ಕೃಷ್ಣನಗರಿಯಲ್ಲಿ ಕೇದಗೆ ಕಂಪು
Team Udayavani, Aug 23, 2019, 4:47 PM IST
ಉಡುಪಿ: ಎಲ್ಲೆಡೆ ಹಬ್ಬದ ಸಂಭ್ರಮ ಮನೆ ಮಾಡಿದೆ. ಅಲ್ಲಲ್ಲಿ ವ್ಯಾಪಾರಿಗಳ ದಂಡು. ಮಳೆಯ ನಡುವೆಯು ಬಿರುಸಿನಿಂದ ವ್ಯಾಪಾರ. ಗೋಪಿಕಾ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಹಾಸನ, ಕೊಪ್ಪಳ ಹೀಗೆ ನಾನಾ ಕಡೆಗಳಿಂದ ಬಂದು ವ್ಯಾಪಾರ ನಡೆಸುತ್ತಿದ್ದಾರೆ. ಬಣ್ಣ ಬಣ್ಣದ ಹೂವಿನ ರಾಶಿ ನೋಡುವುದೇ ಒಂದು ಹಬ್ಬ. ಸೇವಂತಿಗೆ, ಜಾಜಿ, ಕೇದಗೆ, ಸಂಪಿಗೆ,ಮಲ್ಲಿಗೆಯ ಘಮ ರಥಬೀದಿಯ ಸುತ್ತ ಹಬ್ಬಿದ್ದು ಭಕ್ತ ವರ್ಗದ ಉಲ್ಲಾಸ ಹೆಚ್ಚಿಸಿದೆ.
ಕಣ್ಮನ ಸೆಳೆಯುವ ಕೇದಗೆ
ಹೂಗಳ ಸಂತೆಯಲ್ಲಿ ಎಲ್ಲಾ ಹೂಗಳ ಒಂದು ಆಕರ್ಷಣೆಯಾದರೆ ಕೇದಗೆ ಹೂವಿನದ್ದೇ ಒಂದು ಆಕರ್ಷಣೆ. ಉದ್ದದ ಎಲೆಯ ಮಧ್ಯೆ ಹಳದಿ ಬಣ್ಣದ ಪತ್ರಗಳ ಆಕಾರದ ಹೂವಿನ ಸೌಂದರ್ಯ ಕಣ್ಮನ ಸೆಳೆಯುವಂತದ್ದು. ಅತ್ಯಂತ ವಿರಳ ಮತ್ತು ಸುವಾಸನೆಯುಕ್ತ ಹೂ.
ಜೌಗು ಪ್ರದೇಶದಲ್ಲಿ ಗುಂಪಾಗಿ ಗಿಡದಲ್ಲಿ ಬೆಳೆಯುವ ಕೇದಗೆ ಹೂವಿಗೆ ಹಬ್ಬದ ದಿನಗಳಲ್ಲಿ ಬಹು ಬೇಡಿಕೆ. ಈ ಸಮಯದಲ್ಲಿ ಒಂದು ಹೂವಿನ ಬೆಲೆ ಬೆಲೆ 100 ರಿಂದ 150 ರ ವರೆಗೆ ಇದೆ.
ಶ್ರೀಲೋಲ ಕೃಷ್ಣನಿಗೆ ಈ ಹೂವು ಪ್ರಿಯ ಪುಷ್ಪಗಳಲ್ಲಿ ಒಂದು ಹಾಗಾಗಿಯೇ ಇದನ್ನು ಕೃಷ್ಣ ಪ್ರಿಯ ಪುಷ್ಪ ಎನ್ನುತ್ತಾರೆ.
ವಿಜಿತ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು
Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ
Malpe Beach: ಈಜಲು ಹೋದ ಮೂವರು ಸಮುದ್ರಪಾಲು; ಓರ್ವನ ಸಾವು, ಇಬ್ಬರ ರಕ್ಷಣೆ
ಕೋತಲಕಟ್ಟೆ: ಹೆದ್ದಾರಿ ಬಳಿ ನಿಲ್ಲಿಸಿದ್ದ ಸ್ಕೂಟಿ ಕಳವು
Thekkatte ಶ್ರೀರಾಮ ಭಜನಾ ಮಂದಿರದಲ್ಲಿ ರಾಮನವಮಿ: ರಾವಣ ದಹನ ಮತ್ತು ಓಕುಳಿ ಉತ್ಸವ ಸಂಪನ್ನ