ನನ್ನ ಸಂಗೀತ ಕಲೆಗೆ ಮನೆಯವರಿಂದಲೇ ಪ್ರೋತ್ಸಾಹ: ಕಲಾವತಿ ದಯಾನಂದ್
ನಮ್ಮ ಕಲೆಯನ್ನು ಗುರುತಿಸಿ ಪ್ರೋತ್ಸಾಹಿಸಿದ್ದರು ಎಂದು ತಮ್ಮ ಮನದಾಳದ ಮಾತನ್ನು ಬಿಚ್ಚಿಟ್ಟಿದ್ದಾರೆ.
Team Udayavani, Apr 12, 2021, 7:09 PM IST
ಮಣಿಪಾಲ: ಭಜನಾ ಕಾರ್ಯಕ್ರಮದ ಮೂಲಕ ಸಂಗೀತದಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದ ನನಗೆ ನನ್ನ ಕನಸಿಗೆ ನೀರೆರೆದು ಪೋಷಿಸಿದವರು ಮನೆಯವರು. ನಾನು ಇಂದು ಎಲ್ಲರಿಂದಲೂ ಗುರುತಿಸಲ್ಪಡಲು ಕಾರಣರಾಗಿದ್ದು ಮನೆಯವರ ಪ್ರೋತ್ಸಾಹದಿಂದ ಎಂದು ಗಾನ ಕೋಗಿಲೆ ರಿಯಾಲಿಟಿ ಶೋ ಮೂಲಕ ಜನಪ್ರಿಯರಾಗಿದ್ದ ಕಲಾವತಿ ದಯಾನಂದ್ ಹೇಳಿದರು.
ಗಾನ ಕೋಗಿಲೆ, ಗಾನ ಮಲ್ಲಿಗೆ ಹೀಗೆ ಹಲವು ಬಿರುದುಗಳನ್ನು ಪಡೆದಿರುವ ಉಡುಪಿಯ ಕಲಾವತಿ ದಯಾನಂದ್ ಪುತ್ರನ್ ಸೋಮವಾರ ಉದಯವಾಣಿ ಕಚೇರಿಗೆ ಭೇಟಿ ನೀಡಿ, ತಮ್ಮ ಸಂಗೀತ ಕ್ಷೇತ್ರದ ಪಯಣದ ಕುರಿತ ಅನುಭವವನ್ನು ಉದಯವಾಣಿ ಡಾಟ್ ಕಾಮ್ ನ “ತೆರೆದಿದೆ ಮನೆ ಬಾ ಅತಿಥಿ” ಫೇಸ್ ಬುಕ್ ಲೈವ್ ಕಾರ್ಯಕ್ರಮದಲ್ಲಿ ಹಂಚಿಕೊಂಡರು.
ಫೇಸ್ ಬುಕ್ ಲೈವ್ ನಲ್ಲಿ ಕಾಣದ ಕಡಲಿಗೆ ಹಂಬಲಿಸಿದ ಮನ, ಕುರುಡು ನಾಯಿ ಸಂತೆಗೆ ಬಂದಂತೆ, ಸೋರುತಿಹುದು ಮನೆಯ ಮಾಳಿಗೆ ಹಾಡನ್ನು ಹಾಡಿದರು.
ಕರಾವಳಿ ಜನ ನನ್ನ ಗುರುತಿಸಿ ಸಂಗೀತದ ಬೇರನ್ನು ಗಟ್ಟಿಗೊಳಿಸಿದ್ದರು. ಗಾನ ಕೋಗಿಲೆ ರಿಯಾಲಿಟಿ ಶೋನಲ್ಲಿ ಜನಪ್ರಿಯಳಾದ ಮೇಲೆ ನನಗೆ ಉತ್ತರ ಕರ್ನಾಟಕದ ಜನರು ಹೆಚ್ಚು ಪ್ರೀತಿ ತೋರಿಸಿ, ನಮ್ಮ ಕಲೆಯನ್ನು ಗುರುತಿಸಿ ಪ್ರೋತ್ಸಾಹಿಸಿದ್ದರು ಎಂದು ತಮ್ಮ ಮನದಾಳದ ಮಾತನ್ನು ಬಿಚ್ಚಿಟ್ಟಿದ್ದಾರೆ.
ಉದಯವಾಣಿ ಕಚೇರಿಗೆ ಆಗಮಿಸಿದ್ದ ಕಲಾವತಿ ದಯಾನಂದ್ ಅವರನ್ನು ಎಂಡಿಎನ್ ಎಲ್ ಮುಖ್ಯಸ್ಥ ಹರೀಶ್ ಭಟ್ ಅವರು ಹೂಗುಚ್ಛ ನೀಡಿ ಅಭಿನಂದಿಸಿದರು. ಈ ಸಂದರ್ಭದಲ್ಲಿ ಉದಯವಾಣಿ ಮಾರುಕಟ್ಟೆ ವಿಭಾಗದ ಮುಖ್ಯಸ್ಥ ರಾಮಚಂದ್ರ ಮಿಜಾರು, ಉದಯವಾಣಿ ಡಿಜಿಟಲ್ ನ ನಾಗೇಂದ್ರ ತ್ರಾಸಿ, ಅವಿನಾಶ್ ಕಾಮತ್ ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ