ಬಹುತೇಕ ಹೊಟೇಲ್ ಇಂದಿನಿಂದ ಪುನರಾರಂಭ
ಹೊಟೇಲ್ ಆರಂಭಕ್ಕೆ ಭರದ ಸಿದ್ಧತೆ
Team Udayavani, Jun 8, 2020, 5:45 AM IST
ಉಡುಪಿ: ಕೋವಿಡ್-19 ಭೀತಿಯ ಮುಂಜಾಗ್ರತ ಕ್ರಮ ಅನುಸರಿಸಿಕೊಂಡು ಜೂ. 8ರಿಂದ ಜಿಲ್ಲೆಯಲ್ಲಿ ಹೊಟೇಲ್ಗಳು ಬಾಗಿಲು ತೆರೆದುಕೊಳ್ಳಲಿದ್ದು, ಗ್ರಾಹಕರಿಗೆ ಸವಿರುಚಿಯಾದ ತಿನಿಸುಗಳನ್ನು ಉಣಬಡಿಸಲಿವೆ.
ನಗರದೊಳಗಿನ ಬಹುತೇಕ ಹೊಟೇಲ್ಗಳು ಸೋಮವಾರ ಪ್ರಾರಂಭವಾಗುವ ಸಾಧ್ಯತೆಗಳಿದ್ದು, ಕೆಲವೊಂದು ಹೊಟೇಲ್ಗಳು ಮಾತ್ರ ಸ್ವಲ್ಪ ವಿಳಂಬವಾಗಿ ಬಾಗಿಲು ತೆರೆದುಕೊಳ್ಳಲಿವೆ. ಇದಕ್ಕಾಗಿ ಅಂತಿಮ ಹಂತದ ಭರದ ಸಿದ್ಧತೆ ಹೊಟೇಲ್ಗಳಲ್ಲಿ ರವಿವಾರ ನಡೆಯಿತು.
ರಾಜ್ಯ ಸರಕಾರ ಜೂ.8ರಿಂದ ರಾಜ್ಯಾದ್ಯಂತ ಹೊಟೇಲ್ಗಳನ್ನು ತೆರೆಯಲು ಅನುಮತಿ ನೀಡಿದೆ. ಈ ಹಿನ್ನೆಲೆಯಲ್ಲಿ ನಗರದಲ್ಲೂ ಹೊಟೇಲ್ಗಳು ಬಾಗಿಲು ತೆರೆಯಲು ಹೊಟೇಲ್ಗಳನ್ನು ಸ್ವತ್ಛಗೊಳಿಸಿ ಸಿದ್ಧಪಡಿಸುವ ಪೂರ್ವ ತಯಾರಿಗಳು ನಡೆದವು.
ಸುದೀರ್ಘ ಸಮಯದ ಬಳಿಕ ಆರಂಭ
ಕೋವಿಡ್-19 ವೈರಸ್ ಸೋಂಕಿನಿಂದ ಕಳೆದ ಸುದೀರ್ಘ ಅವಧಿಯಿಂದ ಹೊಟೇಲ್ಗಳು ಬಂದ್ ಆಗಿದ್ದವು. ವ್ಯಾಪಾರ ವಹಿವಾಟು ಸ್ಥಗಿತಗೊಂಡಿತ್ತು. ಲಾಕ್ಡೌನ್ ಸಡಿಲಿಕೆ ಹಲವು ಹಂತಗಳಲ್ಲಿ ಆಗಿದ್ದರೂ ಹೊಟೇಲ್ಗಳ ತೆರವಿಗೆ ಅವಕಾಶಸಿಕ್ಕಿರಲಿಲ್ಲ. ವೈರಸ್ ಹರಡುವ ಮುಂಜಾಗೃತ ಕ್ರಮವಾಗಿ ಹೊಟೇಲ್ಗಳನ್ನು ಪ್ರಾರಂಭ ಮಾಡುವುದಕ್ಕೆ ಅನುಮತಿ ನೀಡಿರಲಿಲ್ಲ. ಸುದೀರ್ಘ ಅವಧಿ ಬಂದ್ ಆಗಿದ್ದರಿಂದ ಉದ್ಯಮಿಗಳು, ಸಣ್ಣ ಪುಟ್ಟ ಹೊಟೇಲ್ ವ್ಯಾಪಾರಸ್ಥರು ಅಪಾರ ನಷ್ಟಕ್ಕೆ ಒಳಗಾಗಿ ದ್ದರು. ಕೆಲವೊಂದು ಹೊಟೇಲ್ಗಳಲ್ಲಿ ಮಾತ್ರ ಪಾರ್ಸೆಲ್ ಆಹಾರ ನೀಡಲಾಗುತ್ತಿತ್ತು.
ಕೆಲಸಕ್ಕೆ ಕಾರ್ಮಿಕರು ದೊರೆತರೂ ಹೊಟೇಲ್ಗಳಿಗೆ ಗ್ರಾಹಕರು ಬಾರದೆ ಇದ್ದಲ್ಲಿ, ಅವರಿಗೆ ಸಂಬಳ ಕೊಡುವು
ದಕ್ಕೆ ಕಷ್ಟವಾದೀತು. ಹೀಗಾಗಿ ಮುಂದಿನ ದಿನಗಳಲ್ಲಿ ವ್ಯಾಪಾರ ಹೇಗಿದೆ ಎಂಬು ದನ್ನು ನೋಡಿಕೊಂಡು ಕಾರ್ಮಿಕರನ್ನು ಕೆಲಸಕ್ಕೆ ತೆಗೆದುಕೊಳ್ಳಲಾಗುವುದು. ಸದ್ಯದ ಸ್ಥಿತಿಯಲ್ಲಿ ನಾವೇ ನಿಭಾಯಿಸು ತ್ತೇವೆ ಎಂದು ನಗರದ ಸಣ್ಣ ಹೊಟೇಲ್ನ ಮಾಲಕ ಆನಂದ ಅವರು ಹೇಳಿದರು.
ಕಾರ್ಮಿಕರ, ಅಡುಗೆಯವರ ಕೊರತೆ ಸಾಧ್ಯತೆ
ಅನುಮತಿ ಸಿಕ್ಕಿದರೂ ಹೊಟೇಲ್ ಆರಂಭಕ್ಕೆ ಕಾರ್ಮಿಕರ ಕೊರತೆ ಕೂಡ ಎದುರಾಗಿದೆ. ನಗರದ ವಿವಿಧ ಹೊಟೇಲ್ಗಳಲ್ಲಿ ಅನ್ಯ ರಾಜ್ಯ ಹಾಗೂ ಜಿಲ್ಲೆಗಳ ಕಾರ್ಮಿಕರು ಕೆಲಸಕ್ಕಿದ್ದರು. ಅವರೆಲ್ಲರೂ ತಮ್ಮ ಊರುಗಳಿಗೆ ತೆರಳಿದ್ದು. ಈಗ ಹೊಟೇಲ್ ಆರಂಭಿಸುವುದಕ್ಕೆ ಕಾರ್ಮಿಕರ, ಅಡುಗೆಯವರ ಸಮಸ್ಯೆ ಉಂಟಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ
MUST WATCH
ಹೊಸ ಸೇರ್ಪಡೆ
Sumalatha Ambareesh: ಟ್ವೀಟ್ನಲ್ಲಿ ಸಂಸದೆ ಸುಮಲತಾ ಅಂಬರೀಶ್ ವಿವೇಕದ ಪಾಠ
B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್ವೈ ಗರಂ
Shimoga: ಈಶ್ವರಪ್ಪ ಪರ ಪ್ರಚಾರ ನಡೆಸಿದ್ದ ಮಹಿಳೆ ಮೇಲೆ ಹಲ್ಲೆ- ದೂರು
Bramavara: “ನನ್ನನ್ನು ಕ್ಷಮಿಸಿ’ ಎಂದು ಹೇಳಿ ನಾಪತ್ತೆ
Bird flu: ಕೇರಳದಲ್ಲಿ ಹಕ್ಕಿಜ್ವರ ಭೀತಿ; ಚೆಕ್ಪೋಸ್ಟ್ಗಳಲ್ಲಿ ತಪಾಸಣೆ