ಭಜನೆಯ ನಿನಾದಕೆ ನಂದಗೋಕುಲವಾಯಿತು ಶ್ರೀಕೃಷ್ಣ ನಗರಿ


Team Udayavani, Jan 18, 2018, 1:15 PM IST

18-35.jpg

ಉಡುಪಿ: ಉಡುಪಿಗೆ ಉಡುಪಿಯೇ ಎಚ್ಚರದಿಂದ ಇದ್ದು ವೈಭವದ ಪರ್ಯಾಯ ಮೆರವಣಿಗೆಯ ಸೊಬಗನ್ನು ಕಣ್ತುಂಬಿ ಕೊಂಡಿತು. ರಸ್ತೆಯ ಇಕ್ಕೆಲಗಳಲ್ಲಿ, ಬೃಹತ್‌ ಕಟ್ಟಡಗಳ ಮಾಳಿಗೆಗಳಲ್ಲಿ, ಕಾಂಪೌಂಡ್‌ ಗೋಡೆಗಳ ಮೇಲೆ ಕುಳಿತುಕೊಂಡು ಜನರು ಮೆರವಣಿಗೆ ವೀಕ್ಷಿಸಿದರು. ರಥಬೀದಿ ಸೇರಿ ದಂತೆ ಶ್ರೀಕೃಷ್ಣ ಮಠ ಪರಿಸರದಲ್ಲಿ ಈ ಬಾರಿ ಭಜನಾ ಕಾರ್ಯಕ್ರಮಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿತ್ತು. ಪರ್ಯಾಯ ಮೆರವಣಿಗೆ ಯಲ್ಲಿಯೂ 500ಕ್ಕೂ ಅಧಿಕ ಮಂದಿ ಭಜನ ಮಂಡಳಿಗಳ ಸದಸ್ಯರು ಪಾಲ್ಗೊಂಡಿದ್ದರು. 
ಜೋಡುಕಟ್ಟೆಯಿಂದ ಹೊರಟ ಶೋಭಾಯಾತ್ರೆಯು ಕೆ.ಎಂ. ಮಾರ್ಗ – ಕನಕದಾಸ ರಸ್ತೆಯ ಮೂಲಕ ರಥಬೀದಿಗೆ ಸಾಗಿತು. ವಿವಿಧ ಸ್ತಬ್ಧಚಿತ್ರಗಳು, ಕಲಾ ತಂಡಗಳನ್ನು ಒಳಗೊಂಡಿದ್ದು ಸಾಂಪ್ರ ದಾಯಿಕತೆಗೆ ಆದ್ಯತೆ ನೀಡಲಾಗಿತ್ತು.

ಶ್ರೀಗಳ ಸಂಕಲ್ಪದ ಪ್ರತಿಬಿಂಬ 
ಪರ್ಯಾಯ ಪೀಠವೇರುವ ಪಲಿಮಾರು ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು ತಮ್ಮ ಪರ್ಯಾಯ ಅವಧಿಯಲ್ಲಿ  ಪೂರೈಸಬೇಕೆಂದು ಸಂಕಲ್ಪಿಸಿರುವ ಶ್ರೀಕೃಷ್ಣನ ಗರ್ಭಗುಡಿಯ ಮೇಲ್ಛಾವಣಿಗೆ ಚಿನ್ನದ ಹೊದಿಕೆ, ನಿತ್ಯ ಲಕ್ಷ ತುಳಸಿ ಅರ್ಚನೆ, ಎರಡು ವರ್ಷ ಅಖಂಡ ಭಜನೆ ಮೊದಲಾದವುಗಳು ಮೆರವಣಿಗೆ ಯಲ್ಲಿ ಪ್ರತಿಬಿಂಬಿಸಿದವು. ಹಿಮಾಲಯ ಪರ್ವತ ಮತ್ತು ಗಂಗಾನದಿಯ ಹಿನ್ನೆಲೆಯೊಂದಿಗೆ ಹರಿದ್ವಾರದ ಬಡೇ ಹನುಮಾನ್‌ ಆಕರ್ಷಕ ವಿಗ್ರಹ ಹೋಲುವ ಮಾದರಿ, ವಿಷ್ಣು ಸಹಸ್ರ ನಾಮ ತಂಡದ ಸಹಿತವಾದ ಬೆಳ್ಳಿ ರಥ,  ಕುಂಜಾರುಗುರಿ ಬೆಟ್ಟದ ಹಿನ್ನೆಲೆಯೊಂದಿಗೆ ಆಚಾರ್ಯ ಮಧ್ವರ ಆಕರ್ಷಕ ಪ್ರತಿಮೆ ಮೊದಲಾದವು ಮೆರವಣಿಗೆಯ ಪ್ರಮುಖ ಸ್ತಬ್ಧಚಿತ್ರಗಳು.

ಕ್ರಮಾನುಸರಣಿಕೆ...
ಗರ್ನಾಲು, ಆನೆ, ತಟ್ಟಿರಾಯ, ಜೋಗಿ ಸಮಾಜ ಭಜನಾ ತಂಡ, ಕುಂಭಾಸಿ ಡೋಲು, ತಾಲೀಮು, ಜನತಾ ವ್ಯಾಯಾಮ ಶಾಲೆಯ ತಂಡ, ಟಿ.ಎಸ್‌. ಬ್ಯಾಂಡ್‌ ಸೆಟ್‌, ಕಟೀಲಿನ ತಟ್ಟಿರಾಯ, ನಾಸಿಕ್‌ ಬ್ಯಾಂಡ್‌, ಕೊಂಬು, ಹೋಳಿ ಕುಣಿತ, ಡೊಳ್ಳು ಕುಣಿತ, ಮೊಬೈಲ್‌ ಬ್ಯಾಂಡ್‌, ವೀರಗಾಸೆ, ಕರಗ ಕೋಲಾಟ, ಬೆಳ್ಕಳೆ ಚೆಂಡೆ ಬಳಗ, ಮಂಗಳೂರು ಬೊಂಬೆ ತಂಡ, ಬ್ಯಾಂಡ್‌ ಸೆಟ್‌, ಬ್ಯಾಂಡ್‌ ನಾಸಿಕ್‌, ಪೂಜಾ ಕುಣಿತ, ಡೊಳ್ಳು ಕುಣಿತ, ಯಕ್ಷಗಾನ ನೃತ್ಯ ಮತ್ತು ಚಂಡೆ, ಟ್ಯಾಬ್ಲೊ- ಹುಲಿ ಕುಣಿತ ಮತ್ತು ಬ್ಯಾಂಡ್‌ ಸೆಟ್‌, ಟ್ಯಾಬ್ಲೊ- ನವಿಲು ಕುಣಿತ ಮತ್ತು ಬ್ಯಾಂಡ್‌ ಸೆಟ್‌, ಟ್ಯಾಬ್ಲೊ- ಭೀಮ, ಟ್ಯಾಬ್ಲೋ- ಹರಿದ್ವಾರದ ಮುಖ್ಯಪ್ರಾಣ, ಗಜಾನನ ಚಂಡೆ, ಟ್ಯಾಬ್ಲೋ- ಮಧ್ವಾಚಾರ್ಯ, ಟ್ಯಾಬ್ಲೋ- ವಾದಿರಾಜರು, ಚಿಲಿಪಿಲಿ ಗೊಂಬೆ ಮತ್ತು ಬ್ಯಾಂಡ್‌ ಸೆಟ್‌, ಟ್ಯಾಬ್ಲೋ- ಶಮಂತಕ ಮಣಿ, ಟ್ಯಾಬ್ಲೋ- ಶ್ರೀಕೃಷ್ಣ ಪಾರಿಜಾತ, ಟ್ಯಾಬ್ಲೋ- ಸೀತಾರಾಮ ಲಕ್ಷ್ಮಣ ಹನುಮಂತ, ಟ್ಯಾಬ್ಲೋ-  ಶ್ರೀ ವಿದ್ಯಾಮಾನ್ಯರು ಪಲ್ಲಕ್ಕಿಯಲ್ಲಿ, ಟ್ಯಾಬ್ಲೋ- ಶಿಲ್ಪಾ ಗೊಂಬೆ ಬಳಗ, ಟ್ಯಾಬ್ಲೊ- ಯಕ್ಷಗಾನ, ಟ್ಯಾಬ್ಲೊ-ಅಖಂಡ ಭಜನೆ, ಅಲೆವೂರು ಚಂಡೆ ಬಳಗ, ಟ್ಯಾಬ್ಲೊ- ಶ್ರೀಕೃಷ್ಣ ಗರ್ಭಗುಡಿ ಚಿನ್ನದ ಮೇಲ್ಛಾವಣಿ, ಕೇರಳ ಚಂಡೆ, ಟ್ಯಾಬ್ಲೋ- ವಿಷ್ಣು ಸಹಸ್ರನಾಮ, ಟ್ಯಾಬ್ಲೋ- ತುಳಸಿ ಅರ್ಚನೆಯ ಬೆಳ್ಳಿ ರಥ, ಇಸ್ಕಾನ್‌ ಭಜನಾ ತಂಡ, ಪಂಚವಾದ್ಯ, ಗಣ್ಯರು, ಪಡುಬಿದ್ರಿ ಚೆಂಡೆ ಬಳಗ, ಮಠದ ವಾಲಗ, ನಡೆ ಚಪ್ಪರ, ಯೋಗದೀಪಿಕ ವಿದ್ಯಾರ್ಥಿಗಳ ಚೆಂಡೆ, ಸ್ಯಾಕೊÕàಫೋನ್‌, ಪರ್ಯಾಯ ಶ್ರೀ ಪಲಿಮಾರು ಶ್ರೀಪಾದರ ಪಲ್ಲಕ್ಕಿ, ಸ್ಯಾಕೊಫೋನ್‌, ಶ್ರೀ ಕೃಷ್ಣಾಪುರ ಶ್ರೀಪಾದರ ಪಲ್ಲಕ್ಕಿ, ಸ್ಯಾಕೊÕàಫೋನ್‌, ಶ್ರೀ ಶೀರೂರು ಶ್ರೀಪಾದರ ಪಲ್ಲಕ್ಕಿ, ಮಾರ್ಪಳ್ಳಿ ಚೆಂಡೆ ಬಳಗ, ಸ್ಯಾಕ್ಸೂಫೋನ್‌, ಶ್ರೀ ಕಾಣಿಯೂರು ಶ್ರೀಪಾದರ ಪಲ್ಲಕ್ಕಿ, ವಾಲಗ, ಶ್ರೀ ಸೋದೆ ಶ್ರೀಪಾದರ ಪಲ್ಲಕ್ಕಿ, ವಾಲಗ, ಅದಮಾರು ಕಿರಿಯ ಶ್ರೀಪಾದರ ಪಲ್ಲಕ್ಕಿ.

ಭಜನೆ ನಿನಾದ
ಸಂಜೆ ವೇಳೆ ಪಲಿಮಾರು ಶ್ರೀಪಾದರು ತಮ್ಮ ಪರ್ಯಾಯ ಪೀಠಾರೋಹಣಕ್ಕೆ ರಥಬೀದಿ ಯಲ್ಲಿರುವ ಅಷ್ಟಮಠಾಧೀಶರಿಗೆ ಆಹ್ವಾನವನ್ನು ನೀಡುತ್ತ ಬರುತ್ತಿದ್ದರೆ, ಇತ್ತ ನೂರಾರು ಮಂದಿ ಭಜನ ಮಂಡಳಿಗಳ ಸದಸ್ಯರು ತಮ್ಮ ಕುಣಿತ ಭಜನೆಯಿಂದ ಇಡೀ ರಥಬೀದಿ ಪರಿಸರವನ್ನು ಸಂಕೀರ್ತನ ಲೋಕಕ್ಕೆ ಸೆಳೆದರು.  ಜಿಲ್ಲಾ ಭಜನ ಮಂಡಳಿ ಗಳ ಒಕ್ಕೂಟದ ನೇತೃತ್ವದಲ್ಲಿ 30ಕ್ಕೂ ಅಧಿಕ ತಂಡಗಳು ಕುಣಿತ ಭಜನೆ ಸೇವೆ ಸಲ್ಲಿಸಿದವು. ಒಂದೊಂದು ತಂಡದಲ್ಲಿಯೂ 25-30 ಮಂದಿ ಇದ್ದರು. ಇವು ಮಕ್ಕಳು, ಮಹಿಳೆ ಯರು ಮತ್ತು ಪುರುಷರನ್ನು ಒಳಗೊಂಡ ತಂಡಗಳು. ರಥಬೀದಿಯ ಶ್ರೀ ಪರವಿದ್ಯಾ ಮಂಟಪ ದಲ್ಲಿ ಬೆಳಗ್ಗಿನಿಂದ ಸಂಜೆಯವರೆಗೂ ಭಜನೆ ನಿರಂತರವಾಗಿ ನೆರವೇರಿತು. 

ಅಖಂಡ ಭಜನೆ ಕಾರ್ಯಕ್ರಮ
ಶ್ರೀಗಳ ಸಂಕಲ್ಪವಾಗಿರುವ ಎರಡು ವರ್ಷಗಳ ಕಾಲ ಅಹೋರಾತ್ರಿ ಅಖಂಡ ವಾಗಿ ಕನಕನ ಕಿಂಡಿಯ ಪಕ್ಕದ ಮಂಟಪದಲ್ಲಿ ನಡೆಯಲಿರುವ ಭಜನ ಕಾರ್ಯಕ್ರಮಕ್ಕೆ ಪರ್ಯಾಯ ಪೀಠವೇರಲಿರುವ ಶ್ರೀಗಳು ಚಾಲನೆ ನೀಡಲಿದ್ದಾರೆ. ಮೊದಲ ದಿನದಿಂದ ಜ. 25ರ ವರೆಗೆ ತಿರುಪತಿಯ ದಾಸ ಸಾಹಿತ್ಯ ಪ್ರಾಜೆಕ್ಟ್‌ನ ಭಜನ ಮಂಡಳಿ ಸದಸ್ಯರಿಂದ ನಿರಂತರ ಭಜನೆ ಸೇವೆ ನಡೆಯಲಿದೆ.

ಅನಂತರ 25ರಿಂದ 28ರ  ವರೆಗೆ ಜಿಲ್ಲಾ ಭಜನ ಮಂಡಳಿಗಳ ಒಕ್ಕೂಟದ ನೇತೃತ್ವದಲ್ಲಿ ಭಜನೆ ನೆರ ವೇರಲಿದೆ. ಅನಂತರ ತಿರುಪತಿ ಮತ್ತು ಮಂತ್ರಾಲಯ ದಾಸ ಸಾಹಿತ್ಯ ಪ್ರಾಜೆಕ್ಟ್ ನಡಿ ನೋಂದಾಯಿತ ಹಾಗೂ ಜಿಲ್ಲಾ ಒಕ್ಕೂಟದ 2,000ಕ್ಕೂ ಅಧಿಕ ಭಜನ ತಂಡಗಳಿಂದ ನಿತ್ಯ ನಿರಂತರ ಭಜನೆ ನಡೆಯಲಿದೆ.

ಸಂತೋಷ್‌ ಬೊಳ್ಳೆಟ್ಟು

ಟಾಪ್ ನ್ಯೂಸ್

BJP Minority Morcha Leader Expelled

Usman Ghani: ಮೋದಿ ಹೇಳಿಕೆ ಟೀಕೆ ಮಾಡಿದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಉಚ್ಛಾಟನೆ

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4-annamalai

Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

Udupi; ಮಸ್ಟರಿಂಗ್‌ ಕೇಂದ್ರದಲ್ಲಿ ಸಕಲ ತಯಾರಿ

Udupi; ಮಸ್ಟರಿಂಗ್‌ ಕೇಂದ್ರದಲ್ಲಿ ಸಕಲ ತಯಾರಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

BJP Minority Morcha Leader Expelled

Usman Ghani: ಮೋದಿ ಹೇಳಿಕೆ ಟೀಕೆ ಮಾಡಿದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಉಚ್ಛಾಟನೆ

Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ

Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ

Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್

Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್

4-annamalai

Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.