ಮಲ್ಪೆ ಮುಖ್ಯ ರಸ್ತೆ; ಮಣ್ಣು ಸಾಗಾಟ: ಪರಿಸರ ಧೂಳುಮಯ…!
Team Udayavani, Sep 6, 2022, 12:22 PM IST
ಮಲ್ಪೆ: ಮಲ್ಪೆ ಮಣ್ಣು ಸಾಗಾಟದ ಲಾರಿ ಮಣ್ಣನ್ನು ರಸ್ತೆಯಲ್ಲಿ ಚೆಲುತ್ತಾ ಸಾಗುವುದರಿಂದ ಮುಖ್ಯ ರಸ್ತೆಯ ಪರಿಸರವಿಡೀ ಕಳೆದೊಂದು ವಾರದಿಂದ ಧೂಳುಮಯವಾಗಿದೆ.
ದಿನವಿಡೀ ಲಾರಿಗಳಲ್ಲಿ ಕೆಂಪು ಮಣ್ಣನ್ನು ಸಾಗಿಸಲಾಗುತ್ತಿದೆ. ಆದರೆ ಮಣ್ಣಿಗೆ ಯಾವುದೇ ಮುಚ್ಚಿಗೆ ವ್ಯವಸ್ಥೆ ಮಾಡದ ಕಾರಣ ಲಾರಿಗಳು ಮಣ್ಣನ್ನು ಚೆಲ್ಲುತ್ತಿದ್ದು ರಸ್ತೆಯುದ್ದಕ್ಕೂ ಇತರ ವಾಹನಗಳು ಸಂಚರಿಸುವ ಪರಿಸರ ಧೂಳು ಮಯವಾಗುತ್ತಿದೆ ಎಂದು ಸ್ಥಳೀಯರು ಆರೋಪಿಸುತ್ತಾರೆ.
ಮಲ್ಪೆ ಬಂದರಿನಿಂದ ಮಣ್ಣು ಸಾಗಾಟವಾಗುತ್ತಿರುವುದು ಧೂಳಿಗೆ ಕಾರಣವಾಗಿದೆ ಎನ್ನಲಾಗಿದೆ. ವಾಣಿಜ್ಯ ಕೇಂದ್ರವಾದ ಮಲ್ಪೆಯ ಈ ರಸ್ತೆಯಲ್ಲಿ ದಿನನಿತ್ಯ ಸಾವಿರಾರು ವಾಹನಗಳು ಓಡಾಡುತ್ತಿವೆ. ಬಸ್ಸು ಅಥವಾ ಲಾರಿಯಂತಹ ದೊಡ್ಡ ವಾಹನಗಳು ಒಮ್ಮೆ ಹಾದು ಹೋದರೆ ರಸ್ತೆ ಧೂಳಿನಿಂದ ಕಾಣದಂತಾಗುತ್ತದೆ. ರಸ್ತೆ ಬದಿಯಲ್ಲಿರುವ ಅಂಗಡಿಯವರಿಗೆ ಹೆಚ್ಚಿನ ಸಮಸ್ಯೆಯಾಗುತ್ತಿದೆ. ಶಾಲಾ ಮಕ್ಕಳು ಸಾರ್ವಜನಿಕರು, ಪಾದಚಾರಿಗಳು ವಾಹನ ಬಂದರೆ ಮೂಗು ಮುಚ್ಚಿ ತಿರುಗಾಡುವಂತಾಗಿದೆ. ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಎಲ್ಲ ಲಕ್ಷಣಗಳಿವೆ. ಸೂಕ್ತ ಪರಿಹಾರವನ್ನು ಒದಗಿಸಬೇಕು ಎಂದು ಜನರು ಆಗ್ರಹಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ