ಶಿರ್ವ:ಬೈಕಿನಲ್ಲಿ ಬಂದ ಅಪರಿಚಿತರಿಂದ ಹಲ್ಲೆ, ದರೋಡೆ
Team Udayavani, Jan 12, 2018, 12:09 PM IST
ಶಿರ್ವ: ಬೈಕಿನಲ್ಲಿ ಬಂದ ಅಪರಿಚಿತ ವ್ಯಕ್ತಿಗಳು ಯುವಕ ನೋರ್ವನಿಗೆ ಹಲ್ಲೆ ನಡೆಸಿ ಪರ್ಸ್, ಮೊಬೈಲ್, ಎಟಿಎಂ ಕಾರ್ಡ್ ದೋಚಿದ ಘಟನೆ ಶಿರ್ವ ಬಳಿಯ ಕಳತ್ತೂರು ಶಾಂತಿಗುಡ್ಡೆ ಬಳಿ ಬುಧವಾರ ರಾತ್ರಿ ಸಂಭವಿಸಿದೆ.
ಸೊರ್ಪು ನಿವಾಸಿ ರಾಮ ಆಚಾರ್ಯ (36) ಹಲ್ಲೆಗೆ ಒಳಗಾದವರು.ರಾಮ ಆಚಾರ್ಯ ಅವರು ತನ್ನ ಮಾಲಕ ದಿನೇಶ್ ಆಚಾರ್ಯ ಅವರನ್ನು ಶಾಂತಿಗುಡ್ಡೆಯಲ್ಲಿ ಬಿಟ್ಟು ವಾಪಸ್ ಬರುವಾಗ ಶಾಂತಿಗುಡ್ಡೆ ಬಳಿ ಫೋನ್ ಕರೆ ಸ್ವೀಕರಿಸಲು ಬೈಕ್ ನಿಲ್ಲಿಸಿದ್ದರು. ಆಗ ಕಾಪು ಕಡೆಯಿಂದ ಬಂದ ಮೂವರು ಹೆಲ್ಮೆಟ್ಧಾರಿಗಳು ಹೆಲ್ಮೆಟ್ನಿಂದ ಹಲ್ಲೆ ನಡೆಸಿ ಸೊತ್ತುಗಳನ್ನು ದೋಚಿದ್ದಾರೆ.
ಹಲ್ಲೆಗೊಳಗಾದ ರಾಮ ಆಚಾರ್ಯ ಅವರು ಉಡುಪಿ ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ.ಮೊಬೈಲ್ನಲ್ಲಿದ್ದ ಎಟಿಎಂ ಪಿನ್ ನಂಬರ್ ನೋಡಿ ಮೂಡುಬೆಳ್ಳೆಯಲ್ಲಿ ಹಣ ಡ್ರಾ ಮಾಡಿದ್ದಾರೆಂದು ತಿಳಿದು ಬಂದಿದೆ. ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೆಲವು ದಿನಗಳಿಂದ ಶಿರ್ವ, ಬೆಳ್ಮಣ್ ಆಸುಪಾಸಿನಲ್ಲಿ ಮೂವರು ಆಗಂತುಕರು ಭಯದ ವಾತಾವರಣ ಸೃಷ್ಟಿಸಿದ್ದು, ಇದು ಕೂಡ ಅವರದ್ದೇ ಕೃತ್ಯವಾಗಿರಬಹುದು ಎಂಬ ಅನುಮಾನ ಸಾರ್ವಜನಿಕರದ್ದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ
Students Notes: ಸ್ಕ್ರೀನ್ ಶಾರ್ಟ್ಗಳೆಂದು ಪುಸ್ತಕವಾಗದಿರಲಿ
ತೆಲುಗಿನಲ್ಲಿ ಮಾಲಾಶ್ರೀ ಚಿತ್ರ; ಮಾರಕಾಸ್ತ್ರ ಈಗ ಮಾರಣಾಯುಧಂ
Devadurga: ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸಾವು
Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ