ನಿವೃತ್ತರನ್ನು ಸರಕಾರಿ ವಾಹನದಲ್ಲೇ ಮನೆಗೆ ಬಿಟ್ಟು ಶುಭ ವಿದಾಯ
Team Udayavani, Sep 23, 2020, 6:18 AM IST
ನಿವೃತ್ತ ಶಿಕ್ಷಕರನ್ನು ಶಿಕ್ಷಣ ಇಲಾಖೆ ಜೀಪಿನಲ್ಲಿ ಬಿಇಒ ಶಶಿಧರ್ ಮನೆಗೆ ಕರೆದೊಯ್ದರು.
ಕಾರ್ಕಳ: ವೃತ್ತಿಗೆ ವಿದಾಯ ಹೇಳುವ ಹೊತ್ತು ಪ್ರತಿಯೊಬ್ಬರ ಬದುಕಿನಲ್ಲೂ ಮಹತ್ವದ್ದು. ಇದನ್ನು ಅತ್ಯಂತ ಸ್ಮರಣೀಯವನ್ನಾಗಿಸುವ ವಿನೂತನ ಪ್ರಯತ್ನವೊಂದು ಕಾರ್ಕಳ ಶಿಕ್ಷಣ ಇಲಾಖೆ ಯಲ್ಲಿ ಆರಂಭಗೊಂಡಿದೆ. ದೀರ್ಘಾವಧಿ ಸೇವೆ ಸಲ್ಲಿಸಿದ ಶಿಕ್ಷಕರು ಮತ್ತು ಬೋಧಕೇತರ ನೌಕರರನ್ನು ನಿವೃತ್ತ ರಾಗುವ ತಿಂಗಳಾಂತ್ಯಕ್ಕೆ ಇಲಾಖೆ ಕಚೇರಿಗೆ ಕರೆಯಿಸಿ, ಗೌರವಿಸಿ ಅವರನ್ನು ಇಲಾಖೆ ವಾಹನದಲ್ಲಿ ಅಧಿಕಾರಿಗಳೇ ಅವರ ಮನೆಗೆ ಬಿಟ್ಟು ಬರುವ “ಗುರುಭ್ಯೋ ನಮ:’ ಕಾರ್ಯ ಕ್ರಮಕ್ಕೆ ಸೆಪ್ಟಂಬರ್ನಿಂದ ಚಾಲನೆ ಸಿಕ್ಕಿದೆ.
ಸ್ವರ್ಣ ಕಾರ್ಕಳ ಅಭಿಯಾನದ ಭಾಗ
ಕಾರ್ಕಳ ನೂರನೇ ವರ್ಷದ ಸಂಭ್ರಮ ದಲ್ಲಿದೆ. ಸ್ವರ್ಣ ಕಾರ್ಕಳದಡಿ ಹಲವು ವಿಶೇಷ ಕಾರ್ಯಕ್ರಮಗಳು ನಡೆಯುತ್ತಿವೆ. ಶಿಕ್ಷಣ ಇಲಾಖೆಯೂ ಅಮೂಲ್ಯ ಸೇವೆ ಸಲ್ಲಿಸಿದವರನ್ನು ವಿಶಿಷ್ಟವಾಗಿ ಸ್ಮರಿಸಲು ಈ ಕಾರ್ಯಕ್ರಮ ಹಮ್ಮಿಕೊಂಡಿದೆ. ಶಿಕ್ಷಕ ದಿನದಂದು ಈ ಕಾರ್ಯಕ್ರಮದ ಬಗ್ಗೆ ಶಾಸಕರು ಘೋಷಿಸಿದ್ದು, ಕ್ಷೇತ್ರ ಶಿಕ್ಷಣಾಧಿಕಾರಿಗಳು ಮುತುವರ್ಜಿ ವಹಿಸಿದ್ದಾರೆ. ಸೆಪ್ಟಂಬರ್ನಲ್ಲಿ ಮೂವರು ನಿವೃತ್ತರಾಗುತ್ತಿದ್ದಾರೆ. ಮುಂದಿನ ದಿನಗಳಲ್ಲಿ ನಿರಂತರ ನಡೆಯಲಿದೆ.
ಸ್ಮರಣೀಯ ಕಾರ್ಯಕ್ರಮ
ಮಾಸಾಂತ್ಯದ ಕಾರ್ಯಕ್ರಮದಲ್ಲಿ ನಿವೃತ್ತಿ ಹೊಂದಿದವರನ್ನು ಪ್ರಮಾಣ ಪತ್ರದೊಂದಿಗೆ ಗೌರವಿಸಲಾಗುತ್ತದೆ. ಶಾಸಕರೂ ಭಾಗಿಯಾಗಲಿದ್ದಾರೆ. ಕಾರ್ಯಕ್ರಮ ಬಳಿಕ ಮನೆಗೆ ಕರೆದೊಯ್ದು ಬಿಡಲಾಗುತ್ತದೆ. ಹೆಚ್ಚು ಮಂದಿ ನಿವೃತ್ತರಾಗುವವರಿದ್ದರೆ ಅಂತಹ ಸಂದರ್ಭ ಇಲಾಖೆಯ ಅನುಷ್ಠಾನ ಅಧಿಕಾರಿ ಅಥವಾ ಇತರ ಅಧಿಕಾರಿಗಳು ಮನೆಗಳಿಗೆ ಬಿಟ್ಟು ಬರುವ ಕಾರ್ಯವನ್ನು ನಡೆಸುತ್ತಾರೆ. ಇದು ಸೇವೆ ಸಲ್ಲಿಸುತ್ತಿರುವವರಿಗೆ ಮತ್ತು ಸಲ್ಲಿಸಿದವರಿಗೆ ಖುಷಿ ತರುವ ವಿಚಾರ ಎನ್ನುತ್ತಾರೆ ನಿವೃತ್ತ ಶಿಕ್ಷಕರೊಬ್ಬರು.
ಕಾನೂನು ಇಲಾಖೆಯಲ್ಲಿ…
ದೇಶದ ಪ್ರತಿಷ್ಠಿತ ಕಾನೂನು ಇಲಾಖೆಯಲ್ಲೂ ನಿವೃತ್ತರನ್ನು ಮನೆಯವರೆಗೆ ಬಿಟ್ಟು ಗೌರವಯುತವಾಗಿ ಬೀಳ್ಕೊಡುವ ಸಂಪ್ರದಾಯವಿದೆ. ಶಿಕ್ಷಣ ಇಲಾಖೆಯಲ್ಲಿ ಇದೇ ಮೊದಲು.
ಸೀಟು ಬಿಟ್ಟು ಕೊಟ್ಟ ಬಿಇಒ!
ಆ. 31ರಂದು ನಿವೃತ್ತಿ ಹೊಂದಿದ ಶಿಕ್ಷಕ ಸುಬ್ರಹ್ಮಣ್ಯ ಆಚಾರ್ಯ ಅವರನ್ನು ಗೌರವಿಸಿ, ಇಲಾಖೆ ಜೀಪಿನಲ್ಲಿ ಮನೆಗೆ ಕರೆದೊಯ್ದ ಕಾರ್ಯಕ್ರಮ ನಡೆದಿತ್ತು. ಈ ವೇಳೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ವಾಹನದ ತನ್ನ ಮುಂದಿನ ಆಸನದ ಸೀಟಿನ ಬಾಗಿಲು ತೆರೆದು, ನಿವೃತ್ತ ಶಿಕ್ಷಕರನ್ನು ತಾನು ಕುಳಿತುಕೊಳ್ಳುವ ಆಸನದಲ್ಲಿ ಕುಳ್ಳಿರಿಸಿ ಅವರನ್ನು ಮನೆಗೆ ಕರೆದೊಯ್ದರು.
ಸೇವೆ ಸ್ಮರಿಸುವುದು ಉದ್ದೇಶ
ಶಿಕ್ಷಣ ಇಲಾಖೆಯಲ್ಲಿ ಆಯಾ ತಿಂಗಳಲ್ಲಿ ನಿವೃತ್ತರಾದವರನ್ನು ಈ ರೀತಿ ವಿನೂತನವಾಗಿ ಸರಳ ರೀತಿಯಲ್ಲಿ ಗೌರವಿಸಲಾಗುತ್ತದೆ. ಸುದೀರ್ಘ ಅವಧಿಯಲ್ಲಿ ಸೇವೆ ಸಲ್ಲಿಸುವವರಿಗೆ ಗೌರವ ಸಲ್ಲಿಸುವುದು ಮತ್ತು ಅವರ ಸೇವೆಯನ್ನು ಸ್ಮರಿಸುವ ವಿಧಾನವಾಗಿದೆ.ಶಾಸಕರ ಮಾರ್ಗದರ್ಶನದಲ್ಲಿ ಈ ಕಾರ್ಯಕ್ರಮ ಅನುಷ್ಠಾನವಾಗುತ್ತಿದೆ.
– ಶಶಿಧರ್ ಜಿ.ಎಸ್., ಕ್ಷೇತ್ರ ಶಿಕ್ಷಣಾಧಿಕಾರಿಗಳು ಕಾರ್ಕಳ
ಸಾರ್ಥಕ ಸೇವೆ
ಉದ್ಯೋಗಿಗಳನ್ನು ಗೌರವಿಸಿ ಇಲಾಖೆ ವಾಹನದಲ್ಲೇ ಬಿಟ್ಟು ಬರುವ ಈ ಕೆಲಸದಿಂದ ಮನಸ್ಸು ತುಂಬಿ ಬಂದಿದೆ. ಸಾರ್ಥಕ ಸೇವೆ ಎನಿಸಿದೆ. ಇದಕ್ಕಿಂತ ದೊಡ್ಡ ಗೌರವ ಬೇರೆ ಇಲ್ಲ.
-ಸುಬ್ರಹ್ಮಣ್ಯ ಆಚಾರ್ಯ, ನಿವೃತ್ತ ಶಿಕ್ಷಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election 2024 ಕೊಡುವವನ ಪಾತ್ರ ನಿರ್ವಹಿಸಲು ಮತದಾರ ಸಜ್ಜು
Udupi; ಎ. 24ರ ಬಳಿಕ ಹೊರಗಿನವರು ಕ್ಷೇತ್ರದಲ್ಲಿರುವಂತಿಲ್ಲ: ಜಿಲ್ಲಾಧಿಕಾರಿ
Kota Srinivas Poojary; ಮೀನುಗಾರರ ಸಮಸ್ಯೆ, ಬೇಡಿಕೆಗಳಿಗೆ ಧ್ವನಿಯಾಗುವೆ
Veerappa Moily; ದೇಶಕ್ಕೆ ಕ್ರಿಕೆಟ್ ಕಾಮೆಂಟ್ರಿಯನ್ ಬೇಕಿಲ್ಲ
Manipal; ಟ್ಯಾಪ್ಮಿ 38ನೇ ಘಟಿಕೋತ್ಸವ: 510 ಎಂಬಿಎ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ
MUST WATCH
ಹೊಸ ಸೇರ್ಪಡೆ
ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ
Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ
Editorial: ಗುಕೇಶ್ ಗೆಲುವು- ಭಾರತದ ಯುವಶಕ್ತಿಯ ಸಂಕೇತ
AMU: ಇತಿಹಾಸದಲ್ಲೇ ಮೊದಲು… ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿ ನೇಮಕ
Bengaluru: ಕದಂಬ ಹೋಟೆಲ್ ಸ್ಫೋಟ ಮಾಡುವುದಾಗಿ ಬೆದರಿಕೆ