ಕಾಪು ಬೀಚ್ ಪಾರ್ಕಿಂಗ್ ಏರಿಯಾದಲ್ಲಿ ಕಾಣಿಸಿಕೊಂಡ ಉಡ; ದಂಗಾದ ಜನತೆ
Team Udayavani, Sep 29, 2020, 8:00 PM IST
ಕಾಪು: ಮಂಗಳವಾರ ಮಧ್ಯಾಹ್ನ ಕಾಪು ಬೀಚ್ನ ಪಾರ್ಕಿಂಗ್ ಏರಿಯಾದಲ್ಲಿ ಉಡ (ಒಡು)ವೊಂದು ಅನಿರೀಕ್ಷಿತ ಎಂಬ ರೀತಿಯಲ್ಲಿ ಕಾಣಿಸಿಕೊಂಡಿದ್ದು, ಪಾರ್ಕಿಂಗ್ ಪ್ರದೇಶದ ಸುತ್ತೆಲ್ಲಾ ಸಂಚರಿಸಿ ಪಾರ್ಕಿಂಗ್ ಏರಿಯಾದ ಜನರನ್ನು ದಂಗಾಗುವಂತೆ ಮಾಡಿದೆ.
ಕಾಪು ಲೈಟ್ ಹೌಸ್ ನಿರ್ವಹಣಾ ಸಮಿತಿಯ ಸಿಬಂದಿ ಪ್ರಶಾಂತ್ ಕರ್ಕೇರ ಅವರು ಅರಣ್ಯ ಇಲಾಖೆಯ ಸಿಬಂದಿಗಳಿಗೆ ಮಾಹಿತಿ ನೀಡಿದ್ದು ಸ್ಥಳಕ್ಕೆ ಆಗಮಿಸಿದ ಅರಣ್ಯ ರಕ್ಷಕ ಮಂಜುನಾಥ್, ಅಭಿಲಾಷ್ ಅವರು ಸ್ಥಳೀಯರಾದ ಶಿವಾನಂದ ಪೂಜಾರಿ, ನಿತೇಶ್ ಕುಮಾರ್, ಚಂದ್ರಶೇಖರ ಬಂಗೇರ, ವಿನೋದ್ ಶ್ರೀಯಾನ್, ಗಣೇಶ್, ಮಹಮ್ಮದ್ ಇಕ್ಬಾಲ್ ಮೊದಲಾದವರ ಸಹಕಾರದೊಂದಿಗೆ ಉಡವನ್ನು ಸೆರೆ ಹಿಡಿಯಲಾಗಿದೆ.
ವಲಯ ಅರಣ್ಯಾಧಿಕಾರಿ ಕ್ಲಿಫರ್ಡ್ ಲೋಬೋ ಅವರ ಮಾರ್ಗದರ್ಶನದಲ್ಲಿ, ಕಾಪು ಉಪ ವಲಯ ಅರಣ್ಯಾಧಿಕಾರಿಗಳಾದ ಜೀವನ್ದಾಸ್ ಶೆಟ್ಟಿ, ಗುರುರಾಜ್ ಕೆ. ಅವರ ನೇತೃತ್ವದಲ್ಲಿ ಉಡವನ್ನು ವಶಕ್ಕೆ ಪಡೆದುಕೊಂಡು ಅರಣ್ಯ ಇಲಾಖೆಯ ಜೀಪಿನಲ್ಲಿ ಕೊಂಡೊಯ್ದು ಪಿಲಾರು ಅರಣ್ಯ ಪ್ರದೇಶದಲ್ಲಿ ಬಿಡಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ
Malpe Beach: ಈಜಲು ಹೋದ ಮೂವರು ಸಮುದ್ರಪಾಲು; ಓರ್ವನ ಸಾವು, ಇಬ್ಬರ ರಕ್ಷಣೆ
ಕೋತಲಕಟ್ಟೆ: ಹೆದ್ದಾರಿ ಬಳಿ ನಿಲ್ಲಿಸಿದ್ದ ಸ್ಕೂಟಿ ಕಳವು
Thekkatte ಶ್ರೀರಾಮ ಭಜನಾ ಮಂದಿರದಲ್ಲಿ ರಾಮನವಮಿ: ರಾವಣ ದಹನ ಮತ್ತು ಓಕುಳಿ ಉತ್ಸವ ಸಂಪನ್ನ
Manipal ಕೌಶಲ ಅಭಿವೃದ್ಧಿ ಕೇಂದ್ರ -ಭುವನೇಂದ್ರ ಕಾಲೇಜು ಒಡಂಬಡಿಕೆ