ತಂತ್ರಜ್ಞಾನದ ವೇಗದಲ್ಲಿ ಸುಳ್ಳು ಸುದ್ದಿಗಳ ವಿಜೃಂಭಣೆ
ಡಾ| ಎಂ.ವಿ. ಕಾಮತ್ ಸ್ಮರಣಾರ್ಥ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಉಪನ್ಯಾಸ
Team Udayavani, Dec 19, 2020, 6:25 AM IST
ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಮಾತನಾಡಿದರು.
ಉಡುಪಿ: ಆಧುನಿಕ ತಂತ್ರ ಜ್ಞಾನದ ವೇಗದ ನಡುವೆ ಸುಳ್ಳು ಸುದ್ದಿಗಳು ವಿಜೃಂಭಿಸುತ್ತಿವೆ. ದಿ| ಎಂ.ವಿ. ಕಾಮತ್ ಅವರನ್ನು ಸ್ಮರಿಸುತ್ತ ಮೌಲ್ಯಾ ಧಾರಿತ ಪತ್ರಿಕಾರಂಗಕ್ಕೆ ಮತ್ತೆ ಹೊರಳಬೇಕಾಗಿದೆ. ಪತ್ರಿಕಾರಂಗದ ಪಾವಿತ್ರ್ಯ ವನ್ನು ಪುನರ್ಸ್ಥಾಪಿಸಬೇಕಿದ್ದು ಸ್ವಯಂ ನಿಯಂತ್ರಣವನ್ನು ವಿಧಿಸಿಕೊಳ್ಳಬೇಕಿದೆ ಎಂದು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಮಾಧ್ಯಮ ರಂಗಕ್ಕೆ ಕರೆ ನೀಡಿದರು.
ಅವರು ಮಣಿಪಾಲದ ಡಾ| ಟಿಎಂಎ ಪೈ ಸಭಾಂಗಣದಲ್ಲಿ ಶುಕ್ರವಾರ ಉದಯವಾಣಿಯ ಮಾಧ್ಯಮ ಪಾಲುದಾರಿಕೆಯಲ್ಲಿ ಮಾಹೆಯ ಮಣಿಪಾಲ್ ಇನ್ಸ್ಟಿಟ್ಯೂಟ್ ಆಫ್ ಕಮ್ಯುನಿಕೇಶನ್ (ಎಂಐಸಿ) ವತಿಯಿಂದ ಆಯೋಜಿಸಲಾದ ಸಂಸ್ಥೆಯ ಸ್ಥಾಪಕ ಗೌರವ ನಿರ್ದೇಶಕ ಡಾ| ಎಂ.ವಿ. ಕಾಮತ್ ಸ್ಮರಣಾರ್ಥ ದತ್ತಿ ಉಪನ್ಯಾಸವನ್ನು “ಪತ್ರಿಕಾ ರಂಗ: ನಿನ್ನೆ, ಇಂದು ಮತ್ತು ಮುಂದೆ’ ವಿಷಯದ ಕುರಿತು ವರ್ಚುವಲ್ ವಿಧಾನದಲ್ಲಿ ನಡೆಸಿಕೊಟ್ಟರು.
ಪತ್ರಿಕಾ ಸ್ವಾತಂತ್ರ್ಯ, ಸೆನ್ಸಾರ್ಶಿಪ್, ವರದಿಗಾರಿಕೆ ಕ್ರಮ, ಸಾಮಾಜಿಕ ಹೊಣೆ ಗಾರಿಕೆ, ಮೌಲ್ಯಗಳ ಕುಸಿತ, ನೈತಿಕತೆ, ಪೀತ ಪತ್ರಿಕೋದ್ಯಮ, ಸುಳ್ಳು ಸುದ್ದಿ, ಲಾಭಕ್ಕಾಗಿ ವರದಿಗಾರಿಕೆ, ಇಂಟರ್ನೆಟ್ನಿಂದ ಆಗುತ್ತಿರುವ ತೊಂದರೆ ಇವು ಮಾಧ್ಯಮ ಮತ್ತು ಪತ್ರಿಕಾರಂಗ ಎದುರಿಸುತ್ತಿರುವ ಸವಾಲುಗಳಾಗಿವೆ. ಪೀತ ಪತ್ರಿಕೋದ್ಯಮವು ಉತ್ತಮ ಆಕರ್ಷಕ ಶೀರ್ಷಿಕೆಗಳಿಂದ ಕೂಡಿ ತಪ್ಪು ಮಾಹಿತಿಯನ್ನು ಕೊಡುತ್ತಿವೆ. ಇತ್ತೀಚೆಗೆ ಚಲನಚಿತ್ರ ನಟರೊಬ್ಬರ ಆತ್ಮಹತ್ಯೆಯ ಸುದ್ದಿಯನ್ನು ವೈಭವೀಕರಿಸಲಾಯಿತು. ಇವೆಲ್ಲವೂ ಓದುಗರನ್ನು ಹೆಚ್ಚಿಸಿಕೊಳ್ಳಲು ಮಾಡುತ್ತಿರುವ ತಂತ್ರಗಳಾಗಿದ್ದು ಇವುಗಳನ್ನು ತಡೆಹಿಡಿಯಬೇಕಾಗಿದೆ ಎಂದು ಆಶಿಸಿದರು.
ಮಣಿಪಾಲ ಮಾಹೆ ವಿ.ವಿ. ಸಹಕುಲಾಧಿಪತಿ ಡಾ| ಎಚ್.ಎಸ್.ಬಲ್ಲಾಳ್ ಮಾತನಾಡಿದರು. ಎಂಐಸಿ ನಿರ್ದೇಶಕಿ ಡಾ| ಪದ್ಮಾರಾಣಿ ಸ್ವಾಗತಿಸಿದರು. ಉಪನ್ಯಾಸಕರಾದ ಶ್ರುತಿ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿ ಅನುಪಾ ಲುವಿಸ್ ವಂದಿಸಿದರು. ಮಂಜುಳಾ ವೆಂಕಟನಾರಾಯಣ ಪರಿಚಯಿಸಿದರು.
ನ್ಯೂಸ್- ವ್ಯೂಸ್!
ಮಾಧ್ಯಮ ಮಿತ್ರರು ಸುದ್ದಿ ಮತ್ತು ಅಭಿಪ್ರಾಯಗಳ (ನ್ಯೂಸ್ಮತ್ತು ವ್ಯೂಸ್) ನಡುವೆ ಲಕ್ಷ್ಮಣ ರೇಖೆಯನ್ನು ಹಾಕಿಕೊಂಡಿರ ಬೇಕು. ದಿ| ಎಂ.ವಿ. ಕಾಮತ್ ಅವರೂ ಈ ಅಂತರ ಕಾಯ್ದು ಕೊಂಡಿದ್ದರು. ತಮ್ಮ ನೀತಿ ಮತ್ತು ಜೀವನ ಶೈಲಿಯಿಂದಾಗಿ ದೇಶ ಮತ್ತು ವಿದೇಶಗಳಲ್ಲೂ ಅವರು ಗೌರವಕ್ಕೆ ಪಾತ್ರರಾಗಿದ್ದರು ಎಂದು ನಾಯ್ಡು ಬಣ್ಣಿಸಿದರು.
ಜಂಕ್ ಫುಡ್ಗೆ ಬರೆ, ಯೋಗಕ್ಕೆ ಕರೆ
ಪ್ರಕೃತಿ ಮತ್ತು ಸಂಸ್ಕೃತಿ, ಮೌಲ್ಯ ಮತ್ತು ನೈತಿಕತೆಯನ್ನು ಪೋಷಿಸಬೇಕು. ದೈಹಿಕ ಕ್ಷಮತೆಗಾಗಿ ನಿತ್ಯ ಯೋಗ ಮಾಡಬೇಕು. ಜಂಕ್-ಇನ್ಸ್ಟಂಟ್ ಫುಡ್ಗಳನ್ನು ತ್ಯಜಿಸಿ ಉತ್ತಮ ಆಹಾರ ಸ್ವೀಕರಿಸಬೇಕು ಎಂದರು.
ಸಾಮಾಜಿಕ ಮಾಧ್ಯಮಗಳ ಆದಾಯದಲ್ಲಿ ಮುದ್ರಣಕ್ಕೂ ಪಾಲಿರಲಿ
ವೃತ್ತಪತ್ರಿಕೆಗಳಂತಹ ಸಾಂಪ್ರದಾಯಿಕ ಮಾಧ್ಯಮಗಳ ಆದಾಯವನ್ನು ಸಾಮಾಜಿಕ ಮಾಧ್ಯಮಗಳ ಕಂಪೆನಿಗಳು ಕಿತ್ತುಕೊಳ್ಳುತ್ತಿವೆ. ಹಾಗಾಗಿ ಕೆಲವು ರಾಷ್ಟ್ರಗಳಲ್ಲಿ ಇರುವಂತೆ ಸಾಮಾಜಿಕ ಮಾಧ್ಯಮಗಳ ಆದಾಯದಲ್ಲಿ ಮುದ್ರಣ ಮಾಧ್ಯಮಗಳಿಗೂ ಪಾಲು ದೊರಕುವಂಥ ನಿಯಮವನ್ನು ನಮ್ಮಲ್ಲೂ ಜಾರಿತರಬೇಕೆಂದು ವೆಂಕಯ್ಯ ನಾಯ್ಡು ಅಭಿಪ್ರಾಯಪಟ್ಟರು.
ಕಾಫಿ ಇಲ್ಲದೆ ಪತ್ರಿಕೆ ಓದುತ್ತೇನೆ!
ಇಂಟರ್ನೆಟ್ನ ಈ ಕಾಲಘಟ್ಟದಲ್ಲಿಯೂ ಕಾಫಿಯ ಸೇವನೆ ಜತೆ ವೃತ್ತಪತ್ರಿಕೆ ಓದನ್ನು ಲಕ್ಷಾಂತರ ಜನರು ಮುಂದುವರಿಸುತ್ತಿದ್ದಾರೆ. “ನಾನೂ ಕೂಡ ಮುಂಜಾನೆ ಪತ್ರಿಕೆಗಳನ್ನು ಓದುತ್ತೇನೆ, ಆದರೆ ಕಾಫಿ ಇಲ್ಲದೆ’ ಎಂದು ನಾಯ್ಡು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kundapura: ಕಳಚಿದ ಕೊಂಡಿ: ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ
Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ
Daily Horoscope: ಉದ್ಯೋಗದಲ್ಲಿ ಮೇಲಧಿಕಾರಿಗಳಿಗೆ ತೃಪ್ತಿ, ಅಪೇಕ್ಷಿತ ಆರ್ಥಿಕ ನೆರವು ಲಭ್ಯ
Modi ಹಸಿ ಸುಳ್ಳು: ಸಿಎಂ ಸಿದ್ದರಾಮಯ್ಯ ಕೆಂಡ; ಒಬಿಸಿ, ಎಸ್ಸಿ ಮೀಸಲಾತಿ ಹೇಳಿಕೆಗೆ ವಿರೋಧ
Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ