ಕಾಪುವಿನಲ್ಲಿ ಅರಳಿ ನಿಂತ ರಾತ್ರಿಯಲ್ಲಿ ಅರಳುವ ವಿಸ್ಮಯ ಹೂವು “ಬ್ರಹ್ಮ ಕಮಲ”
Team Udayavani, Jun 10, 2020, 4:44 PM IST
ಕಾಪು: ಕಾಪು ಪುರಸಭೆ ವ್ಯಾಪ್ತಿಯ ಉಳಿಯಾರಗೋಳಿ ಗ್ರಾಮದ ಕಲ್ಯದ ಶೋಭಾ ಸುಧಾಕರ ಅಮೀನ್ ಎಂಬವರ ಮನೆಯಂಗಳದಲ್ಲಿ ಹತ್ತಾರು ಬ್ರಹ್ಮ ಕಮಲ ಪುಷ್ಪಗಳು ಅರಳಿ ನಿಂತಿದ್ದು ಸ್ಥಳೀಯ ನಿವಾಸಿಗಳಲ್ಲಿ ಕೌತುಕ ಮೂಡಿಸಿದೆ. ರಾತ್ರಿ ರಾಣಿಯರು ಎಂದೇ ಪ್ರಸಿದ್ಧವಾಗಿರುವ ಬ್ರಹ್ಮ ಕಮಲ ಪುಷ್ಪವು ರಾತ್ರಿಯ ವೇಳೆಯೇ ಅರಳಿ, ಬೆಳಗಾಗುವುದರೊಳಗೆ ಬಾಡಿ ಹೋಗುವ ಅಪರೂಪದ ಪುಷ್ಪವಾಗಿದೆ. ವರ್ಷಕೊಮ್ಮೆ, ಅದೂ ಕೂಡಾ ರಾತ್ರಿ ಸಮಯದಲ್ಲಿ ಮಾತ್ರಾ ಅರಳುವ ಹೂವುಗಳಲ್ಲಿ ಬ್ರಹ್ಮ ಕಮಲವೂ ಒಂದಾಗಿದೆ. ಹಿಂದೂ ಧರ್ಮದ ನಂಬಿಕೆಯ ಪ್ರಕಾರ ಇದನ್ನು ಬಿಳಿ ಕಮಲವೆಂದೂ ಕರೆಯಲಾಗುತ್ತದೆ. ಶೋಭಾ ಸುಧಾಕರ್ ಅವರ ಮನೆಯಂಗಳದಲ್ಲಿ ಮಂಗಳವಾರ ರಾತ್ರಿ ಬರೋಬ್ಬರಿ 15 ಬ್ರಹ್ಮ ಕಮಲ ಪುಷ್ಪಗಳು ಅರಳಿ ನಿಂತಿವೆ. ಈ ಹೂವುಗಳು ಹಂತಹಂತವಾಗಿ ಅರಳುವುದನ್ನು ವೀಕ್ಷಿಸುವುದೇ ಸೋಜಿಗವಾಗಿದ್ದು, ಇದನ್ನು ವೀಕ್ಷಿಸಿದ ಸ್ಥಳೀಯ ನಿವಾಸಿಗಳು ಸಂತಸದೊಂದಿಗೆ ಅಚ್ಚರಿಯನ್ನೂ ವ್ಯಕ್ತ ಪಡಿಸಿದ್ದಾರೆ.
ಬ್ರಹ್ಮಕಮಲದ ಗಿಡವು ವರ್ಷಕ್ಕೊಮ್ಮೆ ಬಿಡುವ ಹೂಗಳನ್ನು ನೋಡುವುದೇ ಸೊಬಗು. ಅರಳಿದ ಬ್ರಹ್ಮಕಮಲ ಹೂವುಗಳನ್ನು ನೋಡುವವರ ಮನವೂ ಅರಳುತ್ತದೆ. ಬ್ರಹ್ಮಕಮಲ ಹೂ ಅರಳುವುದನ್ನು ಕಾದು ತಮ್ಮ ಮನಸ್ಸಿನ ಇಂಗಿತವನ್ನು ಬೇಡಿಕೊಂಡರೆ ಅವರ ಆಸೆ ಈಡೇರುತ್ತದೆ ಎಂಬ ನಂಬಿಕೆಯೂ ಇದೆ. ಈ ಹೂವು ಅರಳುವ ಮನೆಯವರು ಸಂಪದ್ಭರಿತರಾಗಿರುತ್ತಾರೆ ಎಂಬ ಪ್ರತೀತಿಯೂ ಕೂಡ ಇದೆ. ಬ್ರಹ್ಮ ಕಮಲ ಹೂವಿನ ಗಿಡವನ್ನು ದೈವಿಕ ಭಾವನೆಯಿಂದ ಹಾಗೂ ಅಲಂಕಾರಿಕ ಗಿಡವಾಗಿಯೂ ಬೆಳೆಸಲಾಗುತ್ತದೆ.
ಹಿಮಾಲಯದಲ್ಲಿ ಹೆಚ್ಚು : ಉತ್ತರಖಾಂಡ ಮತ್ತು ಹಿಮಾಲಯಗಳಲ್ಲಿ ಹೆಚ್ಚಾಗಿ ಕಂಡು ಬರುವ ಈ ಹೂವು ನೆಲ ಮಟ್ಟದಿಂದ ಎತ್ತರದಲ್ಲಿ ಬೆಳೆಯುವ ಹೂವಾಗಿರುವುದರಿಂದ ಬ್ರಹ್ಮಕಮಲ ಎಂದು ಕರೆಯಲ್ಪಡುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು
Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ
Malpe Beach: ಈಜಲು ಹೋದ ಮೂವರು ಸಮುದ್ರಪಾಲು; ಓರ್ವನ ಸಾವು, ಇಬ್ಬರ ರಕ್ಷಣೆ
ಕೋತಲಕಟ್ಟೆ: ಹೆದ್ದಾರಿ ಬಳಿ ನಿಲ್ಲಿಸಿದ್ದ ಸ್ಕೂಟಿ ಕಳವು
Thekkatte ಶ್ರೀರಾಮ ಭಜನಾ ಮಂದಿರದಲ್ಲಿ ರಾಮನವಮಿ: ರಾವಣ ದಹನ ಮತ್ತು ಓಕುಳಿ ಉತ್ಸವ ಸಂಪನ್ನ
MUST WATCH
ಹೊಸ ಸೇರ್ಪಡೆ
Vijayapura; ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ : ಸಂಸದ ಜಿಗಜಿಣಗಿ
ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ
Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!
Kushtagi:ವಿದ್ಯುತ್ದೀಪದ ಕಂಬಗಳಿಗೆ ಬಲ್ಬ್ ಅಳವಡಿಸುವ ವೇಳೆ ಅವಘಡ; ಪುರಸಭೆ ಸಿಬ್ಬಂದಿಗೆ ಗಾಯ
Festivals: ಹಬ್ಬಗಳು ಮರೆಯಾಗುತ್ತಿವೆಯೇ?