ಉಚಿತ ಕುಡಿಯುವ ನೀರು ಒದಗಿಸುವ ಗ್ರಾ.ಪಂ. ಸದಸ್ಯ
Team Udayavani, May 18, 2020, 5:13 AM IST
ಕಟಪಾಡಿ: ಲಾಕ್ಡೌನ್ ಹಿನ್ನೆಲೆಯಲ್ಲಿ ಉದ್ಯಮಗಳು ತತ್ತರಿಸಿದ್ದರೂ, ಉದ್ಯಮಿ ಕಟಪಾಡಿ ಗ್ರಾ.ಪಂ. ಸದಸ್ಯ ಅಬೂಬಕರ್ ಎ.ಅರ್. ಅವರು ಈ ರಮ್ಜಾನ್ ಮಾಸದಲ್ಲಿಯೂ ಬಸವಳಿಯದೆ ದಿನವೊಂದರ ಸುಮಾರು 7 ಸಾವಿರ ರೂ. ವ್ಯಯಿಸಿ ಸರಕಾರಿ ಗುಡ್ಡೆ ಕಾಲನಿಯ ನಿವಾಸಿಗಳಿಗೆ ನಿತ್ಯ ಕುಡಿಯುವ ನೀರನ್ನು ಸರಬರಾಜು ಮಾಡುವ ಮೂಲಕ ಮಾನವೀಯ ಸ್ಪಂದನೆಯನ್ನು ನೀಡುತ್ತಿದ್ದಾರೆ.
ಈ ಕಾಲನಿಯು 12 ಕ್ರಾಸ್ಗಳನ್ನು ಹೊಂದಿದ್ದು, ಬೇಸಗೆಯ ಕುಡಿಯುವ ನೀರಿನ ಬರವನ್ನು ನೀಗಿಸಲು ದಿನನಿತ್ಯ ಸುಮಾರು 28 ಸಾವಿರ ಲೀಟರ್ಗಳಷ್ಟು ಕುಡಿಯುವ ನೀರನ್ನು ವಾಹನದ ಮೂಲಕ ಮನೆ ಮನೆಗೆ ಸರಬರಾಜು ಮಾಡುವ ಈ ಪಂಚಾಯತ್ ಸದಸ್ಯ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಜನರ ಸೇವೆಯಲ್ಲಿ ನಿರತರಾಗಿದ್ದಾರೆ.
ಕಟಪಾಡಿ ಗ್ರಾ.ಪಂ. ವ್ಯಾಪ್ತಿಗೊಳಪಡುವ ಈ ಕಾಲನಿಯಲ್ಲಿ ಸುಮಾರು 300ರಷ್ಟು ಮನೆಗಳಿದ್ದು, ಇದ್ದ ಬಾವಿ, ನೀರಿನ ಆಶ್ರಯವು ಬತ್ತಿ ಹೋಗಿರುತ್ತದೆ. ಅಬೂಬಕರ್ ಅವರ ಮನೆಯ ಬಾವಿಯಲ್ಲಿ ಹೇರಳವಾಗಿ ಹೊಂದಿರುವ ನೀರು ಮತ್ತು ಕಡಿಮೆಯಾದಲ್ಲಿ ತಮ್ಮದೇ ಇತರ ಬಾವಿಗಳ ನೀರನ್ನು 8 ಸಾವಿರ ಲೀಟರ್ ಸಾಮರ್ಥ್ಯದ ಟ್ಯಾಂಕ್ಗಳಿಗೆ ತುಂಬಿಸಿ ಸ್ವಂತ ಖರ್ಚಿನಲ್ಲಿಯೇ ಟೆಂಪೋದಲ್ಲಿ ಸರಬರಾಜು ಮಾಡಿ ಈ ಸರಕಾರಿ ಗುಡ್ಡೆಯ ಕಾಲನಿಯ ಬೇಡಿಕೆಯುಳ್ಳ ಮನೆಗಳಿಗೆ ಜಾತಿ-ಮತ, ಪಕ್ಷ, ಭೇದ ಮರೆತು ಕುಡಿಯುವ ನೀರನ್ನು ಸರಬರಾಜು ಮಾಡುತ್ತಿದ್ದಾರೆ. ದಿನವೊಂದರ 200ರಿಂದ 300 ಲೀಟರ್ಗೂ ಅಧಿಕ ನೀರನ್ನು ಪ್ರತೀ ಮನೆಗೂ ತಲುಪುವಂತೆ ನೋಡಿಕೊಳ್ಳುತ್ತಿದ್ದಾರೆ. ಉದ್ಯಮಿ ಅಬೂಬಕರ್ ಮನೆಮಂದಿಯ ಸಹಕಾರದೊಂದಿದೆ ಸರಬರಾಜು ಮಾಡುತ್ತಿದ್ದು, ಜನಸೇವೆಯಲ್ಲಿ ನಿರತರಾಗಿರುತ್ತಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ
Udupi; ಮಸ್ಟರಿಂಗ್ ಕೇಂದ್ರದಲ್ಲಿ ಸಕಲ ತಯಾರಿ
ಉಡುಪಿ-ಚಿಕ್ಕಮಗಳೂರು; ಕ್ಷೇತ್ರದಲ್ಲಿ ಆಗಬೇಕಿರುವ ಅಭಿವೃದ್ಧಿಯ ಸ್ಪಷ್ಟತೆಯಿದೆ: ಜೆ.ಪಿ.
ಉಡುಪಿ- ಚಿಕ್ಕಮಗಳೂರು: ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಅವಕಾಶಗಳು ಇವೆ: ಕೋಟ
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ