ರಾಮ ಮಂದಿರಕ್ಕೆ ದಿಲ್ಲಿಯಿಂದ ಹಳ್ಳಿ ವರೆಗಿನವರ ಸಹಕಾರ ಅಗತ್ಯ
Team Udayavani, Dec 21, 2020, 1:10 AM IST
ಕೊಡವೂರು ಪಾಳೆಕಟ್ಟೆಯ ದಲಿತರ ಮನೆಗಳಿಗೆ ಪೇಜಾವರ ಶ್ರೀಗಳು ಭೇಟಿ ನೀಡಿದ ಸಂದರ್ಭ.
ಉಡುಪಿ: ಎಲ್ಲರ ಸಹಕಾರದೊಂದಿಗೆ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಆಗುತ್ತಿದೆ. ನಾವು ದಿಲ್ಲಿಯ ನಾಯಕರಿಂದ ತೊಡಗಿ ಹಳ್ಳಿಯ ಜನಸಾಮಾನ್ಯರ ತನಕ ಎಲ್ಲರ ಸಹಕಾರ ಕೋರುತ್ತಿದ್ದೇವೆ ಎಂದು ಉಡುಪಿ ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಅವರು ತಿಳಿಸಿದರು.
ಕೊಡವೂರು ಪಾಳೆಕಟ್ಟೆಯ ಮೂಕಾಂಬಿಕಾ ಭಜನ ಮಂದಿರ, ಬಬ್ಬುಸ್ವಾಮಿ ದೈವಸ್ಥಾನಕ್ಕೆ ರವಿವಾರ ಭೇಟಿ ನೀಡಿ ಪೂಜೆ ಸಲ್ಲಿಸಿದ ಶ್ರೀಗಳು ಬಳಿಕ ದಲಿತರ ಮನೆಗಳಲ್ಲಿ ರಾಮಮಂದಿರ ಕುರಿತು ನಿಧಿ ಸಂಗ್ರಹ ಅಭಿಯಾನದಲ್ಲಿ ಸಾಂಕೇತಿಕವಾಗಿ ರಾಮದೀಪವನ್ನು ಬೆಳಗಿಸಿ ಮಾತನಾಡಿದರು.
ರಾಮ ಮಂತ್ರೋಪದೇಶ ನಿಧಿ ಸಂಗ್ರಹ, ರಾಮಮಂದಿರ ನಿರ್ಮಾಣವಾಗುವ ಜತೆಗೆ ರಾಮರಾಜ್ಯ ನಿರ್ಮಾಣವಾಗಬೇಕು. ದೇಶದ ಪುನರುತ್ಥಾನವಾಗಬೇಕು. ಇದಕ್ಕಾಗಿ ರಾಮನ ಸದ್ಗುಣಗಳನ್ನು ಮೈಗೂಡಿಸಿಕೊಳ್ಳಬೇಕು. ಹೀಗಾಗಬೇಕಾದರೆ ನಿತ್ಯ ರಾಮನ ಸ್ಮರಣೆ ಮಾಡಬೇಕು ಎಂದ ಸ್ವಾಮೀಜಿ “ಹರೇರಾಮ ಹರೇರಾಮ ರಾಮ ರಾಮ ಹರೇ ಹರೇ| ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ’ ಎಂಬ ಮಂತ್ರವನ್ನು ಉಪದೇಶಿಸಿದರು.
ಅಳಿಲಿನ ಸೇವೆ ರೀತಿ…
ರಾಮನು ಸೇತುವೆ ಕಟ್ಟುವಾಗ ಅಳಿಲು ಕೂಡ ಪರಿಪೂರ್ಣವಾಗಿ ಸೇವೆ ಸಲ್ಲಿಸಿದಂತೆ ನಾವೂ ಕೂಡ 10 ರೂ.ಗಳಿಂದ
ಹಿಡಿದು 10,000 ರೂ. ತನಕ ಯಥಾಶಕ್ತಿ ದೇಣಿಗೆ ನೀಡಬೇಕು. ಯಾರೋ ಒಬ್ಬರು ಧನಿಕರು ಮಂದಿರ ನಿರ್ಮಿಸಿದರೆ ರಾಮ ಮಂದಿರವಾಗುವುದಿಲ್ಲ. ರಾಮನಾದರೋ ಒಬ್ಬ ಪ್ರಭು. ಈಗ ಪ್ರಜೆಗಳೆಲ್ಲ ಪ್ರಭುಗಳು. ಎಲ್ಲ ಪ್ರಜೆಗಳ ಸಹಕಾರದಲ್ಲಿ ಮಂದಿರ ನಿರ್ಮಾಣವಾಗಬೇಕು ಎಂದರು.
ಜ. 15ರಿಂದ ನಿಧಿ ಸಂಗ್ರಹ ಅಭಿಯಾನ ನಡೆಯಲಿದ್ದು ವಿಹಿಂಪ ಕಾರ್ಯಕರ್ತರು ಬಂದಾಗ ಸಹಕರಿಸಬೇಕು ಎಂದರು.
ರವಿ ಕರ್ಕೇರ ಮತ್ತು ಸದಾನಂದರ ಮನೆಯಲ್ಲಿ ದೀಪ ಬೆಳಗಿಸಲಾಯಿತು. ನಗರಸಭಾ ಸದಸ್ಯ ವಿಜಯ ಕೊಡವೂರು, ವಿಹಿಂಪ ಜಿಲ್ಲಾಧ್ಯಕ್ಷ ವಿಷ್ಣುಮೂರ್ತಿ ಆಚಾರ್ಯ, ಸುಂದರ ಮೇಸ್ತ್ರಿ, ಜಯ ಸಾಲ್ಯಾನ್, ಮಾಧವ ಕರ್ಕೇರ, ಜೀವನ್ ಪಾಳೆಕಟ್ಟೆ, ವಾಸುದೇವ ಭಟ್ ಮೊದಲಾದವರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ
Malpe Beach: ಈಜಲು ಹೋದ ಮೂವರು ಸಮುದ್ರಪಾಲು; ಓರ್ವನ ಸಾವು, ಇಬ್ಬರ ರಕ್ಷಣೆ
ಕೋತಲಕಟ್ಟೆ: ಹೆದ್ದಾರಿ ಬಳಿ ನಿಲ್ಲಿಸಿದ್ದ ಸ್ಕೂಟಿ ಕಳವು
Thekkatte ಶ್ರೀರಾಮ ಭಜನಾ ಮಂದಿರದಲ್ಲಿ ರಾಮನವಮಿ: ರಾವಣ ದಹನ ಮತ್ತು ಓಕುಳಿ ಉತ್ಸವ ಸಂಪನ್ನ
Manipal ಕೌಶಲ ಅಭಿವೃದ್ಧಿ ಕೇಂದ್ರ -ಭುವನೇಂದ್ರ ಕಾಲೇಜು ಒಡಂಬಡಿಕೆ
MUST WATCH
ಹೊಸ ಸೇರ್ಪಡೆ
Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ
Srirangapatna: ಐಸ್ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ
Loksabha Election; ದೇಶದಲ್ಲಿ ಹಂತ-1: ಮತ ಇಂದು
Ls Polls: ಕಾಂಗ್ರೆಸ್ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್
Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು