ಕೋವಿಡ್ ನಡುವೆ ಎದೆಗುಂದದಿರುವುದೇ ಜೀವನ

ಸಮಸ್ಯೆ ಪರಿಹಾರಕ್ಕಿದೆ ಹಲವು ಮಾರ್ಗ ಆತ್ಮಹತ್ಯೆಯಿಂದ ಮತ್ತಷ್ಟು ಸಂಕಟ

Team Udayavani, Aug 19, 2020, 6:05 AM IST

ಕೋವಿಡ್ ನಡುವೆ ಎದೆಗುಂದದಿರುವುದೇ ಜೀವನ

ಸಾಂದರ್ಭಿಕ ಚಿತ್ರ

ಉಡುಪಿ/ ಮಂಗಳೂರು: ಕೋವಿಡ್‌-19 ಸೋಂಕು ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ಆತ್ಮಹತ್ಯೆ ಪ್ರಕರಣಗಳೂ ಹೆಚ್ಚುತ್ತಿವೆ. ಸಮಸ್ಯೆ ಪರಿಹಾರಕ್ಕೆ ಆತ್ಮಹತ್ಯೆ ಮಾರ್ಗವಲ್ಲ; ಅದು ಮತ್ತಷ್ಟು ಸಮಸ್ಯೆಗಳಿಗೆ ಮೂಲವಾಗುತ್ತಿದೆ. ಐದು ತಿಂಗಳಲ್ಲಿ ಕರಾವಳಿಯಲ್ಲಿ 340ಕ್ಕೂ ಅಧಿಕ ಮಂದಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಲಾಕ್‌ಡೌನ್‌ ಅವಧಿಯಲ್ಲಿ ವಿವಿಧ ಕಾರಣ ಗಳಿಂದಾಗಿ ಜನರು ಕೆಲವೊಂದು ಸಮಸ್ಯೆಗಳ ಸುಳಿಯಲ್ಲಿರುವುದು ಕೂಡ ಆತ್ಮಹತ್ಯೆಗೆ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.

ಹಲವು ಕಾರಣ
ಲಾಕ್‌ಡೌನ್‌ಗಿಂತ ಮೊದಲು ಆತ್ಮಹತ್ಯೆ ಪ್ರಕರಣ ಕಡಿಮೆಯಿತ್ತು. ಸಡಿಲಿಕೆ ಅನಂತರ ಅಧಿಕವಾಗುತ್ತಿದೆ. ಖನ್ನತೆ, ಆರ್ಥಿಕ ಮುಗ್ಗಟ್ಟು, ಉದ್ಯೋಗ ನಷ್ಟ, ಮದ್ಯ ವ್ಯಸನ, ಕೋವಿಡ್‌ ಸೋಂಕಿನ ಭಯ, ಕೌಟುಂಬಿಕ ಕಲಹ, ದೀರ್ಘ‌ಕಾಲದ ಅನಾರೋಗ್ಯ, ವಿಪರೀತ ಒತ್ತಡ,
ದುಃಖದ ಮನೋಭಾವ, ಮಾದಕ ದ್ರವ್ಯ ವ್ಯಸನ ಇತ್ಯಾದಿ ಆತ್ಮಹತ್ಯೆಗೆ ಮೂಲ ಕಾರಣ ಎನ್ನಲಾಗುತ್ತಿದೆ. 15ರಿಂದ 29 ಹಾಗೂ 35ರಿಂದ 50 ವರ್ಷದವರು ಅತಿಯಾಗಿ ಈ ಸಮಸ್ಯೆ ಎದುರಿಸುತ್ತಿದ್ದಾರೆ.

ಪರಿಹಾರಕ್ಕಿದೆ ಹಲವು ಮಾರ್ಗ
ಇಂತಹ ಕಾಯಿಲೆಗಳು ಕಂಡು ಬಂದ ತತ್‌ಕ್ಷಣ ಮನೋವೈದ್ಯರ ಚಿಕಿತ್ಸೆ ಪಡೆಯುವುದು ಅತೀ ಅಗತ್ಯ. ಗೆಳೆಯರ ಧನಾತ್ಮಕ ಮಾತುಗಳೂ ಜೀವ ಉಳಿಸಲು ಸಹಕಾರಿ. ಹೊಸ ಆಲೋಚನೆಗಳು, ಯೋಗ, ಧ್ಯಾನ, ಪೈಂಟಿಂಗ್‌, ಅಡುಗೆ, ಕ್ರಾಫ್ಟ್, ಪುಸ್ತಕಗಳ ಓದು,
ಆನ್‌ಲೈನ್‌ ತರಗತಿಗಳಲ್ಲಿ ಭಾಗಿಗಳಾಗುವುದರಿಂದ ನಮ್ಮಲ್ಲಿರುವ ತಪ್ಪು ಕಲ್ಪನೆಗಳನ್ನು ದೂರ ಮಾಡ ಬಹುದಾಗಿದೆ.

ಮೊಬೈಲ್‌ ವ್ಯಸನ ಬೇಡ
ಲಾಕ್‌ಡೌನ್‌ ಅವಧಿಯಲ್ಲಿ ಅತಿ ಯಾದ ಮೊಬೈಲ್‌ ಬಳಕೆ, ಟಿವಿ ವೀಕ್ಷಣೆಯನ್ನು ಆದಷ್ಟು ದೂರ ಮಾಡಿ ದರೆ ಒಳಿತು. ಇದಕ್ಕಾಗಿ ವೇಳಾಪಟ್ಟಿ ಸಿದ್ಧಪಡಿಸಿಕೊಂಡರೆ ಉತ್ತಮ. ಮೊಬೈಲ್‌ ಇಲ್ಲದೆ ದಿನಕಳೆಯುವ ಹವ್ಯಾಸವೂ ಉತ್ತಮ ಎನ್ನುತ್ತಾರೆ ಮಾನಸಿಕ ತಜ್ಞರು.

ಉಡುಪಿ ಜಿಲ್ಲೆ: 105 ಪ್ರಕರಣ
ಉಡುಪಿ ಜಿಲ್ಲೆಯಲ್ಲಿ ಮಾರ್ಚ್‌ನಲ್ಲಿ 10, ಎಪ್ರಿಲ್‌ನಲ್ಲಿ 17, ಮೇಯಲ್ಲಿ 25, ಜೂನ್‌ನಲ್ಲಿ 28, ಜುಲೈಯಿಂದ ಆಗಸ್ಟ್‌ 15ರ ವರೆಗೆ 25 ಸೇರಿದಂತೆ ಒಟ್ಟು 105 ಆತ್ಮಹತ್ಯೆ ಪ್ರಕರಣಗಳು ದಾಖಲಾಗಿವೆ.

ವಿವರ
ಮಲ್ಪೆ, ಕುಂದಾಪುರ, ಕೋಟ ಠಾಣೆಗಳಲ್ಲಿ ಗರಿಷ್ಠ ತಲಾ 12ಪ್ರಕರಣಗಳು, ಅಮಾಸೆಬೈಲು ಠಾಣೆಯಲ್ಲಿ 8, ಉಡುಪಿ, ಬೈಂದೂರು, ಕಾರ್ಕಳದಲ್ಲಿ ತಲಾ 5, ಶಂಕರನಾರಾಯಣ, ಹಿರಿಯಡ್ಕ ಠಾಣೆಗಳಲ್ಲಿ ತಲಾ 6, ಗಂಗೊಳ್ಳಿ, ಮಣಿಪಾಲ, ಕಾಪು, ಪಡುಬಿದ್ರಿಗಳಲ್ಲಿ ತಲಾ 5, ಕೊಲ್ಲೂರು, ಶಿರ್ವದಲ್ಲಿ ತಲಾ 4, ಅಜೆಕಾರು, ಹೆಬ್ರಿ ಮತ್ತು ಬ್ರಹ್ಮಾವರ ಠಾಣೆಗಳಲ್ಲಿ ತಲಾ 2 ಪ್ರಕರಣಗಳು ದಾಖಲಾಗಿವೆ.

ದ.ಕ. ಜಿಲ್ಲೆ : 238 ಪ್ರಕರಣ
ದ.ಕ. ಜಿಲ್ಲಾ ಪೊಲೀಸ್‌ ವ್ಯಾಪ್ತಿಯಲ್ಲಿ ಮಾರ್ಚ್‌ನಲ್ಲಿ 30, ಎಪ್ರಿಲ್‌ನಲ್ಲಿ 13, ಮೇಯಲ್ಲಿ 22, ಜೂನ್‌ನಲ್ಲಿ 18, ಜುಲೈಯಲ್ಲಿ 20 ಸೇರಿದಂತೆ ಒಟ್ಟು 103 ಆತ್ಮಹತ್ಯೆ ಪ್ರಕರಣಗಳು ದಾಖಲಾಗಿವೆ. ಮಂಗಳೂರು ನಗರ ಪೊಲೀಸ್‌ ಕಮಿಷನರೆಟ್‌ ವ್ಯಾಪ್ತಿಯ ಠಾಣೆಗಳಲ್ಲಿ ಮಾ. 1ರಿಂದ ಜುಲೈ 31ರ ವರೆಗೆ 135 ಪ್ರಕರಣಗಳಿವೆ.

ವಿವರ
ಬಂಟ್ವಾಳ ನಗರ ಮತ್ತು ಬೆಳ್ತಂಗಡಿ – ತಲಾ 7, ಬೆಳ್ಳಾರೆ – 6, ಬಂಟ್ವಾಳ ಗ್ರಾಮಾಂತರ – 11 ಉಪ್ಪಿನಂಗಡಿ ಮತ್ತು ವಿಟ್ಲ – ತಲಾ 10, ಕಡಬ – 9, ಪುತ್ತೂರು ಗ್ರಾಮಾಂತರ – 8, ವೇಣೂರು – 3 ಸುಬ್ರಹ್ಮಣ್ಯ – 4, ಪುಂಜಾಲಕಟ್ಟೆ  -2, ಧರ್ಮಸ್ಥಳ -13, ಪುತ್ತೂರು ನಗರ – 9, ಸುಳ್ಯ – 5 ಪ್ರಕರಣಗಳು ದಾಖಲಾಗಿವೆ.

ಸಮಾಧಾನದ ಮಾತುಗಳೇ ಶ್ರೀರಕ್ಷೆ
ಖನ್ನತೆ ಎಂಬುದು ಮಾನಸಿಕ ಕಾಯಿಲೆ. ಅಪ್ತಸಮಾಲೋಚನೆ ಸಹಿತ ಇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ನಿವಾರಿಸುವಂಥದ್ದು. ವಿಪರೀತ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಗೆಳೆಯರ ಸಾಂತ್ವನದ ನುಡಿಗಳೇ ಶ್ರೀರಕ್ಷೆಯಾಗುತ್ತವೆೆ. ಸಮಸ್ಯೆಗೆ ಆತ್ಮಹತ್ಯೆಯೇ ಪರಿಹಾರವಲ್ಲ ಎಂಬುದನ್ನು ಎಲ್ಲರೂ ಅರ್ಥೈಸಿಕೊಳ್ಳಬೇಕು.
– ಡಾ| ಮಾನಸ್‌ ಇ.ಆರ್‌. ಮಾನಸಿಕ ತಜ್ಞರು, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

15-udupi

Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ

4-annamalai

Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.