇಡ್, ಸಹಿತ ಇತರೆ ತಡೆಗಳನ್ನು ಇರಿಸಲಾಗಿದ್ದರೂ ಜೋರಾಗಿ ಮಳೆ ಬರುವ ಸಂದರ್ಭ ರಸ್ತೆಯೇ ಕಾಣುವು ದಿಲ್ಲ. ಮಳೆ ಬಂದಾಗ ನೀರು ತುಂಬಿದ ಗುಂಡಿಯು ಗಮನಕ್ಕೆ ಬಾರದೆ ವಾಹನಗಳು ಇದರ ಮೇಲೆ ಹಾದು ಜಖಂಗೊಳ್ಳುತ್ತಿದೆ. ಕತ್ತಲಾದ ಬಳಿಕ ದ್ವಿಚಕ್ರ, ಲಘು ವಾಹನ ಸವಾರರಿಗೆ ಸಂಚಾರವು ಬಲು ಅಪಾಯಕಾರಿಯಾಗಿದೆ. ವಾಹನ ಚಾಲಕರೂ ಎಚ್ಚರಿಕೆಯಿಂದ ವಾಹನ ಚಲಾಯಿಸಬೇಕಿದೆ.
ಕಳೆದ ತಿಂಗಳಲ್ಲಿ ಉದಯವಾಣಿಯು ಇದೇ ಗುಂಡಿಯ ಬಗ್ಗೆ ವರದಿ ಬಿತ್ತರಿಸಿದ್ದು, ಎಚ್ಚೆತ್ತ ಹೆದ್ದಾರಿ ಇಲಾಖೆಯು ತೇಪೆ ಕಾರ್ಯ ನಡೆಸಿತ್ತು. ಮತ್ತೆ ಇದೇ ಸ್ಥಳದಲ್ಲಿ ಅತ್ಯಂತ ಅಪಾಯಕಾರಿ ಮಟ್ಟದ ಗುಂಡಿಯು ಕಂಡು ಬರುತ್ತಿದ್ದು, ತೀವ್ರತರವಾದ ಅವಘಡ ಸಂಭವಿಸುವ ಮುನ್ನವೇ ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳು ಕೂಡಲೇ ಎಚ್ಚೆತ್ತು ಸಮರೋಪಾದಿಯಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸೃಷ್ಟಿಯಾಗಿರುವ ಸಮಸ್ಯೆಗಳನ್ನು ಸರಿಪಡಿಸಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸುವಂತೆ ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.
ಪ್ರಾಣಾಪಾಯ ಕಟ್ಟಿಟ್ಟ ಬುತ್ತಿ: ಹೆದ್ದಾರಿ ನಡುವೆ ಕಂಡು ಬರುವ ಕಂದಕವು ಅಪಾಯಕಾರಿ. ಕೆರೆಯಂತಾಗಿರುವ ಈ ಗುಂಡಿಯ ಭಾಗದಲ್ಲಿ ಸಂಚರಿಸುವಾಗ ಸ್ವಲ್ಪ ಏಮಾರಿದರೂ ಪ್ರಾಣಾಪಾಯ ಕಟ್ಟಿಟ್ಟ ಬುತ್ತಿ. ಮಳೆಯ ನೆಪವೊಡ್ಡದೆ ಹೆದ್ದಾರಿ ಸಂಚಾರಕ್ಕೆ ಸುರಕ್ಷತೆಯನ್ನು ಕಲ್ಪಿಸ ಬೇಕಿದೆ. – ಸಂತೋಷ್ ಪೂಜಾರಿ, ಬೈಕ್ ಸವಾರ, ಫಾರೆಸ್ಟ್ ಗೇಟ್, ಕಟಪಾಡಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Rajveer Diler: ಹೃದಯಾಘಾತದಿಂದ ಬಿಜೆಪಿ ಸಂಸದ ರಾಜ್ವೀರ್ ದಿಲೇರ್ ನಿಧನ
Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್
OTT Release: ವಿಜಯ್ ದೇವರಕೊಂಡ ʼಫ್ಯಾಮಿಲಿ ಸ್ಟಾರ್ʼ ಓಟಿಟಿ ರಿಲೀಸ್ಗೆ ಡೇಟ್ ಫಿಕ್ಸ್